ಸಿಟ್ಟಿಗೆದ್ದ ಬಸ್ ಪ್ರಯಾಣಿಕರಿಂದ ರವಿಗೆ ಬಿತ್ತು ಗೂಸ.!

ಸಾರಿಗೆ ನೌಕರರ  ಮುಷ್ಕರವಿದ್ದರೂ  ಕೆಲವು ನೌಕರರು ಮುಷ್ಕರವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಿಂದ ಮೈಸೂರು ಕಡೆಗೆ ರಾಜಹಂಸ ಬಸ್​ ಹೊರಟಿತ್ತು. ಈ ಸಂದರ್ಭದಲ್ಲಿ ಸಿಕ್ಕಿದ್ದೇ ಛಾನ್ಸ್​ ಎಂದುಕೊಂಡ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಮೂಲದ ರವಿ ಎಂಬಾತ ಬಸ್ಸನ್ನು ತಡೆಯಲು ಪ್ರಯತ್ನಿಸಿದ. ಇದರಿಂದ ಸಿಟ್ಟಿಗೆದ್ದ ಬಸ್​ ಪ್ರಯಾಣಿಕರು ಕೆಳಕ್ಕೆ ಇಳಿದು ಅವನಿಗೆ ಗೂಸಾ ನೀಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು  ತಾಲೂಕಿನ  ಸೋಮನಹಳ್ಳಿ ಬಳಿ  ಘಟನೆ ನಡೆದಿದ್ದು, ಇದೀಗ ಭಾರಿ ವೈರಲ್​ ಆಗಿದೆ. ಸ್ಥಳಕ್ಕೆ ಭೇಟಿ ನೀಡಿ ರವಿಯನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕು

Sat Apr 10 , 2021
ಘುಳೂನೋರು ಗ್ರಾಮದ ಹತ್ತಿರ ಭೀಮಾ ನದಿಗೆ ನೀರು ಇಲ್ಲದ ಕಾರಣ ಭೀಮಾ ನದಿಗೆ ನೀರು ನಿಲ್ಲಿಸಿ ರೈತರ ದನಕರುಗಳ ಪ್ರಾಣ ಉಳಿಸಿ ಎಂದು ರೈತರು ಧರಣಿ ಮೂರು ದಿನಕ್ಕೆ ಕಾಲಿಟ್ಟಿದ್ದು ಮಹಾರಾಷ್ಟ್ರದ  ಮತ್ತು ಕಾಲುವೆ ಮುಖಾಂತರ ದನಕರುಗಳಿಗೆ ಮತ್ತು ರೈತರಿಗೆ ಕುಡಿಯಲು ಅವಶ್ಯಕತೆ ಇರುವ ನೀರನ್ನು ಕೃಷ್ಣಾನದಿಯಿಂದ ಹರಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಎಲ್ಲ ರೈತರ ಮುಖಾಂತರ ಒತ್ತಾಯ ಮಾಡಲಾಯಿತು ಸ್ಥಳಕ್ಕೆ ಅಫ್ಜಲ್ ಪುರ ತಾಲೂಕು ಶಾಸಕರಾದ […]

Advertisement

Wordpress Social Share Plugin powered by Ultimatelysocial