ಆನೇಕಲ್: ವೈದ್ಯ ದಂಪತಿಯ ಪುತ್ರನೊಬ್ಬ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ!

 

ಆನೇಕಲ್: ವೈದ್ಯ ದಂಪತಿಯ ಪುತ್ರನೊಬ್ಬ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ಮಂಗಳವಾರ ಸಂಭವಿಸಿದೆ.ಡಾ.ಶರಣು ಪಟೇಲ್​ ಮತ್ತು ಡಾ.ಮಮತಾ ದಂಪತಿ ಪುತ್ರ ಆದಿತ್ಯ ಪಟೇಲ್(15) ಮೃತ ದುರ್ದೈವಿ. ಈತ ಬೊಮ್ಮನಹಳ್ಳಿ ಬೇಗೂರಿನ ಟ್ರಿಮೀಸ್ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಓದುತ್ತಿದ್ದ.ಹೊಸೂರು ರಸ್ತೆಯ ಬೊಮ್ಮಸಂದ್ರದ ಹೆಲ್ತ್ ಸಿಟಿಯ ಸ್ಪರ್ಶ್ ಆಸ್ಪತ್ರೆಯಲ್ಲಿ ಡಾ.ಶರಣು ಪಟೇಲ್​ ಮತ್ತು ಡಾ.ಮಮತಾ ಇಬ್ಬರೂ ಕೆಲಸ ಮಾಡುತ್ತಿದ್ದಾರೆ. ಕಮ್ಮಸಂದ್ರ ಬಳಿಯ ‘ಡ್ಯಾಡಿ’ ಅಪಾರ್ಟ್​ಮೆಂಟ್​ನಲ್ಲಿ ಮಗನ ಜತೆ ದಂಪತಿ ವಾಸವಿದ್ದರು.ಮಂಗಳವಾರ ಮಧ್ಯಾಹ್ನ ಬಾಲಕ ಆದಿತ್ಯ, ಅಪಾರ್ಟ್​ಮೆಂಟ್​ನ ಐದು ಅಂತಸ್ತಿನ ಮೇಲಿಂದ ಕೆಳಗೆ ಹಾರಿದ್ದು, ತಲೆ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ ಕಂದ ಸಾಯುವಂತಹದ್ದು ಏನಾಯ್ತಪ್ಪಾ… ಎಂದು ಪಾಲಕರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.ಆದಿತ್ಯ ಮೊಬೈಲ್​ ಅನ್ನು ಹೆಚ್ಚಾಗಿ ಬಳಲುತ್ತಿದ್ದನಂತೆ. ಇತ್ತೀಚೆಗೆ ಪಾಲಕರು ಮಗನಿಂದ ಮೊಬೈಲ್ ಅನ್ನು ವಾಪಸ್​ ಪಡೆದಿದ್ದರಂತೆ. ಬಳಿಕ ಮಂಕಾಗಿದ್ದ ಆದಿತ್ಯ ಸಾವಿನ ಮನೆಯ ಕದ ತಟ್ಟಿದ್ದಾನೆ ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ಆರ್ಆರ್ ಮತ್ತು ಗಂಗೂಬಾಯಿ ಕಥಿವಾಡಿಯಲ್ಲಿ ಅಜಯ್ ದೇವಗನ್ ಅವರ ಕ್ಯಾಮಿಯೋಗಳಿಗಾಗಿ 50 ಕೋಟಿ ರೂ.!!

Tue Feb 8 , 2022
ಅಜಯ್ ದೇವಗನ್ ಅವರು ತಮ್ಮ ವರ್ಕಿಂಗ್ ಕ್ಯಾಲೆಂಡರ್ ಅನ್ನು ಸೂಪರ್ ಸ್ಟಫ್ ಮಾಡಿದ್ದಾರೆ ಮತ್ತು ಅವರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಅವುಗಳ ಬಿಡುಗಡೆಗೆ ಸಜ್ಜಾಗುತ್ತಿರುವುದನ್ನು ನೋಡಬಹುದು. ಅವರ ಎಲ್ಲಾ ನಿರೀಕ್ಷಿತ ಬಿಡುಗಡೆಗಳಲ್ಲಿ, RRR ಮತ್ತು ಗಂಗೂಬಾಯಿ ಕಥಿವಾಡಿ ಅತ್ಯಂತ ರೋಚಕವಾದವುಗಳಾಗಿವೆ. ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳು ತಮ್ಮ ಪ್ರೀತಿಯ ತಾರೆಯನ್ನು ಈ ಎರಡು ಬಿಗ್ಗಳಲ್ಲಿ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಕುತೂಹಲಕಾರಿಯಾಗಿ, ಎರಡೂ ಚಿತ್ರಗಳಲ್ಲಿ, ಹಿಂದಿನ ಭಾಗದ ಪಾತ್ರವನ್ನು ನಿರ್ವಹಿಸಲಿದ್ದಾರೆ. […]

Advertisement

Wordpress Social Share Plugin powered by Ultimatelysocial