ಸಂಭಾವ್ಯ ನೆರೆ ಬಾಧಿತ ಗ್ರಾಮಳ ಮಾಹಿತಿ ಪಡೆದ ಸಚಿವ ಗೋವಿಂದ ಕಾರಜೋಳ.

ಪ್ರವಾಹ ಮುನ್ನೆಚ್ಚರಿಕೆ ಹಾಗೂ ಸಂಭಾವ್ಯ ಪ್ರವಾಹ ಎದುರಿಸಲು ಬೇಕಾದ ಕ್ರಮಗಳ ಕುರಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆಯನ್ನ ನಡೆಸಲಾಗಿದ್ದು. ಪ್ರವಾಹ ಎದುರಿಸಲು ಬೇಕಾಗ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನ ಸಚಿವರು ಪಡೆದು ಕೊಂಡಿದ್ದಾರೆ. ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾ ಭವನದಲ್ಲಿ ನಡೆಸ ಸಭೆಯಲ್ಲಿ ಚಿಕ್ಕೋಡಿ ವಿಭಾಗದ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಕರೆಸಿ ಮಾಹಿತಿಯನ್ನು ಉಸ್ತುವಾರಿ ಸಚಿವರು ಪಡೆದುಕೊಂಡಿದ್ದಾರೆ. ಇನ್ನು ಇದೆ ವೇಳೆ ಮಾತನಾಡಿದ ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಹಾರಾಷ್ಟ್ರದ ಜಲಾಶಯದಗಳು ಇದುವರೆಗೆ ತುಂಬದ ಕಾರಣ ಈ ಬಾರಿ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲಾ ಒಂದು ವೇಳೆ ಪ್ರವಾಹ ಪರಿಸ್ಥಿತಿ ಬಂದರು ಜಿಲ್ಲಾಡಳಿತ ಎಲ್ಲಾ ತಯಾರಿಗಳನ್ನ ಮಾಡಿ ಕೊಂಡಿದ್ದು ಪ್ರವಾಹ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ. ಇನ್ನು ಈಗಾಗಲೆ ಮನೆಗಳು ಬಿದ್ದವರಿ ಪರಿಹಾರ ನೀಡುವ ಕೆಲಸ ಕೂಡ ಆಗುತ್ತಿದ್ದು ಜಿಲ್ಲಾಧಿಕಾರಿ ಖಾತೆಯಲ್ಲಿ ಸಾಕಷ್ಟು ಹಣ ಇದ್ದು ಕೂಡಲೆ ಖರ್ಚು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಅಧಿಕಾರಿಗಳ ಸಭೆ ಬಳಿಕ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ತೆರಳಿದ ಸಚಿವರು ನದಿ ಹಾಗೂ ಪ್ರವಾದ ಬಂದಾಗ ಸಂತ್ರಸ್ತರಿಗೆ ಬೇಕಾದ ಕಾಳಜಿ ಕೇಂದ್ರಗಳನ್ನ ವೀಕ್ಷಣೆ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ .. ಕೆಸಿ ವ್ಯಾಲಿ ನೀರಿನಲ್ಲಿ‌ ಮತ್ತೆ ಕಾಣಿಸಿಕೊಂಡ ನೊರೆ,

Tue Jul 19 , 2022
ಕೆಸಿ ವ್ಯಾಲಿ ನೀರಿನಲ್ಲಿ‌ ಮತ್ತೆ ಕಾಣಿಸಿಕೊಂಡ ನೊರೆ, ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ನೀರು ಹರಿಸುವ ಕೆ.ಸಿ.ವ್ಯಾಲಿ ಯೋಜನೆ, ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸುವ ನೀರಿನಲ್ಲಿ ಕಂಡುಬಂಡ ಯತೇಚ್ಚವಾದ ನೊರೆ, ನೊರೆಯುಕ್ತ ನೀರುಕಂಡು ಆತಂಕಗೊಂಡ ಸ್ಥಳೀಯರು, ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಕೆರೆಯ ಬಳಿ ಕಂಡು ಬರುತ್ತಿರುವ ನೊರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial