ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ವೇದ ಚಿತ್ರ ಯಶಸ್ವಿ ಹಿನ್ನಲೆಯಲ್ಲಿ, ನಿನ್ನೆ ಸಂಜೆ ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ಶಿವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಣ್ಣ ಅಭಿಮಾನಿಗಳು ಶಿವರಾಜ್ ಕುಮಾರ ಅಗಮಿಸುತ್ತಿದ್ದಾರೆಂದು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಆದರೆ ನಿರಾಸೆಗೊಂಡ ಮರಳುವಂತೆ ಆಯಿತು.ಹೌದು,,, ಹುಬ್ಬಳ್ಳಿಯಲ್ಲಿ ವೇದ ಚಿತ್ರ ಯಶಸ್ವಿ ಹಿನ್ನಲೆ, ಶಿವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ಶಿವರಾಜ ಕುಮಾರ ಅಭಿಮಾನಿ ಬಳಗದಿಂದ ಶಿವಾನಂದ ಮುತ್ತಣ್ಣವರ್, ಹಾಗೂ ವಿಜಯಕುಮಾರ್ ಅಪ್ಪಾಜಿ ಅವರು ಮಾಧ್ಯಮ ಸುದ್ದಿಗೋಷ್ಠಿ ಮಾಡಿ ಇಂದು ಶಿವರಾಜ್ ಕುಮಾರ ಹುಬ್ಬಳ್ಳಿಗೆ ಆಗಮಿಸಿ ಶಿವ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದರು. ಆದರೆ ಹುಬ್ಬಳ್ಳಿಗೆ ಆಗಮಿಸಿದ ಶಿವರಾಜ್ ಕುಮಾರ ಚಿತ್ರಮಂದಿರಕ್ಕೆ ಅಷ್ಟೇ ಭೇಟಿ ನೀಡಿ, ಶಿವ ಸಂಭ್ರಮದಲ್ಲಿ ಭಾಗಿಯಾಗದೆ ಹೋಗಿದ್ದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.ಇನ್ನು ಶಿವಣ್ಣ ಇಲ್ಲಿಗೆ ಬರುತ್ತಾರೆಂದು ಬೃಹತ್ ಸೇಬು ಹಣ್ಣಿನ ಮಾಲೆ, ಡೊಳ್ಳು ಕುಣಿತ, ಡಿಜೆ, ವಿವಿದ ಭಟ್ಟೆ ಧರಿಸಿದ ಚಿಕ್ಕ ಮಕ್ಕಳು ಹೀಗೆ ವಿಭಿನ್ನವಾಗಿ ತಯಾರಿ ಮಾಡಿದ ಅಭಿಮಾನಿಗಳಿಗೆ ಶಿವಣ್ಣ ಬರದೆ ಇರುವುದರಿಂದ ಗಂಡು ಮೆಟ್ಟಿನ ನಾಡಿನ ಅಭಿಮಾನಿಗಳು ಬೇಸ ವ್ಯಕ್ತ ಪಡಿಸಿದ್ದಾರೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….