ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ಪಿಲ್ಲರ್ ರಾಡ್ ಬಿದ್ದು ತಾಯಿ-ಮಗ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದ ಬೆನ್ನಲ್ಲೇ ಬಿಎಂಆರ್ ಸಿಎಲ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಇಂಜಿನಿಯರ್ ಗಳಿಗೆ ತರಬೇತಿ ನೀಡಲು ಬಿಎಂಆರ್ ಸಿಎಲ್ ನಿರ್ಧಾರ ಮಾಡಿದ್ದಾರೆ.
IISc ತಜ್ಞರಿಂದ ಈ ವಾರದಲ್ಲೇ ಇಂಜಿನಿಯರ್ಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ. ಮೆಟ್ರೋ ಇಂಜಿನಿಯರ್ , ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗೆ ಕಾಮಗಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
ಇನ್ನು ದುರುಂತ ಸಂಬಂಧವಾಗಿ ಐಐಎಸ್ಸಿ ಅಧಿಕಾರಿಗಳು ಬಿಎಂಆರ್ ಸಿಎಲ್ ಗೆ 27 ಪುಟದ ವರದಿ ಸಲ್ಲಿಸಿತ್ತು. ವರದಿಯಲ್ಲಿ ಗುತ್ತಿಗೆ ಕಂಪನಿ ನಿರ್ಲಕ್ಷ್ಯ ವಹಿಸಿರೋದಾಗಿ ತಜ್ಞರ ತಂಡ ಉಲ್ಲೇಖಿಸಿತ್ತು.
https://play.google.com/store/apps/details?id=com.speed.newskannada