ವಿಜಯಪುರ: ಹೋಳಿ ಹಬ್ಬದ ಬಣ್ಣದಾಟದ ವೇಳೆ ಬಾಲಕನೋರ್ವನಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ.ಹನಮಂತ ಬೀರಪ್ಪ ವಾಲಿಕಾರ ಎನ್ನುವ ಬಾಲಕನು ಬಣ್ಣದಾಟಕ್ಕೆ ನೀರಿನ ಟ್ಯಾಂಕಿನಲ್ಲಿ ನೀರು ತುಂಬಲು ಹೋಗಿದ್ದಾಗ ನೀರಿನ ಟಾಕಿಗೆ ಕಟ್ಟಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆಈ ಘಟನೆಗೆ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮ ಪಂಚಾಯಿತಿ ಮುಂದೆ 12 ವರ್ಷದ ಹಣಮಂತ ಬೀರಪ್ಪ ವಾಲಿಕಾರ ಮೃತ ಬಾಲಕನ ಶವವಿಟ್ಟು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಕೂಡಗಿ ಎನ್.ಟಿ.ಪಿ.ಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada