ರಾಜ್ಯದೆಲ್ಲೆಡೆ ಕೊರೊನಾ ರೂಪಾಂತರಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇದರ ನಡುವೆಯೇ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಿಂದ ಓಂ ಶಕ್ತಿ ದೇವಸ್ಥಾನಕ್ಕೆ ಹೊರಟಿರುವ ಜನರ ಸಂಖ್ಯೇ ದಿನೆ ದಿನೆ ಹೆಚ್ಚಾಗುತ್ತಿದ್ದು ಕೊರೊನಾ ಮತ್ತಷ್ಟು ಹರಡುವ ಆತಂಕ ಹೆಚ್ಚಾಗಿದೆ.. ಹೀಗಾಗಲೇ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಬಂದ 30 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್… ಬಂದಿದ್ದು ಹಾಗೆಯೇ ನಿನ್ನೆಯಷ್ಟೇ ಓಂ ಶಕ್ತಿ ದೇವಸ್ಥಾನದಿಂದ ಮಳವಳ್ಳಿಗೆ 200 ಜನರು… ಮದ್ದೂರಿಗೆ 50 ಜನ, ಶ್ರೀರಂಗಪಟ್ಟಣಕ್ಕೆ 110 ಜನರು ವಾಪಸ್ಸಾಗಿದ್ದು, ಪ್ರವಾಸದಿಂದ ವಾಪಸ್ಸಾದ ಇಷ್ಟು ಮಂದಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಟೆಸ್ಟ್ ರಿಪೋರ್ಟ್ ಬರುವ ವರೆಗೂ ವಾಪಸ್ಸಾದ ಅಷ್ಟು ಪ್ರವಾಸಿಗರನ್ನು ಕ್ವಾರೆನ್ಟೈನ್ ಮಾಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದೆ..ಇನ್ನು ವಾಪಸ್ಸಾದ 360 ಮಂದಿ ಪ್ರವಾಸಿಗರ ಪೈಕಿ ಒಂದಷ್ಟು ಜನರಿಗೆ ಕೊರೋನಾ ಲಕ್ಷಣಗಳು ಗೋಚರವಾಗಿದ್ದು,ಲಕ್ಷಣ ಇರುವವರಿಗೆ ಆರೋಗ್ಯ ಇಲಾಖೆ ಚಿಕಿತ್ಸೆ ನೀಡುತ್ತಿದೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada