ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್​​

ರಾಜ್ಯದ ಮೂರು ಉಪಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್​ ಇದೀಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಬಸವಕಲ್ಯಾಣ, ಮಸ್ಕಿ, ತುರವಿಹಾಳ್​ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆಯನ್ನು ಮಾತ್ರ ಪ್ರಕಟಗೊಳಿಸಿಲ್ಲ. ಬಸವಕಲ್ಯಾಣದಿಂದ ಮಾಜಿ ಶಾಸಕ ನಾರಾಯಣ ರಾವ್​ ಹೆಂಡತಿ ಮಲ್ಲಮ್ಮ, ಸಿಂದಗಿ ಕ್ಷೇತ್ರದಿಂದ ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಪಕ್ಷ ಸೇರ್ಪಡನೆಗೊಂಡ  ಅಶೋಕ್​ ಮನಗೂಳಿ, ಮಸ್ಕಿಯಿಂದ ಬಸವನಗೌಡ ತುರವಿಹಾಳ್ ಅವರಿಗೆ ಟಿಕಟ್​ ಘೋಷಣೆ ಮಾಡಲಾಗಿದೆ.

* ಬಸವಕಲ್ಯಾಣ- ಶ್ರೀಮತಿ ಮಲ್ಲಮ್ಮ (ದಿ.ನಾರಾಯಾಣ್ ರಾವ್ ಪತ್ನಿ

 

 

ಈ ಉಪಚುನಾವಣೆ ಬಿಜೆಪಿ ಕಾಂಗ್ರೆಸ್​ ನಡುವಿನ ನೇರಾ ಹಣಾಹಣಿಯಾಗಲಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್​ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎನ್ನಲಾಗಿತ್ತು. ಆದರೆ, ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ಲಘುವಾಗಿ ಪರಿಗಣಿಸಿಲ್ಲ. ಯಾರ ಜತೆಯೂ ಹೊಂದಾಣಿಕೆ ಇಲ್ಲ ಎಂದರು ಅಲ್ಲದೇ, ಬಸವ ಕಲ್ಯಾಣ ಕ್ಷೇತ್ರದಿಂದ ಸಯ್ಯದ್ ಹಸರತ್ ಅಲಿಖಾನ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಘೋಷಿಸಿದ್ದಾರೆ.ಬಿಜೆಪಿಯಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಕೋರ್​​ ಕಮಿಟಿಯು ಅಭ್ಯರ್ಥಿಗಳ ಬಗ್ಗೆ ತೀರ್ಮಾನಿಸಿದ ಬಳಿಕ ಈ ಹೆಸರನ್ನು ಹೈ ಕಮಾಂಡ್​ಗೆ ಕಳುಹಿಸಲಾಗುವುದು. ಬಳಿಕ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದೆ.

ಮಾರ್ಚ್​ 23 ರಂದು ಅಧಿಸೂಚನೆ ಹೊರಡಿಸಿ, ಮಾರ್ಚ 30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಾರ್ಚ್ 31ಕ್ಕೆ ನಾಮಪತ್ರ ಪರಿಶೀಲನೆ ಮಾಡಲಾಗುವುದು. ಏಪ್ರಿಲ್​ 3ರಂದು ನಾಮಪತ್ರ ವಾಪಸ್​ಗೆ ಕೊನೆ ದಿನವಾಗಿದೆ, ಏಪ್ರಿಲ್​ 17ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಡಾ.ಕೆ.ಸುಧಾಕರ್ ಮನೆ ಮುಂದೆ ಗನ್ಮ್ಯಾನ್ - ಚಾಲಕ ಕಿತ್ತಾಟ |

Fri Mar 19 , 2021
ಸಚಿವ ಡಾ.ಕೆ.ಸುಧಾಕರ್ ಮನೆ ಎದುರು ಮಾರಾಮಾರಿ. ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್. ಗನ್‌ಮ್ಯಾನ್ ತಿಮ್ಮಯ್ಯ ಮಧ್ಯೆ ಪರಸ್ಪರ ಮಾರಾಮಾರಿ. ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಇಬ್ಬರು. ಬಟ್ಟೆ ಕಿತ್ತು ಬರುವಂತೆ ಕಿತ್ತಾಡಿಕೊಂಡ ಸಿಬ್ಬಂದಿ. ರಸ್ತೆಯಲ್ಲಿ ಬಿದ್ದು ಹೊಡೆದಾಡಿಕೊಂಡ ಸಿಬ್ಬಂದಿ Please follow and like us:

Advertisement

Wordpress Social Share Plugin powered by Ultimatelysocial