ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ದೊಡ್ಮನೆ ಕುಡಿ..!

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ ರಾಜ್ ಕುಮಾರ್ 

ಸ್ಯಾಂಡಲ್ ವುಡ್ ಅಂದ ಕೂಡ್ಲೇ ಮೊದಲು ನಮ್ಮ ಕಣ್ಮುಂದೆ ಬರೋದೇ ದೊಡ್ಮನೆ.. ದೊಡ್ಮನೆ ಅಂದ್ರೆ ಅದು ಕಲಾವಿದರ ಕುಟುಂಬ.. ಕನ್ನಡದ ಕಣ್ಮಣಿ ಡಾ.ರಾಜ್ ಕುಟುಂಬದ ಮೂರನೇ ಜನರೇಶನ್ ಈಗಾಗ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ.. ಇದೀಗ ರಾಜ್ ಡೈನಾಸ್ಟಿಯ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ..

ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ದೊಡ್ಮನೆ ಕುಡಿ..!

ನಟಸಾರ್ವಭೌಮ ಡಾ.ರಾಜ್ ಕುಟುಂಬ ಅಂದಕೂಡ್ಲೇ ಸಿನಿಪ್ರಿಯರ ಕಣ್ಣರಳುತ್ತೆ, ಕಿವಿ ನಿಮಿರುತ್ತೆ.. ಕಾರಣ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಅವರ ಸುಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಲ್ಲರೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸೋದ್ರ ಜೊತೆಗೆ, ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.. ಇನ್ನೂ ಅಣ್ಣಾವ್ರ ಕುಟುಂಬದ ಮೂರನೇ ಜನರೇಶನ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದೆ.. ನಟ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಈಗಾಗ್ಲೇ ನಾಯಕರಾಗಿ ತಮ್ಮದೇ ಸ್ಟಾರ್ಡಮ್ ಕ್ರಿಯೇಟ್ ಮಾಡಿದ್ದಾರೆ.. ಇದೀಗ ಯುವ ರಾಜ್ ಕುಮಾರ್ ಸರದಿ..
ಯುವ ರಾಜ್ ಕುಮಾರ್ ಚೊಚ್ಚಲ ಚಿತ್ರಕ್ಕೆ ಸಿಕ್ತು ಗ್ರ್ಯಾಂಡ್ ಎಂಟ್ರಿ..!

‘ಯುವ ರಣಧೀರ ಕಂಠಿರವ’ನಾಗಿ ಬರ್ತಿದ್ದಾರೆ ಯುವ..! 

ದೊಡ್ಮನೆಯ ಮತ್ತೊಂದು ಕುಡಿ ಸದ್ಯ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಕೂಡ ಬಣ್ಣದ ಲೋಕದಲ್ಲಿ ತಮ್ಮ ನಟನಾ ಚಾತುರ್ಯ ತೋರಲು ಸಜ್ಜಾಗಿದ್ದಾರೆ.. ಯುವ ರಾಜ್ ಕುಮಾರ್ ಎಂಟ್ರಿಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ.. ಅಂದಹಾಗೆ ಯುವ ರಾಜ್ ಕುಮಾರ್ ನಟನೆಯ ಚೊಚ್ಚಲ ಚಿತ್ರ ಯುವ ರಣಧೀರ ಕಂಠಿರವ.. ಸಿನಿಮಾ ಟೈಟಲ್ಲೇ ಎಲ್ಲರ ಗಮನ ಸೆಳೆಯುವಂತಿದೆ.. ಯಾಕಂದ್ರೆ ಈ ಹಿಂದೆ 60ರ ದಶಕದಲ್ಲೇ ಡಾ.ರಾಜ್ ಕುಮಾರ್ ಅವರು ರಣಧೀರ ಕಂಠಿರವ ಚಿತ್ರದಲ್ಲಿ ನಟಿಸಿ, ಮೋಡಿ ಮಾಡಿದ್ರು.. ಇದೀಗ ಅದೇ ಟೈಟಲ್ ಅಣ್ಣಾವ್ರ ಮೊಮ್ಮಗನ ಸಿನಿಮಾದಲ್ಲೂ ಕಾಣಿಸಿಕೊಂಡಿರೋದು ಎಲ್ಲರ ಹುಬ್ಬೇರಿಸಿದೆ.. ಅದ್ರ ಜೊತೆಗೆ ಆ ಸಿನಿಮಾ ಬಗೆಗಿನ ಕುತೂಹಲವನ್ನೂ ಮತ್ತಷ್ಟು, ಮಗದಷ್ಟು ಹೆಚ್ಚಿಸಿರೋದು ಚಿತ್ರದ ಫಸ್ಟ್ ಲುಕ್ ವೀಡಿಯೋ.. ಹೌದು, ಇತ್ತೀಚೆಗಷ್ಟೇ ಅದ್ಧೂರಿ ಕಾರ್ಯಕ್ರಮದ ಮೂಲಕ ಯುವರಾಜ್ ಕುಮಾರ್ ನಟನೆಯ ಮೊದಲ ಚಿತ್ರ ಲಾಂಚ್ ಆಗಿದೆ.. ಈ ವೇಳೆ ಚಿತ್ರದ ಫಸ್ಟ್ ಲುಕ್ ವೀಡಿಯೋವನ್ನೂ ಕೂಡ ರಿವೀಲ್ ಮಾಡಲಾಗಿದೆ..

ಯುವ ರಣಧೀರ ಕಂಠೀರವ ಅನ್ನೋ ಟೈಟಲ್ ನಲ್ಲೇ ಒಂದು ಗತ್ತಿದೆ.. ಇದೊಂದು ಐತಿಹಾಸಿಕ ಚಿತ್ರಕತೆಯ ಸಿನಿಮಾ.. ಅಬ್ಬಬ್ಬಾ ಮೊದಲ ಚಿತ್ರದಲ್ಲೇ ಯುವ ರಾಜ್ ಕುಮಾರ್ ಪವರ್ ಫುಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಈಗಂತೂ ಸ್ಯಾಂಡಲ್ ವುಡ್ ನಲ್ಲಿ ಹೀರೋಗಳ ಬಿಯರ್ಡ್ ಲುಕ್ ಸಖತ್ ಟ್ರೆಂಡಿಯಾಗಿದೆ.. ಅದೇ ರೀತಿ ಈಗ ಯುವ ರಾಜ್ ಕುಮಾರ್ ಕೂಡ ತಮ್ಮ ಸಿನಿಮಾದ ಪಾತ್ರಕ್ಕಾಗಿ ಗಡ್ಡಬಿಟ್ಟಿದ್ದು, ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ.. ಫಸ್ಟ್ ಲುಕ್ ನಲ್ಲಿ ಯುವ ರಣಧೀರ ಕಂಠಿರವನ ಜಬರ್ದಸ್ತ್ ಎಂಟ್ರಿ, ಎದುರಾಳಿಯ ಎದೆಸೀಳುವ ನೋಟ, ಘರ್ಜಿಸುವ ಧ್ವನಿಯ ಸಂಭಾಷಣೆ, ಪವರ್ ಫುಲ್ ಆಕ್ಷನ್ ಸೀನ್ಸ್ ಎಲ್ಲವೂ ಪ್ರೇಕ್ಷಕರನ್ನ ಮಂತ್ರಮುಗ್ದಗೊಳಿಸಿದೆ.. ಕಲಾವಿದರ ಕುಟುಂಬದಿಂದ್ಲೇ ಬಂದಿದ್ರೂ ಕೂಡ, ಯುವರಾಜ್ ಕುಮಾರ್ ಸಿನಿಮಾಗೆ ಬೇಕಾದ ಎಲ್ಲಾ ರೀತಿಯ ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.. ಅದು ಈ ಫಸ್ಟ್ ಲುಕ್ ಟೀಸರ್ ನೋಡಿದ್ರೆ ಗೊತ್ತಾಗುತ್ತೆ.. ಮೊದಲ ಸಿನಿಮಾನೇ ಐತಿಹಾಸಿಕ ಕಥೆಯಾದ್ರೂ, ಅದನ್ನ ಬಹಳ ಚಾಲೆಂಜಿಂಗ್ ಆಗಿ ತೆಗೆದುಕೊಂಡು ತಮ್ಮ ಪಾತ್ರ ನಿರ್ವಹಿಸಿದ್ದಾರೆ ಯುವ ರಾಜ್ ಕುಮಾರ್..

ಯುವ ರಣಧೀರ ಕಂಠೀರವ ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಅವರ ತಂದೆ ನಟ ರಾಘಂವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬ ಭಾಗಿಯಾಗಿತ್ತು.. ಜೊತೆಗೆ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ, ನಿರ್ದೇಶಕರಾದ ಸಂತೋಷ ಆನಂದ್ ರಾಮ್, ಭರ್ಜರಿ ಸಿನಿಮಾ ಖ್ಯಾತಿಯ ಚೇತನ್, ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಹೀಗೆ ಸ್ಯಾಂಡಲ್ ವುಡ್ ನ ಸಾಕಷ್ಟು ಜನ ಸೆಲೆಬ್ರೆಟಿಗಳು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ರು.. ಇನ್ನೂ ಈ ವೇಳೆ ಯುವ ರಾಜ್ ಕುಮಾರ್ ಅವರ ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತನಾಡಿ ಫಸ್ಟ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರಕ್ಕೆ ಶುಭ ಹಾರೈಸಿದ್ರು..

ಅಂದಹಾಗೆ ಯುವ ರಣಧೀರ ಕಂಠೀರವ ಚಿತ್ರಕ್ಕೆ ನವನಿರ್ದೇಶಕ ಪುನೀತ್ ರುದ್ರನಾಗ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ.. ಸಂಗೀತ ನಿರ್ದೇಶಕ ರವಿಬಸ್ರೂರು ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡ್ತಿದ್ದಾರೆ.. ಸದ್ಯ ರಿವೀಲ್ ಆಗಿರುವ ಯುವ ರಣಧೀರ ಕಂಠೀರವ ಚಿತ್ರದ ಫಸ್ಟ್ ಲುಕ್ ಟೀಸರ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಸಿನಿಪ್ರಿಯರಿಂದ ಸೂಪರ್ಬ್ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಒಟ್ಟಾರೆ ಮೊದಲ ಸಿನಿಮಾದಲ್ಲೇ ಸ್ಟಾರ್ ನಟರಾಗಿ ಹೊರಹೊಮ್ಮುವ ಭರವಸೆ ಮೂಡಿಸಿದ್ದಾರೆ ಯುವ ರಾಜ್ ಕುಮಾರ್.. ಇದೀಗ ಚಿತ್ರದ ಫಸ್ಟ್ ಲುಕ್ ಟೀಸರ್ ನ್ನ ರಿಲೀಸ್ ಮಾಡಿರುವ ಚಿತ್ರತಂಡ, ಅತೀಶೀಘ್ರದಲ್ಲೇ ಚಿತ್ರೀಕರಣವನ್ನ ಶುರು ಮಾಡಲಿದ್ಯಂತೆ.. ಎನಿವೇ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ತಿರೋದು ಇಡೀ ರಾಜ್ ಅಭಿಮಾನಿ ಬಳಗದಲ್ಲಿ ಸಂತಸ ತಂದಿದೆ..

 

Please follow and like us:

Leave a Reply

Your email address will not be published. Required fields are marked *

Next Post

ಪಂಜಾಬ್ ವಿರುದ್ಧ ಚೆನ್ನೈಗೆ ಭರ್ಜರಿ ಜಯ

Mon Nov 2 , 2020
ರೋಚಕ ಘಟಕ್ಕೆ ತಲುಪಿದ ಐಪಿಎಲ್ 13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ರೋಚಕ ಘಟ್ಟದತ್ತ ತಲುಪಿದೆ. ಹೆಚ್ಚಿನ ತಂಡ ಪ್ಲೇ ಆಫ್ ಹಂತದ ಲೆಕ್ಕಾಚಾರದಲ್ಲಿದ್ದು, ಪ್ಲೇ ಆಫ್ ಹಂತವನ್ನ ಜೀವಂತವಾಗಿರಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಾ ಇದೆ… ನಿನ್ನೆ ಚೆನ್ನೈ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ ಸೋಲುವುದರೊಂದಿಗೆ ಪ್ಲೇ ಆಫ್ ಹಂತದ ಕನಸು ಕೂಡ ಭಗ್ನಗೊಂಡಿತು. ಮಾಡು ಇಲ್ಲವೇ ಮಡಿ ಕದನದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ […]

Advertisement

Wordpress Social Share Plugin powered by Ultimatelysocial