ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.

ಸೌಥಾಂಪ್ಟನ್​: ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್​ ಮಾಡಿದ ನಾಯಕ ರೋಹಿತ್​ ಶರ್ಮ ನೇತೃತ್ವದ ಭಾರತ ತಂಡ 8 ವಿಕೆಟ್​ಗೆ 198 ರನ್​ ಪೇರಿಸಿತು.

ಇಂಗ್ಲೆಂಡ್​ ನಿಗದಿತ 20 ಓವರ್​ಗಳಿಗೆ 148 ರನ್​ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0ರ ಮುನ್ನಡೆ ಸಾದಿಸಿದೆ.

ಸಂಘಟಿತ ಬ್ಯಾಟಿಂಗ್​ ಹೋರಾಟ: ಸಂಘಟಿತ ಬ್ಯಾಟಿಂಗ್​ ಹೋರಾಟದ ಫಲವಾಗಿ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಬೃಹತ್​ ಸವಾಲು ನೀಡಿತ್ತು. ಉತ್ತಮ ಆರಂಭ ಪಡೆದರೂ ದಿಢೀರ್​ ಕುಸಿತ ಕಂಡ ಭಾರತ ತಂಡಕ್ಕೆ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ (51ರನ್​, 33 ಎಸೆತ, 6 ಬೌಂಡರಿ, 1 ಸಿಕ್ಸರ್​) ಅರ್ಧಶತಕದಾಟದ ಮೂಲಕ ನೆರವಾದರು. ಕೋವಿಡ್​ನಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್​ ಶರ್ಮ (24ರನ್​, 14 ಎಸೆತ, 5 ಬೌಂಡರಿ) ಆರಂಭಿಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿ ಗಮನಸೆಳೆದರು.

ಆರಂಭಿಕರನ್ನು ಕಳೆದುಕೊಂಡ ಬಳಿಕ ಜತೆಯಾದ ದೀಪಕ್​ ಹೂಡಾ (33ರನ್​, 17 ಎಸೆತ, 3 ಬೌಂಡರಿ, 2 ಸಿಕ್ಸರ್​) ಹಾಗೂ ಸೂರ್ಯಕುಮಾರ್​ ಯಾದವ್​ (39ರನ್​, 19 ಎಸೆತ, 4 ಬೌಂಡರಿ, 2 ಸಿಕ್ಸರ್​) ಜೋಡಿ 3ನೇ ವಿಕೆಟ್​ಗೆ ಬಿರುಸಿನ 43 ರನ್​ ಪೇರಿಸಿತು. ಹೂಡಾ ಅಬ್ಬರದ ಫಲವಾಗಿ ಭಾರತ ತಂಡ ಆರಂಭಿಕ 10 ಓವರ್​ಗಳಲ್ಲಿ 3 ವಿಕೆಟ್​ಗೆ 105 ರನ್​ ಪೇರಿಸಿತು. ಉತ್ತಮ ನಿರ್ವಹಣೆ ನೀಡುವ ಮೂಲಕ ಹೂಡಾ ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಿಗಿಮಾಡಿಕೊಂಡರು. ಹೂಡಾ ನಿರ್ಗಮನದ ಬಳಿಕ ಸೂರ್ಯಕುಮಾರ್​ಗೆ ಜತೆಯಾದ ಹಾದಿರ್ಕ್​ ಪಾಂಡ್ಯ ಇಂಗ್ಲೆಂಡ್​ ಬೌಲರ್​ಗಳನ್ನು ಕಾಡಿದರು. ಈ ಜೋಡಿ 4ನೇ ವಿಕೆಟ್​ಗೆ ಬಿರುಸಿನ 37 ರನ್​ ಕಲೆಹಾಕಿತು. ಬಳಿಕ ಅಕ್ಷರ್​ ಪಟೇಲ್​ ಜತೆಗೂಡಿ ಹಾರ್ದಿಕ್​​ ಪಾಂಡ್ಯ ಇನಿಂಗ್ಸ್​ ಕಟ್ಟಿದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೆ ಟಾಪ್ಲೆ ಎಸೆತದಲ್ಲಿ ಸಿಕ್ಸರ್​ ಸಿಡಿಸಲು ಯತ್ನಿಸಿ ಬ್ರೂಕ್​ಗೆ ಕ್ಯಾಚ್​ ನೀಡಿದರು. ಅಂತಿಮವಾಗಿ ಭಾರತ ತಂಡ 8 ವಿಕೆಟ್​ಗೆ 198 ರನ್​ ಪೇರಿಸಿತು. ಕಡೇ 5 ಓವರ್​ಗಳಲ್ಲಿ 4 ವಿಕೆಟ್​ ಕೈಚೆಲ್ಲಿ 41 ರನ್​ ಪೇರಿಸಲಷ್ಟೇ ಶಕ್ತವಾಯಿತು.

199 ರನ್​ಗಳ ಬೆನ್ನತ್ತಿದ ಇಂಗ್ಲೆಂಡ್​ ತಂಡಕ್ಕೆ ಭಾರತ ಬೌಲರ್ಸ್​​ ಆರಂಭದಲ್ಲೇ ಆಘಾತ ನೀಡಿದರು. ಭುವನೇಶ್ವರ್ ಕುಮಾರ್​ರ ಮೊದಲ ಎಸೆತದಲ್ಲೇ ಬಟ್ಲರ್ ಕ್ಲೀನ್‌ ಬೌಲ್ಡ್​ ಆದರು. ಡೇವಿಡ್​ ಮಲನ್ ಕೂಡ ಹೆಚ್ಚು ಹೊತ್ತು ಇರಲಿಲ್ಲ. ಸ್ಫೋಟಕ ಬ್ಯಾಟರ್‌ ಲಿವಿಂಗ್​​ಸ್ಟೋನ್ ಆರಂಭದಲ್ಲೇ ಔಟಾದರು. ಹ್ಯಾರಿ ಬ್ರೊಕ್ ಮತ್ತು ಮೊಯಿನ್ ಅಲಿ ಜತೆಯಾಟದಲ್ಲಿ 61 ರನ್​ ಪೇರಿಸಿದರು. ನಂತರ ಒಬ್ಬರ ಹಿಂದೆ ಒಬ್ಬರು ಔಟಾದರು. ಅಂತಿಮವಾಗಿ 148 ರನ್​ ಗಳಿಸಿದ ಇಂಗ್ಲೆಂಡ್​ ತಂಡ ಸೋಲುಕಂಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಅಗ್ನಿಪಥ್ ನೇಮಕಾತಿ ಯೋಜನೆಯನ್ನುಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.

Fri Jul 8 , 2022
ನವದೆಹಲಿ, ಜುಲೈ 08: ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ. ಅಗ್ನಿಪಥ್ ನೇಮಕಾತಿ ಯೋಜನೆ ಅಡಿಯಲ್ಲಿ ಲಕ್ಷ ಲಕ್ಷ ಅರ್ಜಿದಾರರು ತಮ್ಮ ಅರ್ಜಿ ಸಲ್ಲಿಸುತ್ತಿರುವುದಕ್ಕೆ ಮುಖ್ಯ ಕಾರಣವೇನು ಎಂಬುದನ್ನು ತಮ್ಮ ಟ್ವೀಟ್ ಮೂಲಕ ಉಲ್ಲೇಖಿಸಿ ಹೇಳಿದ್ದಾರೆ. ಒಂದೇ ಒಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. ಕೇಂದ್ರ […]

Advertisement

Wordpress Social Share Plugin powered by Ultimatelysocial