ಅಪಘಾತದ ಸಮಯದಲ್ಲಿ ದಿಗಂತ್ ಫ್ಯಾಮಿಲಿಗೆ ಸಹಾಯ ಮಾಡಿದ್ದು ಇವರೇ,

 

ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್​ವುಡ್​  ನಟ ದಿಗಂತ್​ಗೆ   ಅಪರೇಷನ್ ಮಾಡಲಾಗಿತ್ತು. ಸದ್ಯ ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ. ಈ ಮಧ್ಯೆ ದಿಗಂತ್ ಪತ್ನಿ ಹಾಗೂ ನಟಿ ಐಂದ್ರಿತಾ  ರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ವ್ಯಕ್ತಿಯೊಬ್ಬರಿಗೆ ಧನ್ಯವಾದ ತಿಳಿಸಿದ್ದಾರೆ.
ಹಾಗಾದ್ರೆ ಆ ಸಮಯದಲ್ಲಿ ಯಾರು ದಿಗಂತ್​ಗೆ ಸಹಾಯ ಮಾಡಿದ್ದು, ಹೇಗೆ ಇಲ್ಲಿದೆ ಡೀಟೈಲ್ಸ್.
ಆ ವ್ಯಕ್ತಿಯೇ ಸಹಾಯ ಮಾಡಿದ್ದಂತೆ
ಕುಟುಂಬದ ಜೊತೆ ಪ್ರವಾಸಕ್ಕೆಂದು ಗೋವಾಗೆ ಹೋಗಿದ್ದ ನಟ ದಿಗಂತ್, ಕತ್ತಿಗೆ ಏಟು ಮಾಡಿಕೊಂಡಿದ್ದರು. ಈ ಸಮಯದಲ್ಲಿ ಅವರಿಗೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು, ಅವರನ್ನು ತಕ್ಷಣವೇ ಬೆಂಗಳೂರಿಗೆ ಕರೆದುಕೊಂಡು ಬರುವ ಪರಿಸ್ಥಿತಿ ಬಂದಿತ್ತು. ಆಗ ಅವರನ್ನು ತಕ್ಷಣವೇ ಹೇಗೆ ಬೆಂಗಳೂರಿಗೆ ಕರೆದುಕೊಂಡು ಬರಬೇಕು ಎಂಬ ಚಿಂತೆಯಲ್ಲಿದ್ದ ದಿಗಂತ್ ಕುಟುಂಬಕ್ಕೆ ನಿರ್ಮಾಪಕ ಹಾಗೂ ಉದ್ಯಮಿಯೊಬ್ಬರು ಸಹಾಯ ಮಾಡಿದ್ದರಂತೆ.
ಹೌದು, ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್ ಅವರು ಚಿಂತೆಯಲ್ಲಿದ್ದ ದಿಗಂತ್ ಕುಟುಂಬಕ್ಕೆ ಧೈರ್ಯ ತುಂಬಿ ಏರ್​ ಲಿಫ್ಟ್​ ಮಾಡಲು ಸಹಾಯ ಮಾಡಿದ್ದರಂತೆ. ಈ ಬಗ್ಗೆ ಐಂದ್ರಿತಾ ಸ್ವತಃ ಹೇಳಿಕೊಂಡಿದ್ದು, ಅವರನ್ನು ದೇವರೇ ಕಳುಹಿಸಿದಂತಿದೆ. ಅವರಿಗೆ ಅದೆಷ್ಟೇ ಧನ್ಯವಾದ ಹೇಳಿದರೂ ಸಾಲದು ಎಂದು ಬರೆದುಕೊಂಡಿದ್ದಾರೆ.
ದೇವರೇ ನಿಮ್ಮನ್ನ ಕಳುಹಿಸಿದ್ದು ಎಂದ ಐಂದ್ರಿತಾ
ದುಃಸ್ವಪ್ನದಂತೆ ಒಂದು ಘಟನೆ ಜೀವನದಲ್ಲಿ ಬಂದು ಹೋಗಿದೆ. ನಾವೀಗ ಮನೆಗೆ ಮನೆಗೆ ಮರಳಿದ್ದೇವೆ! ಈ ಸವಾಲಿನ ಸಮಯದಲ್ಲಿ ನಮಗೆ ಸಹಾಯ ಮಾಡಿದ ಒಬ್ಬ ವ್ಯಕ್ತಿಗೆ ನಾವು ಸಾಕಷ್ಟು ಧನ್ಯವಾದ ಹೇಳಿದರೂ ಸಾಲದು.ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟಿಂಗ್ ಅನ್ನು ವ್ಯವಸ್ಥೆ ಮಾಡಲು ನಿಮ್ಮ ಸಹಾಯ ಎಂದಿಗೂ ಮರೆಯಲೂ ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
ಅನುಶ್ರೀಗೆ ಶಿವಣ್ಣ ಕೊಟ್ರು ಸೂಪರ್ ಗಿಫ್ಟ್, ಭಾವುಕರಾಗಿ ಹೀಗಂದ್ರು ನಿರೂಪಕಿ!
ಇನ್ನು ಕೆವಿಎನ್ ಪ್ರೊಡಕ್ಷನ್ ಕನ್ನಡದಲ್ಲಿ ಹಲವಾರು ಬಿಗ್​ ಬಜೆಟ್​ ಸಿನಿಮಾಗಳನ್ನು ನಿರ್ಮಿಸುತ್ತಿದ್ದು, ರಾಕಿಂಗ್ ಸ್ಟಾರ್ ಯಶ್​ ಅವರ ಮುಂದಿನ ಸಿನಿಮಾವನ್ನು ಸಹ ಇದೇ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ದ್ರುವ ಸರ್ಜಾ ಅವರ ಮುಂದಿನ ಸಿನಿಮಾವನ್ನು ಈ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು

Tue Jun 28 , 2022
 ಮುಂಬೈನಲ್ಲಿ ಶಾರುಖ್​ ಖಾನ್ ನಟನೆಯ ‘ಜವಾನ್​’ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ. ಜುಲೈ ಮಧ್ಯದವರೆಗೂ ನಯನತಾರಾ ಅವರು ಕ್ಯಾಮೆರಾ ಎದುರಿಸಲಿದ್ದಾರೆ.ನಟಿ ನಯನತಾರಾ  ಅವರು ಮದುವೆ ಸಲುವಾಗಿ ನಟನೆಯಿಂದ ಕೊಂಚ ಬ್ರೇಕ್​ ಪಡೆದುಕೊಂಡಿದ್ದರು. ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಜೊತೆ ಅವರು ಹಸೆಮಣೆ ಏರಿದರು. ಜೂನ್​ 9ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆಯಿತು. ಬಳಿಕ ನವದಂಪತಿ ಹನಿಮೂನ್​ಗೆ  ತೆರಳಿದರು. ಈಗ ಅವರು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ನಯನತಾರಾ ಅವರಿಗೆ ಸಖತ್​ ಬೇಡಿಕೆ ಇದೆ. […]

Advertisement

Wordpress Social Share Plugin powered by Ultimatelysocial