ಮೇಕೆದಾಟು ಮಾಡ್ಲಿ, ಬಿಡ್ಲಿ. ನನ್ನ ವಿರುದ್ಧ ಏನೆಲ್ಲ ಪ್ರಯತ್ನ ನಡೆಯಬೇಕೋ ನಡೆಯುತ್ತಿದೆ. ಒಂದು ದಿನ ಕೇಸ್ ಹಾಕಬಹುದಿತ್ತು. ದಿನಾ ಕೇಸ್ ಹಾಕುವ ಪ್ರಮೇಯ ಏನಿತ್ತು. ನಮ್ಮ ಮೇಲೆ ಅಷ್ಟೇ ಯಾಕೆ ಕೇಸ್. ಬಿಜೆಪಿ ಅವರ ಮೇಲೆ ಕೇಸ್ ಹಾಕಿಲ್ಲ. ಬಹಳ ಅಂದ್ರೆ ಜೈಲಿಗೆ ಹಾಕಬಹುದು, ಖುಷಿ ಪಡಬಹುದು, ಪಡಲಿ ಬಿಡಿ ಎಂದರು.ಮೇಕೆದಾಟು ಯೋಜನೆ ಬದಲು, ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿ ಮಾಡುವ ವಿಚಾರವಾಗಿ ಬಗ್ಗೆ ಸರ್ಕಾರವೇ ಒಂದು ಸಮಿತಿ ರಚನೆ ಮಾಡಲಿ. ಮತ್ತೆ 5 ದಿನಗಳ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಲಾಗಿದೆ. ಈಗಿರುವ ಕೊರೊನಾ ಮಾರ್ಗಸೂಚಿ ಸಡಿಲ ಆದ ನಂತರ ಪಾದಯಾತ್ರೆ ಮಾಡ್ತೇವೆ ಎಂದು ತಿಳಿಸಿದರು. ಟಾರ್ಗೆಟ್ ಶಿವಕುಮಾರ್ ಮಾಡಿದ್ರೂ ಹೋರಾಟಕ್ಕೆ ಸಿದ್ದ, ದಿನಾ ಒಂದು ಕೇಸ್ ಹಾಕ್ತಾರೆ. CM ರಾಮನಗರಕ್ಕೆ ಬಂದಾಗಲೆ ಕೇಸ್ ದಾಖಲಾಗಬೇಕಿತ್ತು ಯಾಕಿಗಿಲ್ಲ? ನಾವು ಕೋರ್ಟ್ಗೂ ಹಾಕ್ತಿವಿ, ಸರ್ಕಾರಕ್ಕೂ ಕಾಗದ ಬರಿತೇವೆ. ನಮಗೂ ಕಾಲ ಬರುತ್ತೆ, ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ ಎಂದು ಬಿಜೆಪಿ ಸರ್ಕಾರದ ಕ್ರಮಕ್ಕೆ ತಿರುಗೇಟು ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada