ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಹರಿಹಾಯ್ದಿದ್ದಾರೆ.

 

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಹರಿಹಾಯ್ದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎನ್ ಅಶ್ವತ್ಥ ನಾರಾಯಣ, ತಿಹಾರ್‌ ಜೈಲಲ್ಲಿ 50 ದಿನ ಉಳಿದು ಬಂದವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ, ಅರ್ಕಾವತಿ, ಹ್ಯೂಬ್ಲೆಟ್ ವಾಚ್ ಪ್ರಕರಣದ ಆರೋಪಿ ಸಿಎಂ ಕ್ಯಾಂಡಿಡೇಟ್‌!

2013-18ರ ಅವಧಿಯಲ್ಲಿ ಹಲವಾರು ‘ಅಕ್ರಮ ಭಾಗ್ಯ’ ನೀಡಿ ಈಗ ತಮ್ಮ ತಪ್ಪನ್ನು ಮರೆಮಾಚಲು ಶೇ. 40 ರಷ್ಟು ಕಮಿಷನ್ ಎಂಬ ಟೂಲ್‌ ಕಿಟ್‌ ಪಾಲಿಟಿಕ್ಸ್‌ಗೆ ‘ಕೈ’ ಹಾಕಿದೆ.

7 ದಶಕಗಳಿಂದ ಭ್ರಷ್ಟಾಚಾರವೆಂಬ ಕಾಮಾಲೆಯಿಂದ ಬಳಲುತ್ತಿರುವ ಕೈ ನಾಯಕರಿಗೆ ಎಲ್ಲರೂ ತಮ್ಮಂತೆಯೇ ಕಾಣುತ್ತಿದ್ದಾರೆ! 2013-18ರ ಅವಧಿಯಲ್ಲಿ ರಾಜ್ಯವನ್ನು ಕೈ ಹೈಕಮಾಂಡ್‌ನ ಎಟಿಎಂನಂತೆ ಬಳಸಿಕೊಂಡು ಈಗ ಟೂಲ್‌ಕಿಟ್‌ ಬಳಸಿ ಹುರುಳಿಲ್ಲದ ಆರೋಪ ಮಾಡುತ್ತಾ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದೆ.

ತಾವು ಅಕ್ರಮ ಚಟುವಟಿಕೆ ನಡೆಸಿ ಇಂದು ಅಧಿಕಾರಕ್ಕೇರಲು ಕಾಂಗ್ರೆಸ್‌ ಬಳಸುತ್ತಿರುವ ಅಸ್ತ್ರವೇ ಟೂಲ್‌ಕಿಟ್‌, ಈವೆಂಟ್‌ ಮ್ಯಾನೇಜ್‌ಮೆಂಟ್‌! ಸಾಕ್ಷ್ಯಾಧಾರಗಳಿಲ್ಲದೇ ಗಾಳಿಯಲ್ಲಿ ಗುಂಡು ಹಾರಿಸುವುದು, ಸುಳ್ಳು ಹಬ್ಬಿಸುವುದವರ ತಂತ್ರ-ಕುತಂತ್ರದ ಮೊದಲ ಹೆಜ್ಜೆ ಎಂದು ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗ ಬೇರೆ ಉದ್ಯೋಗವೇ ಇಲ್ಲ.

Wed Apr 20 , 2022
ಶಿವಮೊಗ್ಗ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗ ಬೇರೆ ಉದ್ಯೋಗವೇ ಇಲ್ಲ. ಒಂದು ಮುಸಲ್ಮಾನರ ತೃಪ್ತಿಪಡಿಸೋದು, ಇನ್ನೊಂದು ಕಮಿಷನ್ ಬಗ್ಗೆ ಮಾತನಾಡೋದು. ಬೆಳಗ್ಗೆಯಿಂದ ರಾತ್ರಿವರೆಗೂ ಇದೇ ಕೆಲಸ ಅವರು ಮಾಡೋದು. ಸೋತರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಕಿಡಿಕಾರಿದ್ದಾರೆ. ಬುಧವಾರ ಬೆಳಗ್ಗೆ ಶಿವಮೊಗ್ಗದ ಹರ್ಷ ದ ಫರ್ನ್ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಶಾಂತಿಯಲ್ಲಿದ್ದ ರಾಜ್ಯವನ್ನು ಕೊಲೆ- ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೀತಿದೆ. ಹುಬ್ಬಳ್ಳಿಯಲ್ಲಿ […]

Advertisement

Wordpress Social Share Plugin powered by Ultimatelysocial