ದುರಂತ ಘಟನೆಯೊಂದರಲ್ಲಿ, ಕೆನಡಾದ ಒಂಟಾರಿಯೊದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಒಂಟಾರಿಯೊದ ಕ್ವಿಂಟೆ ವೆಸ್ಟ್ ನಗರದಲ್ಲಿ ಹೆದ್ದಾರಿ 401 ರಲ್ಲಿ ಶನಿವಾರದಂದು ವ್ಯಾನ್ ಮತ್ತು ಟ್ರಾಕ್ಟರ್ ಟ್ರೈಲರ್ ನಡುವೆ ಈ ಘಟನೆ ನಡೆದಿದೆ ಎಂದು ಕೆನಡಿಯನ್ ಪ್ರೆಸ್ ವರದಿ ಮಾಡಿದೆ.
ಹರ್ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್ಪಾಲ್ ಸಿಂಗ್, ಮೋಹಿತ್ ಚೌಹಾಣ್ ಮತ್ತು ಪವನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅದು ತಿಳಿಸಿದೆ.
ಬಲಿಯಾದವರು 21 ರಿಂದ 24 ವರ್ಷ ವಯಸ್ಸಿನವರು. ಅವರೆಲ್ಲರೂ ಗ್ರೇಟರ್ ಟೊರೊಂಟೊ ಮತ್ತು ಮಾಂಟ್ರಿಯಲ್ ಪ್ರದೇಶದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಘಟನೆಯನ್ನು ‘ಹೃದಯ ವಿದ್ರಾವಕ ದುರಂತ’ ಎಂದು ಬಣ್ಣಿಸಿದ್ದಾರೆ.
ಕೆನಡಾದಲ್ಲಿ ಹೃದಯ ವಿದ್ರಾವಕ ದುರಂತ: ಶನಿವಾರ ಟೊರೊಂಟೊ ಬಳಿ ಕಾರು ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ. ಸಂತ್ರಸ್ತರ ಕುಟುಂಬಗಳಿಗೆ ಆಳವಾದ ಸಂತಾಪ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada