ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ: ಹಿಜಾಬ್‌ ವಿಚಾರವಾಗಿ ಲಾಲು ಯಾದವ್ ಹೇಳಿಕೆ

ನವದೆಹಲಿ: ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಿಳಿಸಿದ್ದಾರೆ.

ಕರ್ನಾಟಕದ ಹಿಜಾಬ್‌ ವಿವಾದದ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಅವರು, ‘ಬಿಜೆಪಿಯವರು ಹಣದುಬ್ಬರ, ಬಡತನದ ಬಗ್ಗೆ ಮಾತನಾಡುತ್ತಿಲ್ಲ.

ಕೇವಲ ಅಯೋಧ್ಯೆ ಮತ್ತು ವಾರಾಣಸಿ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಇದು ಬಿಜೆಪಿಯ ಹತಾಶೆಯ ಮೂಲಕ ತಿಳಿದುಬರುತ್ತದೆ. ಅವರು ಕೇವಲ ಗಲಭೆ ಮತ್ತು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಲಾಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’70 ವರ್ಷಗಳ ಹಿಂದೆ ನಮ್ಮ ಪೂರ್ವಜರು ಬ್ರಿಟಿಷರನ್ನು ಈ ದೇಶ ತೊರೆಯುವಂತೆ ಮಾಡಿದರು. ಆದರೆ ಈಗ ಬ್ರಿಟಿಷರು ಬಿಜೆಪಿಯ ರೂಪದಲ್ಲಿ ಮರಳಿದ್ದಾರೆ’ ಎಂದೂ ಲಾಲು ಹೇಳಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾವು ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಆರ್‌ಜೆಡಿ ಮುಖ್ಯಸ್ಥ ತಿಳಿಸಿದ್ದಾರೆ. ಫೆ. 10 ರಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಶರ್ಟ್ ಬಟನ್‌ಗಳು ಎಡಭಾಗದಲ್ಲಿ ಮತ್ತು ಪುರುಷರಿಗೆ ಬಲಭಾಗದಲ್ಲಿ ಏಕೆ?

Wed Feb 9 , 2022
  ನೀವು ಮಹಿಳಾ ಶರ್ಟ್ ಅನ್ನು ತೆಗೆದುಕೊಂಡರೆ, ಗುಂಡಿಗಳು ಸಾಮಾನ್ಯವಾಗಿ ಎಡಭಾಗದಲ್ಲಿರುವುದನ್ನು ನೀವು ಗಮನಿಸಬಹುದು. ಆದರೆ ನೀವು ಪುರುಷರ ಶರ್ಟ್ ಅನ್ನು ಪರಿಶೀಲಿಸಿದರೆ, ಅವರು ಬಲಭಾಗದಲ್ಲಿದ್ದಾರೆ. ವಿವಿಧ ಕಡೆ ಗುಂಡಿಗಳು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಸರಿ, ಇದಕ್ಕೆ ಯಾವುದೇ ದೃಢಪಡಿಸಿದ ಕಾರಣವಿಲ್ಲ, ಆದರೆ ಅದೇ ಸುತ್ತ ಅನೇಕ ಸಿದ್ಧಾಂತಗಳಿವೆ. ಆಯುಧವನ್ನು ತಲುಪಲು ಪುರುಷರಿಗೆ ಸುಲಭವಾಯಿತು ಅನೇಕ ಇತಿಹಾಸಕಾರರು ಪ್ರಬಲವಾದ ಕೈಯಿಂದ ಪುರುಷರು ತಮ್ಮ ಶಸ್ತ್ರಾಸ್ತ್ರಗಳನ್ನು ತಲುಪಲು ಸುಲಭವಾಗಿದೆ ಎಂದು […]

Advertisement

Wordpress Social Share Plugin powered by Ultimatelysocial