ಇಂಜಿನಿರ್‌ ಗಳಿಗೆ ತರಬೇತಿ ನೀಡಲು ನಿರ್ಧಾರ.

ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ಪಿಲ್ಲರ್‌ ರಾಡ್‌ ಬಿದ್ದು ತಾಯಿ-ಮಗ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದ ಬೆನ್ನಲ್ಲೇ ಬಿಎಂಆರ್‌ ಸಿಎಲ್‌ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಇಂಜಿನಿಯರ್‌ ಗಳಿಗೆ ತರಬೇತಿ ನೀಡಲು ಬಿಎಂಆರ್‌ ಸಿಎಲ್‌ ನಿರ್ಧಾರ ಮಾಡಿದ್ದಾರೆ.

IISc ತಜ್ಞರಿಂದ ಈ ವಾರದಲ್ಲೇ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ. ಮೆಟ್ರೋ ಇಂಜಿನಿಯರ್ , ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗೆ ಕಾಮಗಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲು ಬಿಎಂಆರ್​ಸಿಎಲ್​ ಮುಂದಾಗಿದೆ.
ಇನ್ನು ದುರುಂತ ಸಂಬಂಧವಾಗಿ ಐಐಎಸ್ಸಿ ಅಧಿಕಾರಿಗಳು ಬಿಎಂಆರ್‌ ಸಿಎಲ್ ಗೆ 27 ಪುಟದ ವರದಿ ಸಲ್ಲಿಸಿತ್ತು. ವರದಿಯಲ್ಲಿ ಗುತ್ತಿಗೆ ಕಂಪನಿ ನಿರ್ಲಕ್ಷ್ಯ ವಹಿಸಿರೋದಾಗಿ ತಜ್ಞರ ತಂಡ ಉಲ್ಲೇಖಿಸಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಸ್ಥಾನದ ಅಜ್ಮೇರ್‌ ದರ್ಗಾಕ್ಕೆ ಪತ್ನಿ ಜತೆ ಜನಾರ್ದನ ರೆಡ್ಡಿ ಭೇಟಿ.

Mon Jan 23 , 2023
ಕೊಪ್ಪಳ: ಹೊಸ ಪಕ್ಷ ಘೋಷಣೆಯ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ, ರಾಜ್ಯ ರಾಜಕೀಯದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮೊನ್ನೆಯಷ್ಟೇ ಕೊಪ್ಪಳದ ಗಂಗಾವತಿಯ ಬೂದಗಂಪ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರೆಡ್ಡಿ, ಇಂದು ತಮ್ಮ ಪತ್ನಿ ಲಕ್ಷ್ಮೀ ಅರುಣಾ ಜೊತೆಗೆ ಅಜಮಿರ್ ದರ್ಗಾಕ್ಕೆ ರೆಡ್ಡಿ ತೆರಳಿದ್ದಾರೆ. ರಾಜಸ್ಥಾನದ ಅಜ್ಮೇರ್‌ ದರ್ಗಾಕ್ಕೆ ರೆಡ್ಡಿ ದಂಪತಿ ಭೇಟಿ ನೀಡಿದ್ದಾರೆ. ಖಾಜಾ ಗರೀಬ್ ನವಾಜ್ ದರ್ಗಾಕ್ಕೆ ತೆರಳಿ ಚಾದರ ಮತ್ತು ಹೂವನ್ನು ಸಮರ್ಪಣೆ ಮಾಡಿದ್ದಾರೆ. ಅಲ್ಲದೆ, […]

Advertisement

Wordpress Social Share Plugin powered by Ultimatelysocial