ಆ ವ್ಯಕ್ತಿಯೇ ಸಹಾಯ ಮಾಡಿದ್ದಂತೆ
ಕುಟುಂಬದ ಜೊತೆ ಪ್ರವಾಸಕ್ಕೆಂದು ಗೋವಾಗೆ ಹೋಗಿದ್ದ ನಟ ದಿಗಂತ್, ಕತ್ತಿಗೆ ಏಟು ಮಾಡಿಕೊಂಡಿದ್ದರು. ಈ ಸಮಯದಲ್ಲಿ ಅವರಿಗೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು, ಅವರನ್ನು ತಕ್ಷಣವೇ ಬೆಂಗಳೂರಿಗೆ ಕರೆದುಕೊಂಡು ಬರುವ ಪರಿಸ್ಥಿತಿ ಬಂದಿತ್ತು. ಆಗ ಅವರನ್ನು ತಕ್ಷಣವೇ ಹೇಗೆ ಬೆಂಗಳೂರಿಗೆ ಕರೆದುಕೊಂಡು ಬರಬೇಕು ಎಂಬ ಚಿಂತೆಯಲ್ಲಿದ್ದ ದಿಗಂತ್ ಕುಟುಂಬಕ್ಕೆ ನಿರ್ಮಾಪಕ ಹಾಗೂ ಉದ್ಯಮಿಯೊಬ್ಬರು ಸಹಾಯ ಮಾಡಿದ್ದರಂತೆ.
ಹೌದು, ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್ ಅವರು ಚಿಂತೆಯಲ್ಲಿದ್ದ ದಿಗಂತ್ ಕುಟುಂಬಕ್ಕೆ ಧೈರ್ಯ ತುಂಬಿ ಏರ್ ಲಿಫ್ಟ್ ಮಾಡಲು ಸಹಾಯ ಮಾಡಿದ್ದರಂತೆ. ಈ ಬಗ್ಗೆ ಐಂದ್ರಿತಾ ಸ್ವತಃ ಹೇಳಿಕೊಂಡಿದ್ದು, ಅವರನ್ನು ದೇವರೇ ಕಳುಹಿಸಿದಂತಿದೆ. ಅವರಿಗೆ ಅದೆಷ್ಟೇ ಧನ್ಯವಾದ ಹೇಳಿದರೂ ಸಾಲದು ಎಂದು ಬರೆದುಕೊಂಡಿದ್ದಾರೆ.
ದೇವರೇ ನಿಮ್ಮನ್ನ ಕಳುಹಿಸಿದ್ದು ಎಂದ ಐಂದ್ರಿತಾ
ದುಃಸ್ವಪ್ನದಂತೆ ಒಂದು ಘಟನೆ ಜೀವನದಲ್ಲಿ ಬಂದು ಹೋಗಿದೆ. ನಾವೀಗ ಮನೆಗೆ ಮನೆಗೆ ಮರಳಿದ್ದೇವೆ! ಈ ಸವಾಲಿನ ಸಮಯದಲ್ಲಿ ನಮಗೆ ಸಹಾಯ ಮಾಡಿದ ಒಬ್ಬ ವ್ಯಕ್ತಿಗೆ ನಾವು ಸಾಕಷ್ಟು ಧನ್ಯವಾದ ಹೇಳಿದರೂ ಸಾಲದು.ಗೋವಾದಿಂದ ಬೆಂಗಳೂರಿಗೆ ಏರ್ಲಿಫ್ಟಿಂಗ್ ಅನ್ನು ವ್ಯವಸ್ಥೆ ಮಾಡಲು ನಿಮ್ಮ ಸಹಾಯ ಎಂದಿಗೂ ಮರೆಯಲೂ ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
ಅನುಶ್ರೀಗೆ ಶಿವಣ್ಣ ಕೊಟ್ರು ಸೂಪರ್ ಗಿಫ್ಟ್, ಭಾವುಕರಾಗಿ ಹೀಗಂದ್ರು ನಿರೂಪಕಿ!
ಇನ್ನು ಕೆವಿಎನ್ ಪ್ರೊಡಕ್ಷನ್ ಕನ್ನಡದಲ್ಲಿ ಹಲವಾರು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾವನ್ನು ಸಹ ಇದೇ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ದ್ರುವ ಸರ್ಜಾ ಅವರ ಮುಂದಿನ ಸಿನಿಮಾವನ್ನು ಈ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada