ಕ್ರಿಕೆಟ್ ಹಿರಿಯೂರು ತಂಡಕ್ಕೆ ಪ್ರಥಮ ಬಹುಮಾನ

ಇಲ್ಲಿನ  ಛಾಯಾಗ್ರಾಹಕರ ಸಂಘದ ವತಿಯಿಂದ  ನೆಹರು ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಿರಿಯೂರು ಛಾಯಾಗ್ರಾಹಕರ ತಂಡ ಪ್ರಥಮ ಬಹುಮಾನಗಳಿಸಿ ಜಯಭೇರಿ ಬಾರಿಸಿದೆ, ಸಮರೋಪ ಸಮಾರಂಭದಲ್ಲಿ  ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಪ್ರಥಮ ಬಹುಮಾನ 50,000 ನಗದು ಮತ್ತು ಆಕರ್ಷಕ ಟ್ರೋಫಿ ನೀಡಿದರು.  ದ್ವಿತೀಯ ಬಹುಮಾನವನ್ನು ಬೆಂಗಳೂರಿನ ದಾಸರಹಳ್ಳಿ ತಂಡ ಪಡೆದಿದ್ದು  30000 ನಗದು  ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಸಮಾರಂಭದಲ್ಲಿ ರಾಜ್ಯ ಪ್ರವರ್ಗ 1ರ ಒಕ್ಕೂಟದ ಅಧ್ಯಕ್ಷರಾದ ಡಿ ಟಿ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷರಾದ ಟಿ ಚಂದ್ರಶೇಖರ್, ಸಿಪಿಐ ಕೆ.ಆರ್ ರಾಘವೇಂದ್ರ, ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಎಂಎಲ್ ಗಿರಿಧರ್, ಸೂರ್ಯೋದಯ ಅಜೀಜ್, ವಿಜಯ್ ಕುಮಾರ್, ರಾಮಕೃಷ್ಣ, ಆಸ್ಗರ್ ಅಹಮದ್ ಅಬ್ದುಲ್ ನವೀದ್ ಸೇರಿದಂತೆ ಛಾಯಾಗ್ರಹಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಡಿಮಠದ ಶ್ರೀಗಳ ಭವಿಷ್ಯವಾಣಿ.

Sat Jan 14 , 2023
ವಿಜಯನಗರ, ಜನವರಿ, 13: ಕೋಡಿಮಠದ ಶ್ರೀಗಳು ಒಂದಲ್ಲ ಒಂದು ಭವಿಷ್ಯವನ್ನು ನುಡಿಯುತ್ತಲೇ ಬಂದಿದ್ದಾರೆ. ಇದುವರೆಗೂ ಶ್ರೀಗಳು ನುಡಿದಿರುವ ಭವಿಷ್ಯಗಳೆಲ್ಲವೂ ಭಯಾನಕವಾದವುಗಳೇ ಆಗಿವೆ. ಹಾಗೆಯೇ ಶ್ರೀಗಳಿಗೆ ಹೊಸಪೇಟೆಯಲ್ಲಿ ಭಕ್ತ ಕುಟುಂಬದವರು ಶುಕ್ರವಾರ (ಜನವರಿ 13) ಪಾದಪೂಜೆಯನ್ನು ನೆರವೇರಿಸಿದ್ದಾರೆ. ಪಾದಪೂಜೆ ನೆರವೇರಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದು ಭವಿಷ್ಯ ನುಡಿದಿದ್ದಾರೆ. ಇದೇ 2023ಕ್ಕೆ ಜಾಗತಿಕ […]

Advertisement

Wordpress Social Share Plugin powered by Ultimatelysocial