ಉಡುಪಿ : ರಾಜ್ಯದಲ್ಲಿ ಹಲಾಲ್ ಕಟ್ V/s ಜಟ್ಕಾ ಕಟ್ ವಿವಾದದ ಕುರಿತಂತೆ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಹಲಾಲ್- ಜಟ್ಕಾ ಕಟ್ ವಿವಾದವನ್ನು ಕೆಲವು ವ್ಯಕ್ತಿಗಳು ಸೃಷ್ಠಿ ಮಾಡಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾವ ರೀತಿ ಪೂಜೆ ಮಾಡುತ್ತಾರೆಯೋ ಮಾಡಿಕೊಳ್ಳಲಿ. ಯಾವ ಪದ್ಧತಿ ಇದೆಯೋ ಮಾಡಿಕೊಂಡು ಹೋಗಲಿ. ಮುಸ್ಲಿಮರು ಹಲಾಲ್ ಮೂಲಕ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಬೇಕಾದರೆ ಮಾಡಿಕೊಂಡು ಹೋಗಲಿ. ಇದರಲ್ಲಿ ಗೊಂದಲ ಯಾಕೆ ಸೃಷ್ಠಿಸಿದ್ದಾರೆ? ಎಂದು ಪ್ರಶ್ನೆಸಿದ್ದಾರೆ.
ಹಲಾಲ್- ಜಟ್ಕಾ ಕಟ್ ವಿವಾದವನ್ನು ಕೆಲವು ವ್ಯಕ್ತಿಗಳು ಹಾಗೂ ಪಕ್ಷದವರು ಸೃಷ್ಠಿ ಮಾಡಿದ್ದಾರೆ. ಈ ಮೂಲಕ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada