ನಾಯಿ ನಿಯತ್ತಿನ ಪ್ರಾಣಿ, ಒಂದು ತುತ್ತು ಅನ್ನ ಹಾಕಿದರೆ ಅದು ಜೀವನ ಪರಿಯಂತ ನಿಯತ್ತಿನಲ್ಲಿ ಇರುತ್ತೆ.
ನಿಯತ್ತು ಇಲ್ಲದೇ ಇರುವವರು ಕಾಂಗ್ರೆಸ್ ನವರು.
ಉಂಡು ಮನೆಗೆ ದ್ರೋಹ ಬಗೆಯುವವರು ಯಾರು ಎಂದು ಸಿದ್ದರಾಮಯ್ಯ ನವರಿಗೆ ಚೆನ್ನಾಗಿ ಗೊತ್ತಿದೆ
ಜನತಾದಳದಲ್ಲಿ ಇದ್ದು ಅದಕ್ಕೆ ದ್ರೋಹ ಬಗೆದವರು ಯಾರು.
ಪರಮೇಶ್ವರ್ ಎಲ್ಲಿ ಮುಖ್ಯಮಂತ್ರಿ ಆಗಿ ಬಿಡುತ್ತಾರೆ ಎಂದು ಅವರನ್ನು ಸೋಲಿಸಿದವರು ಯಾರು.
ಅನ್ನೊದನ್ನು ಸಿದ್ದರಾಮಯ್ಯ ನವರು ತಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ.
ಆಗ ನಿಯತ್ತು ಯಾರಿಗೆ ಇದೆ ಯಾರಿಗೆ ಇಲ್ಲ ಎಂಬುದು ಬಹಳ ಸ್ಪಷ್ಟವಾಗುತ್ತೆ.
ತನಗೆ ಅಧಿಕಾರ ಇದ್ದರೆ ಎಲ್ಲವೂ ಸರಿ, ಇಲ್ಲದಿದ್ದರೆ ನನ್ನದು ಬಂಡಾಯ ಎಂಬ ಮನಸ್ಥಿತಿಯನ್ನು ನಿಯತ್ತಿಗೆ ಹೋಲಿಕೆ ಮಾಡಲು ಆಗುವುದಿಲ್ಲ.
ದೇಶ ಕಾಯುವ ಜನ, ರಾಜ್ಯದ ಹಿತ ಕಾಯುವ ಜನರನ್ನು ನಾಯಿಗೆ ಹೋಲಿಸಿದರೆ ಅದನ್ನು ನಾವು ಸ್ವೀಕಾರ ಮಾಡುತ್ತೇವೆ.
ಅತೀ ಹೆಚ್ಚು ರೈಲ್ವೆಗೆ ಹಣ ಕೊಟ್ಟಿದ್ದು, ಅತೀ ಹೆಚ್ಚು ನ್ಯಾಷನಲ್ ಹೈವೆಗೆ ಹಣ ಕೊಟ್ಟಿದ್ದು, ಅದು ಕೇಂದ್ರದಲ್ಲಿ ಇರುವ ನರೇಂದ್ರ ಮೋದಿಯವರ ಸರಕಾರ.
ಕರ್ನಾಟಕಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟಿರುವುದು ಬಿಜೆಪಿ ಸರಕಾರ.
ರಾಜ್ಯದ, ದೇಶದ ಹಿತಾಸಕ್ತಿ ಬಂದಾಗ ನಾವೆಲ್ಲಾ ರಾಜಾಹುಲಿಗಳೇ.
ದೇಶ ಕಾಯುವ ವಿಷಯ ಬಂದಾಗ ನಾವೆಲ್ಲಾ ನಿಯತ್ತಿನ ನಾಯಿಗಳೇ.
ದೇವನಹಳ್ಳಿಯಲ್ಲಿ ಸಿಟಿ ರವಿ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada