ದೇಶದಲ್ಲಿ ಈವರೆಗೆ ಶ್ರೀಮಂತರಿಗೆ ಮಾತ್ರವೇ ಕೊರೊನಾ ಬಂದಿರೋದು. ಅದು ವಿಮಾನ ಯಾನ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಹೊರತು, ಪೌರ ಕಾರ್ಮಿಕರಿಗೆ, ಬಡವರಿಗೆ ಯಾರಿಗೂ ಬಂದಿಲ್ಲ ಎಂಬುದಾಗಿ ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರನಲ್ಲಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಇಡೀ ದೇಶದಲ್ಲಿ ಬಡವರಿಗೆ, ಪೌರ ಕಾರ್ಮಿಕರಿಗೆ ಯಾರಿಗೂ ಇದುವರೆಗೆ ಕರೋನಾ ಬಂದಿಲ್ಲ.
ವಿಮಾನಯಾನದಲ್ಲಿ ಪ್ರಯಾಣ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಮಾತ್ರವೇ. ಬಡವರಿಗೆ ಇದುವರೆಗೆ ಎಲ್ಲಿಯೂ ಬಂದಿಲ್ಲ. ಬರೋದು ಕೂಡ ಬೇಡ. ಇನ್ನೂ ಶುಚಿತ್ವವನ್ನು ಕಾಪಾಡಿಕೊಳ್ಳಿ, ಸಾಮಾಜಿಕ ಅಂತರದೊಂದಿಗೆ ಕೆಲಸ ಮಾಡಿ. ಮಾಸ್ಕ್ ಕೊಟ್ಟಿದ್ದಾರೆ. ಮಾಸ್ಕ್ ಬಳಸಿಕೊಂಡು ವರ್ಕ್ ಮಾಡಿ.. ಯಾವುದೇ ಭಯಬೇಡ. ಯಾರೂ ಭಯವನ್ನೂ ಪಡಬೇಡಿ ಎಂಬುದಾಗಿ ಧೈರ್ಯ ತುಂಬಿದರು.