ಸಿ.ಎಂ.ಇಬ್ರಾಹಿಂ ಒಬ್ಬ ಉತ್ತಮ ವಾಗ್ಮಿ, ಹಿರಿಯ ಮುಖಂಡ, ಅವರು ರಾಜೀನಾಮೆ ನೀಡಿ ಏನು ಮಾಡ್ಯಾರು ಎನ್ನುವ ಕಾಂಗ್ರೆಸ್ಸಿಗರ ಲೆಕ್ಕಾಚಾರ ದಿನದಿಂದ ದಿನಕ್ಕೆ ಉಲ್ಟಾ ಹೊಡೆಯುತ್ತಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ತಪ್ಪಿದ ನಂತರ ಇಬ್ರಾಹಿಂ ಅವರು ಇಡುತ್ತಿರುವ ರಾಜಕೀಯ ಹೆಜ್ಜೆಗೆ ಕೈ ನಲುಗಲು ಆರಂಭಿಸಿದೆ.ಪ್ರೇಮಿಗಳ ದಿನವಾದ ಫೆಬ್ರವರಿ ಹದಿನಾಲ್ಕರಂದು ತಮ್ಮ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡುವುದಾಗಿ ಹೇಳಿರುವ ಇಬ್ರಾಹಿಂ, ತಾವು ಪಕ್ಷಕ್ಕೆ ಸೇರುತ್ತಾರೆ ಎನ್ನುವುದರ ಬಗ್ಗೆ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ.ಮೊದಮೊದಲು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಬಹುದು ಎನ್ನುವ ಲೆಕ್ಕಾಚಾರವಿತ್ತು. ಅವರು ರಾಜೀನಾಮೆ ಘೋಷಿಸುವುದಾಗಿ ಪ್ರಕಟಿಸಿದ ದಿನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅವರನ್ನು ಭೇಟಿಯಾಗಿದ್ದರು. ಆದರೆ, ಇಬ್ರಾಹಿಂ ತಮ್ಮ ಮುಂದೆ ಮೂರು ಪಕ್ಷಗಳ ಪೈಕಿ ಯಾವುದಾದರೂ ಒಂದು ಪಕ್ಷ ಸೇರುವ ಆಯ್ಕೆಯಿದೆ ಎಂದು ಹೇಳಿದ್ದರು.ಆದರೆ, ಕೆಲವು ದಿನಗಳಿಂದ ಇಬ್ರಾಹಿಂ ಇಡುತ್ತಿರುವ ರಾಜಕೀಯ ಹೆಜ್ಜೆಗಳು, ರಾಜ್ಯ ಪ್ರವಾಸ, ಭೇಟಿಯಾಗುತ್ತಿರುವ ರಾಜಕೀಯ ಮತ್ತು ಧಾರ್ಮಿಕ ಮುಖಂಡರ ಭೇಟಿಯನ್ನು ಅವಲೋಕಿಸಿದರೆ, ಕಾಂಗ್ರೆಸ್ಸಿಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಆಘಾತವನ್ನು ನೀಡುವ ಸಾಧ್ಯತೆಯಿಲ್ಲದಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada