ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ನಟಿಸುವ ಸಾಮರ್ಥ್ಯವಿರುವ ನಟ ಧನಂಜಯ ಸದ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಬಿಝಿಯಾಗಿದ್ದಾರೆ. ಕನ್ನಡದಲ್ಲಿ‘ಹೊಯ್ಸಳ’ ಸಿನಿಮಾವನ್ನು ಈಗಷ್ಟೇ ಮುಗಿಸಿರುವ ಅವರು ಸದ್ಯ ಹೈದರಾಬಾದ್ನಲ್ಲಿ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾಗೆ ‘ಝೀಬ್ರಾ’ ಎಂದು ಹೆಸರಿಟ್ಟಿದ್ದು, ಅದರ ಫಸ್ಟ್ ಲುಕ್ ಲವಲವಿಕೆಗೆ ಎಕ್ಸ್ಕ್ಲೂಸಿವ್ ಆಗಿ ಸಿಕ್ಕಿದೆ.
ಈ ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ ಇಬ್ಬರೂ ನಾಯಕರಾಗಿ ನಟಿಸುತ್ತಿದ್ದಾರೆ. ಇದೊಂದು ಮಲ್ಟಿ ಸ್ಟಾರ್ ಸಿನಿಮಾ. ಮೊದಲ ಬಾರಿಗೆ ಧನಂಜಯ ತೆಲುಗಿನಲ್ಲಿ ನಾಯಕರಾಗಿ ನಟಿಸುತ್ತಿದ್ದು, ಹೊಸ ರೀತಿಯ ಕಥೆ ಎಂಬ ಕಾರಣಕ್ಕೆ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಹೈದರಾಬಾದ್ನಲ್ಲಿಯೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಹೊಯ್ಸಳ ಸಿನಿಮಾವನ್ನು ಒಪ್ಪಿಕೊಂಡ ನಂತರ ನಾನು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ನಿಧಾನವಾಗಿ ಒಳ್ಳೊಳ್ಳೆ ಕಥೆಗಳಿಗೆ ಮಾತ್ರ ಆದ್ಯತೆ ನೀಡೋಣ ಎಂದುಕೊಂಡಿದ್ದೆ. ಆ ಸಮಯದಲ್ಲಿ ‘ಪೆಂಗ್ವಿನ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಈಶ್ವರ್ ಕಾರ್ತಿಕ್ ನನ್ನನ್ನು ಸಂಪರ್ಕಿಸಿದರು. ಮೈಸೂರಿಗೆ ಬಂದು ‘ಹೊಯ್ಸಳ’ ಚಿತ್ರೀಕರಣದ ಮಧ್ಯದಲ್ಲಿ ಸಮಯ ಸಿಕ್ಕಾಗ ಕಥೆ ಹೇಳಿದರು. ಇಡೀ ಕಥೆ ಕೇಳಿ ನನಗೆ ಒಪ್ಪಿಕೊಳ್ಳದೇ ಇರಲಾಗಲಿಲ್ಲ. ಈ ಚಿತ್ರದಲ್ಲಿನಾನು ಮತ್ತು ಸತ್ಯದೇವ್ ಇಬ್ಬರೂ ನಾಯಕರಾಗಿರುತ್ತೇವೆ. ನನ್ನದು ಇಲ್ಲಿ ನೆಗೆಟಿವ್ ಪಾತ್ರವಲ್ಲ. ಇಬ್ಬರದ್ದೂ 26ನೇ ಸಿನಿಮಾ ಎಂಬುದು ವಿಶೇಷ’ ಎಂದಿದ್ದಾರೆ ಧನಂಜಯ.‘ಝೀಬ್ರಾ ಒಂದು ಸಿಂಪಲ್ ಇಂಟೆಲಿಜೆಂಟ್ ಮಾಸ್ ಎಂಟರ್ಟೇನರ್. ಬೇರೆ ರೀತಿಯ ಸಿನಿಮಾ. ನನ್ನ ಆಡಿಯನ್ಸ್ ನನ್ನನ್ನು ತೆರೆ ಮೇಲೆ ಹೇಗೆ ನೋಡಲು ಇಷ್ಟಪಡುತ್ತಾರೋ ಹಾಗೆ ಇದೆ.
https://play.google.com/store/apps/details?id=com.speed.newskannada