ನಟ ದರ್ಶನ್ ದಂಪತಿಯ ಪ್ರೇಮ ವಿವಾಹಕ್ಕೆ 22 ವರ್ಷ!

ಮೇ 19, ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ಗೆ ಮರೆಯಲಾಗದ ದಿನ. ಅದೇ ರೀತಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಇದು ಮರೆಯಲಾಗದ ದಿನ. ಮೇ 19 ದರ್ಶನ್ ದಂಪತಿಗೆ ವಿಶೇಷ ದಿನ. ಯಾಕಂದ್ರೆ, ಇದು ಇವರಿಬ್ಬರು ಮದುವೆಯಾದ ಶುಭ ದಿನ.

ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮುಖದಲ್ಲಿ ಮದುವೆ ಆಗಿದ್ದರು.

ಈ ನಡುವೆ ಸಾಕಷ್ಟು ಏಳು-ಬೀಳುಗಳು ಇವರ ಜೀವನದಲ್ಲಿ ನಡೆದಿದೆ. ಅದೇನೆ ಇರಲಿ, ಈ ಶುಭ ದಿನವನ್ನು‌ ವಿಶೇಷವಾಗಿ ಆಚರಿಸಲಿದ್ದಾರೆ‌ ದರ್ಶನ್ ಮತ್ತು ವಿಜಯಲಕ್ಷ್ಮಿ. ‌

ದರ್ಶನ್ ಮತ್ತು ವಿಜಯಲಕ್ಷ್ಮಿ ಈ ಶುಭ ದಿನಕ್ಕೆ ಅಭಿಮಾನಿಗಳು ಮತ್ತು ಸಿನಿಮಾ ಮಿತ್ರರಿಂದ ಶುಭಾಶಯದ ಮಹಾಪೂರವೇ ಹರಿದು ಬರ್ತಿದೆ. ಈ ಜೋಡಿಯ ಲವ್ ಸ್ಟೋರಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಮುಂದೆ ಓದಿ.

22ನೇ ವರ್ಷದ ವಿವಾಹ ವಾರ್ಷಿಕೋತ್ಸವ!
ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮದುವೆಯಾಗಿ ಇಂದಿಗೆ (ಮೇ 19) 21 ವರ್ಷ ಕಂಪ್ಲೀಟ್ ಆಗಿದ್ದು, 22ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೇ 19, 2000ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್. ಹಾಗಾಗಿ ಈ ಜೋಡಿ, ಈ ಸಂಭ್ರಮವನ್ನು ಹೇಗೆ ಆಚರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.

ದರ್ಶನ್, ವಿಜಯಲಕ್ಷ್ಮಿರದ್ದು ಲವ್ ಮ್ಯಾರೇಜ್!

ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಪ್ರೇಮ ವಿವಾಹ. ಪರಸ್ಪರ ಪ್ರೀತಿಸಿದ ಈ ಜೋಡಿ, ಮನೆಯವರ ಒಪ್ಪಿಗೆಯ ಮೇರಿಗೆ ವಿವಾಹವಾಗಿದ್ದರು. ಮದುವೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ಕುಟುಂಬಸ್ಥರು, ಸಿನಿಮಾ ತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

ದರ್ಶನ್ ಕುಟುಂಬದ ಫೋಟೊ ವೈರಲ್!

ನಟ ದರ್ಶನ್ ದಂಪತಿಗೆ ವಿನೀಶ್ ಎಂದ ಒಬ್ಬ ಮಗ ಇದ್ದಾರೆ. ವಿನೀಶ್ ದರ್ಶನ್ ‘ಐರಾವತ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನೀಶ್ ಮತ್ತು ವಿಜಯಲಕ್ಷ್ಮಿಯ ಹೊಸ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿನೀಶ್ ಲುಕ್ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ವಿನೀಶ್ ಮುಂದಿನ ಹೀರೊ ಎಂದು ದರ್ಶನ್ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಗಳಿಂದ ಶುಭಾಶಯ

ತಮ್ಮ ನೆಚ್ಚಿನ ನಟನ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ.‌ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಹಲವು ಫೋಟೊಗಳನ್ನು ಹಂಚಿಕೊಂಡು, ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇನ್ನೂ ಇದೇ ವೇಳೆ ದರ್ಶನ್ ಮದುವೆ ಫೋಟೊ ವೈರಲ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ನಟಿ ಚೇತನಾ ರಾಜ್ ಸಾವಿಗೆ ರಾಖಿ ಸಾವಂತ್ ಕಳವಳ: ವೈದ್ಯರ ಬಗ್ಗೆ ಆಕ್ರೋಶ

Thu May 19 , 2022
ಕನ್ನಡದ ಕಿರುತೆರೆ ನಟಿ ಚೇತನಾ ರಾಜ್‌ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುವಾಗಲೇ ಮೃತಪಟ್ಟಿದ್ದರು. ಈ ಸಾವು ಇಡೀ ಚಿತ್ರರಂಗವನ್ನೇ ದಂಗು ಬಡಿಸಿತ್ತು. ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್ ನಟಿಯರು ಈ ವಿಷಯ ಕೇಳಿ ಶಾಕ್‌ ಆಗಿದ್ದರು. ಅಲ್ಲದೆ ನಟಿ ಚೇತನಾ ರಾಜ್‌ ಸಾವಿಗೆ ಕಂಬನಿ ಮಿಡಿದಿದ್ದರು. ಕನ್ನಡ ಚಿತ್ರರಂಗದಲ್ಲಿ ಬಾಡಿ ಶೇಮಿಂಗ್, ಬ್ಯೂಟಿ ಕುರಿತಾಗಿ ಕೆಲ ನಟಿಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಬಣ್ಣದ ಲೋಕದಲ್ಲಿರುವ ಹೆಣ್ಣುಮಕ್ಕಳಿಗೆ ಆಗುವ ಸಮಸ್ಯೆಗಳು, ಅವರು ತಮ್ಮ […]

Advertisement

Wordpress Social Share Plugin powered by Ultimatelysocial