ಸ್ಯಾಂಡಲ್ವುಡ್ ನ ಬ್ಯೂಟಿಫುಲ್ ಹೀರೋಯಿನ್ ಹರಿಪ್ರಿಯಾ ಹಾಗೂ ಕಂಚಿನ ಕಂಠದ ನಟ ವಸಿಷ್ಠಸಿಂಹ ಇಬ್ಬರೂ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮದುವೆ ಪರ್ವ ಆರಂಭವಾದಂತೆ ಕಾಣಿಸ್ತಾಇದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಇಂಡಸ್ಟ್ರಿಯ ಹಲವಾರು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯಾರಿಗೂ ಹೇಳದೇ, ಇನ್ನು ತಮ್ಮ ಪ್ರೀತಿಯ ಬಗ್ಗೆ ಒಂದು ಸುಳಿವೂ ನೀಡದೇ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಶಾಕ್ ನೀಡಿದೆ. ಕೆಲದಿನಗಳ ಹಿಂದಷ್ಟೇ ದುಬೈ ಪ್ರವಾಸ ಮುಗಿಸಿ ಬಂದ ಈ ಜೋಡಿ ಕೈ ಕೈ ಹಿಡಿದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ತಮ್ಮಿಬ್ಬರ ಮಧ್ಯೆ ಏನೋ ನಡೀತಾ ಇದೆ ಅನ್ನೋ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದ ಕಪಲ್ , ದುಬೈನಿಂದ ಬರ್ತಾ ಇದ್ದಹಾಗೆ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.ಈಗ ನಿಶ್ಚಿತಾರ್ಥದ ಬಳಿಕ ಸ್ವತಃ ನಟಿ ಹರಿಪ್ರಿಯಾ ಅವರೇ ಒಂದು ಫೋಟೋ ಶೇರ್ ಮಾಡಿದ್ದಾರೆ. ಸಿಂಹದ ಮಡಿಲಲ್ಲಿ ಮಲಗಿರುವ ಒಂದು ಮಗಿವಿನ ಫೋಟೋದ ಜೊತೆಗೆ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಕಮೆಂಟ್ಗಳ ಮೇಲೆ ಕಮೆಂಟ್ ಮಾಡ್ತಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada