ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.ಕರ್ನಾಟಕ ಬಂದ್ ಹಿನ್ನೆಲೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ. ನಗರದ ಬಿಬಿಎಂಪಿ ಕಚೇರಿ ಬಳಿ ಬ್ಯಾರಿಗೇಟ್ ಹಾಕಿ ಸಂಪೂರ್ಣ ಬಂದ್ ಮಾಡಿದ್ದಾರೆ. ಇನ್ನೂ ಕೆಆರ್ ಪುರ, ಟಿನ್ ಫ್ಯಾಕ್ಟರಿ ಬಳಿ ಪೊಲೀಸರ ಸರ್ಪಗಾವಲಾಗಿದ್ದು, ಬೆಂಗಳೂರು ಹೊರವಲಯದಿಂದ ಬರುವ ಕನ್ನಡಪರ ಸಂಘಟನೆಗಳು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.ಕೆಆರ್ ಪುರ , ಹೊಸಕೋಟೆ ,ಕೋಲಾರ , ಚಿಂತಾಮಣಿ ಬರುವ ಹೋರಾಟಗಾರರನ್ನು ತಡೆಯಲು ಪೊಲೀಸರಿಗೆ ಬೆಂಗಳೂರು ಕಂಟ್ರೋಲ್ ರೂಮ್ ಗೆ ಸೂಚನೆ ನೀಡಲಾಗಿದೆ..
ಇದನ್ನು ಓದಿ :ಗುರುಬಸವೇಶ್ವರ ಸಂಸ್ಥಾನ ಮಠಕ್ಕೆ ಈಶ್ವರ್ ಖಂಡ್ರೆ ಭೇಟಿ