ಹಿಂದೂ ಸಂಪ್ರದಾಯದಲ್ಲಿ ಸಿಂಧೂರ ಸುಮಂಗಲಿಯರ ಸಂಕೇತ

ಸಿಂಧೂರ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ನಾರಿಗೂ ಪುರಾತನ ಸಂಬಂಧವಿದೆ. ಸಿಂಧೂರ ಕೇವಲ ಸುಮಂಗಲಿಯರ ಸಂಕೇತ ಅಥವಾ ಪೂಜಾ ಸಾಮಾಗ್ರಿಗಳಲ್ಲಿ ಒಂದು ಮಾತ್ರವಲ್ಲ. ಹಿಂದೂ ಧರ್ಮದಲ್ಲಿ ಸಿಂಧೂರ ಅಥವಾ ಕುಂಕುಮವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಸಿಂಧೂರ ಹಚ್ಚುದರಿಂದ ಸೌಭಾಗ್ಯ ಮತ್ತು ಸಮೃದ್ಧಿಯು ಪ್ರಾಪ್ತವಾಗುತ್ತದೆ ಅನ್ನೋ ನಂಬಿಕೆಯೂ ಹಿಂದೂ ಧರ್ಮದಲ್ಲಿ ಇದೆ.ಕುಂಕುಮ ಸೌಭಾಗ್ಯದ ಸಂಕೇತ ಮಾತ್ರವಲ್ಲ, ಅನೇಕ ಆರೋಗ್ಯಕರ ಪ್ರಯೋಜನಗಳು ಕೂಡ ಇದೆ. ರಕ್ತ ಸಂಬಂಧಿತ ಸಮಸ್ಯೆಗಳನ್ನು ಸಿಂಧುರ ದೂರ ಮಾಡುತ್ತದೆ. ಕುಂಕುಮ ಹಣೆಯ ಮಧ್ಯೆ ಇಡುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ನಿದ್ರಾಹೀನತೆ ಸಮಸ್ಯೆ, ತಲೆನೋವು, ಮಾನಸಿಕ ಅಶಾಂತಿ, ರಕ್ತದ ಒತ್ತಡ ಸಮಸ್ಯೆ ದೂರಾಗಿಸುತ್ತದೆ.ಹಿಂದೂ ಧರ್ಮದಲ್ಲಿ ಗೃಹಿಣಿ ಹಣೆಗಿಡುವ ಕುಂಕುಮ ಅಥವ ಸಿಂಧೂರಕ್ಕೆ ಬಹಳ ವಿಶೇಷ ಮಹತ್ವವಿದೆ. ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ದೀರ್ಘ ಆಯಸ್ಸು ದೇವರು ನೀಡಲಿ ಎಂದು ಹಣೆಗೆ ಕುಂಕುಮ ಹಚ್ಚುತ್ತಾರೆ ಎಂಬ ನಂಬಿಕೆ. ಸಿಂಧೂರ ನಾರಿಯರ ಮೇಕಪ್‌ನ ಒಂದು ಭಾಗ ಮಾತ್ರವಲ್ಲ. ಇದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.ಕುಂಕುಮವನ್ನು ದೇವರ ಆರಾಧನೆಯಲ್ಲಿ, ಪೂಜೆಯ ಸಮಯದಲ್ಲಿ ಬಳಸಲಾಗುತ್ತದೆ. ಏಕೆಂದರೆ ಸಿಂಧೂರವನ್ನು ಶುಭದ ಸಂಕೇತ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಪೂಜೆ ಸಮಯದಲ್ಲಿ ಅರಿಶಿನ ಕುಂಕುಮವನ್ನು ಬಳಸಲಾಗುತ್ತದೆ.ಹಿಂದೂ ಸ್ತ್ರೀಯರು ಸಾಂಪ್ರದಾಯಿಕವಾಗಿ ಹಣೆಗೆ ಸಿಂಧೂರ ಇಡುತ್ತಿದ್ದರು. ಆದರೆ ಈಗ ಈ ಸಿಂಧೂರದ ಜಾಗದಲ್ಲಿ ಬಿಂದಿಗಳು ಲಗ್ಗೆ ಇಟ್ಟು ಹೊಸ ರೂಪ ಪಡೆದುಕೊಂಡಿದೆ. ಸ್ತ್ರೀಯರ ಮುಖದ ಸೌಂದರ್ಯ ಹೆಚ್ಚಿಸಲು ಇಂತಹ ಬಿಂದಿಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಬಿಂದಿಗಳು ವಿಭಿನ್ನ ಶೈಲಿಯಲ್ಲಿ ಮಾಕೆರ್ಟ್ಗಳಲ್ಲಿ ರಾರಾಜಿಸುತ್ತದೆ. ಗೃಹಿಣಿಯರು ಮಾತ್ರವಲ್ಲದೆ ಕಾಲೇಜು ಹುಡುಗಿರು ಇಂತಹ ಹೊಸ ಹೊಸ ಟ್ರೆಂಡ್‌ಗಳಿಗೆ ಅತೀ ಬೇಗನೆ ಆಕರ್ಷಿತರಾಗುತ್ತಿದ್ದಾರೆ. ಉತ್ತಮ ಗುಣಮಟ್ಟದ ಬಿಂದಿಗಳು ಬಳಕೆ ಮಾಡುವುದು ಉತ್ತಮ. ಇನ್ನು ಹಣೆಯಲ್ಲಿ ಹರಳಿನ ಬಿಂದಿಗಳು, ಸೂಕ್ಮ ಕುಸುರಿ ಇರುವ ಬಿಂದಿಗಳನ್ನು ಹಾಕುವುದರಿಂದ ಗ್ರಾಂಡ್ ಲುಕ್ ನೀಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರೀನಾ ಮಗ "ತೈಮೂರ್‌" ಜತೆಗೆ ಅಕ್ಷಯ್‌ ಸಿನಿಮಾ ಮಾಡ್ತಾರೆ; ನಿಜವೋ? ತಮಾಷೆ .

Wed Feb 2 , 2022
ಅಕ್ಷಯ್​ ಕುಮಾರ್​ ಮತ್ತು ಕರೀನಾ ಕಪೂರ್​ ಖಾನ್​ ನಡುವೆ 13 ವರ್ಷಗಳ ವಯಸ್ಸಿನ ಅಂತರ ಇದೆ. ಅಕ್ಷಯ್​ ನಟನೆಯ ಸಿನಿಮಾಗಳ ಶೂಟಿಂಗ್​ ನೋಡಲು ಹೋಗುವಾಗ ಕರೀನಾ ಕಪೂರ್​ ಚಿಕ್ಕ ಬಾಲಕಿ ಆಗಿದ್ದರು.ನಟ ಅಕ್ಷಯ್​ ಕುಮಾರ್​  ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಮಿಂಚುತ್ತಿದ್ದಾರೆ.ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಅವರ ಬಗ್ಗೆ ನಿರ್ಮಾಪಕರಿಗೆ ಎಲ್ಲಿಲ್ಲದ ಭರವಸೆ. ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂಬ […]

Advertisement

Wordpress Social Share Plugin powered by Ultimatelysocial