ಕೆಂಪು ಅಕ್ಕಿಯಿಂದ ಸಿಗುವ ‘ಆರೋಗ್ಯ’ ಪ್ರಯೋಜನಗಳು.

ಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಅನ್ನ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈ ಅಕ್ಕಿಯಿಂದಲೂ ಕೂಡ ಕೆಲವು ರೋಗಗಳನ್ನು ದೂರಮಾಡಬಹುದು. ಹೇಗೆ ಅಂತೀರಾ.

* ಫುಡ್ ಪಾಯಿಸನ್ ಸಮಸ್ಯೆ ಅಥವಾ ಅಜೀರ್ಣ ಸಮಸ್ಯೆಗಳಿಂದ ಭೇದಿ ಉಂಟಾಗಿ ಸುಸ್ತಾಗಿದ್ದಾಗ ಅಕ್ಕಿ ತರಿಗಂಜಿ ಮಾಡಿ ಉಪ್ಪು ಬೆರಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.

* ಮೊಸರು ಬೆರೆಸಿದ ಕೆಂಪಕ್ಕಿಯ ಅನ್ನವನ್ನು ನಿತ್ಯವೂ ಸೂರ್ಯೋದಯಕ್ಕೆ ಮೊದಲು ಸೇವಿಸಿದರೆ ಅರೆತಲೆ ನೋವು ಕಡಿಮೆಯಾಗುತ್ತದೆ.

* ಚಿಕ್ಕ ಮಕ್ಕಳಿಗೆ ಅಥವಾ ದೊಡ್ಡವರಿಗೆ ಬೇಸಿಗೆಯಲ್ಲಿ ಬೆವರು ಗುಳ್ಳೆಗಳು ಉಂಟಾಗುತ್ತವೆ. ಅಂತಹ ಸಮಯದಲ್ಲಿ ಅಕ್ಕಿ ತೊಳೆದ ನೀರಿನಲ್ಲಿ ಕೈ ಕಾಲುಗಳನ್ನು ತೊಳೆದರೆ ಬೆವರು ಗುಳ್ಳೆ ಸಮಸ್ಯೆ ಶಮನವಾಗುತ್ತದೆ.

* ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದವರು ಕೆಂಪು ಅಕ್ಕಿಯಲ್ಲಿ ಅನ್ನ ಮಾಡಿ ತಿನ್ನಬೇಕು.

* ಅಕ್ಕಿಯನ್ನು 2ನೇ ಬಾರಿ ತೊಳೆದ ನೀರಿಗೆ ನೆಲ್ಲಿಕಾಯಿ ರಸ ಎರಡು ಚಮಚ ಬೆರಸಿ ಕುಡಿದರೆ ಸ್ತ್ರೀಯರಲ್ಲಿ ಬಿಳುಪು ಹೋಗುವುದು ಅಥವಾ ಬಿಳಿ ಸೆರಗು ಕಡಿಮೆಯಾಗುತ್ತದೆ.

* ಅಕ್ಕಿಯ ಹೊಟ್ಟು ಪೌಷ್ಟಿಕಾಂಶಗಳಿಂದ ಕೂಡಿದೆ. ಅಕ್ಕಿಯ ಹೊಟ್ಟನ್ನು ಎಳ್ಳು, ನೆಲಗಡಲೆ, ಗೋಡಂಬಿಯನ್ನು ಬೆರೆಸಿ ಬೆಲ್ಲದ ಪಾಕಕ್ಕೆ ಸೇರಿಸಿ ಲಾಡುವಿನಂತೆ ಮಾಡಿ ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಶ್ರೀಮಂತರ ಮನೆಗೆ ಸೊಸೆಯಾಗಿ ಹೋಗುವ ಮೊದಲು ಇದನ್ನು ತಿಳಿದುಕೊಂಡಿರಬೇಕಿತ್ತು

Fri Jan 13 , 2023
ಶ್ರೀಮಂತ ವ್ಯಕ್ತಿಯನ್ನು ಮದುವೆಯಾದ ನಂತರ, ನೀವು ದೀರ್ಘಕಾಲದವರೆಗೆ ಗೌರವ, ಹಣ, ಸ್ಥಾನಮಾನ ಮತ್ತು ಸಾಕಷ್ಟು ಖ್ಯಾತಿಯನ್ನು ಪಡೆಯುತ್ತೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಎಲ್ಲರ ದೃಷ್ಟಿಯಲ್ಲಿ ನಿಮ್ಮನ್ನು ಯೋಗ್ಯರನ್ನಾಗಿ ಮಾಡುವುದಲ್ಲದೆ, ನಿಮಗೆ ಬೇಕಾದ ವಸ್ತುಗಳಿಗಾಗಿ ನೀವು ಎಂದಿಗೂ ಕಷ್ಟಪಡಬೇಕಾಗಿಲ್ಲ. ನಿಮ್ಮ ಸ್ಟೇಟಸ್‌ನ್ನು ಹೆಚ್ಚಿಸುತ್ತದೆ. ನನ್ನೊಂದಿಗೆಯೂ ಅದೇ ಆಗಿತತು. ನಾನು ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿದ್ದೇನೆ.ಮದುವೆಯ ನಂತರ ನನ್ನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತಿದ್ದೆ. ನಾನು ಕೂಡ ಸಿನಿಮಾದಲ್ಲಿ ತೋರಿಸುವ […]

Advertisement

Wordpress Social Share Plugin powered by Ultimatelysocial