ಬೆಂಗಳೂರು : ಸ್ವತಂತ್ರವಾಗಿ ಬೆಳೆದು, ಅಪಾರ ಅಭಿಮಾನಿ ಬಳಗಕ್ಕೆ ಒಡೆಯನಾದ ನನ್ನ ಪ್ರೀತಿಯ ದರ್ಶನ್ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು ಎಂದು ಸಂಸದೆ ಸುಮಲತಾ ನಟ ದರ್ಶನ್ ಬರ್ತಡೇಗೆ ಶುಭ ಕೋರಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಅಂಬರೀಶ್ ಹಾಗೂ ಅಭಿಶೇಕ್ ಅಂಬರೀಶ್ ಜೊತೆಗೆ ಇರುವ ಫೋಟೋ ಶೇರ್ ಮಾಡುವ ಮೂಲಕ ಶುಭ ಕೋರಿರುವ ಸಂಸದೆ ಸುಮಲತಾ, ಸ್ವತಂತ್ರವಾಗಿ ಬೆಳೆದು ಬಂದಿದೆ.
ಅಪಾರ ಅಭಿಮಾನಿ ಬಳಗಕ್ಕೆ ಒಡೆಯನಾದ ನನ್ನ ಪ್ರೀತಿಯ ದರ್ಶನ್ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು,ದೇವರು ಮತ್ತಷ್ಟು ಆರೋಗ್ಯ, ಉತ್ಸಾಹ ಚೈತನ್ಯ ಮತ್ತು ಹುರುಪನ್ನು ತುಂಬಿ ನಾಯಕನಾಗಿ ಚಿತ್ರರಂಗದಲ್ಲಿ ಎರಡು ದಶಕ ಪೂರೈಸಿರುವ ಈ ಸಂದರ್ಭದಲ್ಲಿ, ಅಭಿಮಾನಿಗಳ ಮನಸ್ಸಿನಲ್ಲಿ ಈ ಸ್ಥಾನ ಶಾಶ್ವತವಾಗಿರಲೆಂದು ಹಾರೈಸುವೆ. ಇಂದು ಬಿಡುಗಡೆಯಾಗುತ್ತಿರುವ #ಕ್ರಾಂತಿ ಚಿತ್ರದ ಮೊದಲ ನೋಟ ಹಾಗೂ ಘೋಷಣೆಯಾಗುತ್ತಿರುವ #D56 ಹೊಸ ಚಿತ್ರ ಹಾಗೂ ಚಿತ್ರತಂಡಗಳಿಗೂ ಹಾರ್ದಿಕ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada