ಕುಟುಂಬ ಸಮೇತ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಎಂಟಿಬಿ
ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂದವರಿಗೆ ಅದ್ದೂರಿ ಇಪ್ತಿಯಾರ್ ಕೂಟ
ಹೊಸಕೋಟೆ ನಗರದ ಸುಲ್ತಾನ್ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಔತಣ ಕೂಟ
ಆಂಕರ್: ಪೌರಾಡಳಿತ ಸಚಿವ ಎಂಟಿಬಿ ನಾಗರಾಜು, ಅವರ ಮಗ ನಿತೀಷ್ ಪುರುಷೋತ್ತಮ್ ಹಾಗು ಎಂಟಿಬಿ ನಾಗರಾಜು ಪತ್ನಿ ಶಾಂತಮ್ಮ ರಂಜಾನ್ ಹಬ್ಬದ ಪ್ರಯುಕ್ತ ಇಪ್ತಿಯಾರ್ ಕೂಟ ಆಯೋಜನೆ ಮಾಡಿದ್ದು, ಮುಸ್ಲಿಂ ಬಾಂದವರಿಗೆ ಬಿರಿಯಾನಿ, ಕಬಾಬ್, ಪಿಶ್ ಸೇರಿದಂತೆ ಅದ್ದೂರಿ ಭೋಜನವನ್ನು ಉಣಬಡಿಸಿದ್ರು..
ಇದೇ ಸಂದರ್ಭದಲ್ಲಿ ಮಾತನಾಡಿದ, ಎಂಟಿಬಿ ನಾಗರಾಜುರವರು ಹೊಸಕೋಟೆ ತಾಲ್ಲೂಕಿನಲ್ಲಿ ರೌಡಿಸಂ ಗುಡಾಂಗಿರಿ ತಾಂಡವಾಡುತ್ತಿದ್ದು, ಕೆಲ ಗ್ರಾಮಗಳಲ್ಲಿ ಮತ ಚಲಾಹಿಸುವಾಗ ಇರಲಿಲ್ಲ. ಆದರೆ 2004 ರಲ್ಲಿ ನಾನು ಹೊಸಕೋಟೆಗೆ ಬಂದ ಮೇಲೆ ಈ ಎಲ್ಲಾ ದಬ್ಬಾಳಿಕೆಗೆ ಕಡಿವಾಣ ಹಾಕಿ ಎಲ್ಲಾ ಸಮುದಾಯಗಳನ್ನು ಸಾಮರಸ್ಯದಿಂದ ಒಟ್ಟುಗೂಡಿಸಿ ತಾಲ್ಲೂಕಿನ ಅಭಿವೃದ್ಧಿ ಮಾಡಿದ್ದೇನೆ . ನಾನು ಈ ಕ್ಷೇತ್ರಕ್ಕೆ ಬಂದಾಗಿನಿಂದ ಯಾರೊಬ್ಬರಿಗೂ ಕಿಂಚಿತ್ತು ತೊಂದರೆ ಕೊಟ್ಟಿಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದ್ರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: