ಕೇಸರಿ ಯುವಕರ ಗುಂಪಿಗೆ ಸೆಡ್ಡು ಹೊಡೆದ ಹುಡುಗಿಗೆ 5 ಲಕ್ಷ ರೂ. ಬಹುಮಾನ!

 

ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿದ್ದ ಗುಂಪಿನ ವಿರುದ್ಧ ಸೆಡ್ಡು ಹೊಡೆದು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಜಮಾತ್‌ ಉಲೆಮಾ-ಎ-ಹಿಂದ್‌ ಸಂಘಟನೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ.ಪಿಇಎಸ್‌ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ ತೋರಿದ ದಿಟ್ಟತನದ ವೀಡಿಯೋ ವೈರಲ್ ಆಗಿದ್ದು, ಈಕೆಯ ಧೈರ್ಯಕ್ಕೆ ಮೆಚ್ಚಿ ಬಹುಮಾನ ನೀಡಲಾಗಿದೆ.ಮಂಡ್ಯ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಸುತ್ತುವರಿಯಲು ಬಂದಾಗ ಮುಸ್ಕಾನ್‌ ‘ಅಲ್ಲಾಹು ಅಕ್ಬರ್’ ಎಂದು ಕೂಗಿ ತಿರುಗೇಟು ನೀಡಿದ್ದಳು.ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಸ್ಕಾನ್, ನಾನು ಎಂದಿನಂತೆ ಬುರ್ಖಾ ಧರಿಸಿ ಕಾಲೇಜು ಪ್ರವೇಶಿಸಿದೆ. ಈ ವೇಳೆ ಗುಂಪು ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತು. ನಾನು ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಆ ಗುಂಪಿನಲ್ಲಿದ್ದವರಲ್ಲಿ ಕೇವಲ ಶೇ.10ರಷ್ಟು ಮಂದಿ ಮಾತ್ರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಉಳಿದವರು ಹೊರಗಿನಿಂದ ಬಂದವರಾಗಿದ್ದಾರೆ ಎಂದು ಹೇಳಿದಳು.ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಧರ್ಮ ನಾನು ಮಾಡಿದೆ ಎಂದು ಮುಸ್ಕಾನ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Nose Cancer : ಚಳಿಗಾಲದಲ್ಲಿ ಅಥವಾ ಹವಾಮಾನ ಬದಲಾದಾಗ ಮೂಗು ಒಂದು ಕಡೆ ಮುಚ್ಚಿಕೊಳ್ಳುವುದು!

Wed Feb 9 , 2022
    ಚಳಿಗಾಲದಲ್ಲಿ ಅಥವಾ ಹವಾಮಾನ ಬದಲಾದಾಗ ಮೂಗು ಒಂದು ಕಡೆ ಮುಚ್ಚಿಕೊಳ್ಳುವುದು ಸಾಮಾನ್ಯ. ಸಾಮಾನ್ಯವಾಗಿ ಎರಡು ನಾಲ್ಕು ದಿನಗಳ ನಂತರ ಮೂಗು ತಾನಾಗಿಯೇ ತೆರೆದುಕೊಳ್ಳುತ್ತದೆ. ಆದಾಗ್ಯೂ, ಇದರ ನಂತರವೂ ಒಂದು ಬದಿಯ ಮೂಗು ಮುಚ್ಚಿದರೆ, ಅದು ನಿಮಗೆ ಅಪಾಯದ ವಿಷಯವಾಗಬಹುದು.ವೈದ್ಯಕೀಯ ತಜ್ಞರ ಪ್ರಕಾರ, ಈ ರೋಗಲಕ್ಷಣವು ನಿಮ್ಮಲ್ಲಿ ಮೂಗಿನ ಕ್ಯಾನ್ಸರ್ ನ ಸಂಕೇತವಾಗಿರಬಹುದು, ಇದನ್ನು ನಾಸೊಫಾರಿಂಜೆಯಲ್ ಕ್ಯಾನ್ಸರ್ (ಎನ್ ಪಿಸಿ) ಎಂದೂ ಕರೆಯಲಾಗುತ್ತದೆ.ಮೂಗಿನ ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತಾ.?ದಿ ಸನ್ […]

Advertisement

Wordpress Social Share Plugin powered by Ultimatelysocial