ನಟನೆಯನ್ನು ಬಿಡಲು ಮಹೇಶ್ ಬಾಬು ಕಾರಣವೇನು?

 

ಸಲ್ಮಾನ್ ಖಾನ್ ನಟನೆಯ ‘ಜಬ್ ಪ್ಯಾರ್ ಕೈಸೆ ಹೋತಾ ಹೈ’ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ ನಮ್ರತಾ ಶಿರೋಡ್ಕರ್ ಅವರು, 1999ರಲ್ಲಿ ತೆರೆಕಂಡ ‘ವಾಸ್ತವ್’ ಚಿತ್ರದ ಮೂಲಕ ನಾಯಕಿಯಾಗಿ ಬೆಳೆದರು. ಆಮೇಲೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿ ಜನಪ್ರಿಯತೆ ಪಡೆದರು. ಮಿಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡಿದ್ದ ನಮ್ರತಾಗೆ ದೊಡ್ಡ ಮಟ್ಟದ ಬೇಡಿಕೆಯಿತ್ತು. ಹೀಗಿರುವಾಗಲೇ ಅವರು ಮಹೇಶ್ ಬಾಬು ಜೊತೆ ಮದುವೆಯಾಗಿ ನಟನೆಯಿಂದ ದೂರ ಸರಿದರು.ನಟನೆಯಿಂದ ದೂರಾದ ನಮ್ರತಾ ಶಿರೋಡ್ಕರ್ಮದುವೆಯಾದ ನಂತರ ನಟಿ ನಮ್ರತಾ ಶಿರೋಡ್ಕರ್ ಅವರು ನಟನೆಯಿಂದ ದೂರವುಳಿದರು. ಮಕ್ಕಳ ಆರೈಕೆ, ಪತಿಯ ಸಿನಿಮಾ ಕೆಲಸಗಳಿಗೆ ಸಹಕಾರ ನೀಡುವುದು, ಕುಟುಂಬ ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿರುವ ನಮ್ರತಾ ಅವರು ಯಾಕೆ ನಟನೆಯಿಂದ ದೂರವುಳಿದೆ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.ಕಾರಣ ತಿಳಿಸಿದ ನಮ್ರತಾ ಶಿರೋಡ್ಕರ್”ನನಗೆ ಕೆಲಸ ಮಾಡದಿರುವ ಹುಡುಗಿ ಪತ್ನಿಯಾಗಿ ಬರಬೇಕು ಎಂದು ಮಹೇಶ್ ಬಾಬು ಮೊದಲೇ ಸ್ಪಷ್ಟವಾಗಿ ಹೇಳಿದ್ದರು. ನಟನೆ ಮಾಡದಿದ್ದರೂ ಕೂಡ ಮದುವೆಯಾದಮೇಲೆ ನಾನು ಕೆಲಸ ಬಿಡಬೇಕು ಎಂದು ಅವರು ಹೇಳಿದ್ದರು. ಹೀಗೆ ನಮ್ಮಿಬ್ಬರ ಮಧ್ಯೆ ಕೆಲ ಕಂಡೀಶನ್ ಇತ್ತು. ನಾನು ಮುಂಬೈನಲ್ಲಿ ಇದ್ದಿದ್ದರಿಂದ ಮದುವೆಯಾದಮೇಲೆ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಇರಬೇಕು ಎಂದುಕೊಂಡಿದ್ದೆವು. ನನಗೆ ಬಂಗ್ಲೆಯಲ್ಲಿ ಇರೋಕಾಗತ್ತೋ ಇಲ್ಲವೋ ಎನ್ನುವ ಭಯವಿತ್ತು. ಆದರೆ ಮಹೇಶ್ ಬರುತ್ತಾರಾ ಇಲ್ಲವಾ ಎನ್ನುವ ಸಂದೇಹ ಇತ್ತು. ಹೈದರಾಬಾದ್‌ಗೆ ಬಂದ್ರೆ ನಾನು ಅಪಾರ್ಟ್‌ಮೆಂಟ್‌ನಲ್ಲಿ ಇರುವೆ ಎಂದು ಕಂಡೀಶನ್ ಹಾಕಿದ್ದೆ. ಮದುವೆ ನಂತರ ಸಿನಿಮಾ ಬೇಡ ಅಂತ ಮಹೇಶ್ ಹೇಳಿದ್ರು. ಹಾಗಾಗಿ ಒಪ್ಪಿಕೊಂಡ ಎಲ್ಲ ಸಿನಿಮಾಗಳನ್ನು ಮುಗಿಸಿ ನಾನು ಮಹೇಶ್ ಅವರನ್ನು ಮದುವೆಯಾದೆ. ನಮ್ಮ ಮಧ್ಯೆ ತುಂಬ ಸ್ಪಷ್ಟತೆ ಇತ್ತು” ಎಂದು ಮಹೇಶ್ ಬಾಬು ಪತ್ನಿ ನಮ್ರತಾ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ.

Thu Dec 22 , 2022
ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ ದಾರಿಹೋಕರನ್ನ ತಡೆದು ಮೊಬೈಲ್ ಸುಲಿಗೆ ಮಾಡ್ತಿದ್ದ ಆರೋಪಿಗಳ ಬಂಧನ. ಸೈಯದ್ ಪರ್ವಿಜ್, ಶಾಹಿದ್ ಪಾಷಾ ಬಂಧಿತರು. ಬಂಧಿತರಿಂದ 3 ಲಕ್ಷ ರೂ ಮೌಲ್ಯದ 10 ಮೊಬೈಲ್ ಹಾಗೂ ಬೈಕ್ ವಶ. ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಮುಂದುವರಿದ ತನಿಖೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…. Please follow and like us:

Advertisement

Wordpress Social Share Plugin powered by Ultimatelysocial