ಹೊಸಕೋಟೆ ಬ್ರೇಕಿಂಗ್

 

ಶಾಸಕ ಶರತ್ ಬಚ್ಚೇಗೌಡರು ಇನ್ನೂ ಹುಡುಗಾಟ ಆಡುತ್ತಿದ್ದಾರೆ – ಎಂ.ಟಿ.ಬಿ. ಆರೋಪ

ಆಂಕರ್. ನಂದಗುಡಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ: ಸುಮಾರು ೪೦ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಕಾರಣಾಂತರಗಳಿದ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಆದರೆ ಈಗ ಸೋತಿದ್ದೇನೆ ಆದರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಕಾಂಗ್ರೆಸ್ ಸೇರ್ಪಡೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಕುಮಾರಸ್ವಾಮಿ, ದೇವೇಗೌಡ, ಸಿದ್ಧರಾಮಯ್ಯ ಅವರು ಸಹ ಮಾತನಾಡಿದ್ದಾರೆ ಆದರೆ ಕೆಲಸ ನಿಮಿತ್ತ ಮಾತನಾಡಿದ್ದೇನೆ ವಿನಃ ರಾಜಕೀಯ ವಿಚಾರ ಮಾತನಾಡಿಲ್ಲ. ನಾನು ಒಂದು ಸಾರಿ ಸ್ವಯಂ ಅಪರಾಧ ಮಾಡಿದ್ದೇನೆ ಇನ್ನು ಮುಂದೆ ಏನೇ ಮಾಡಬೇಕಾದರೂ ಆಲೋಚನೆ ಮಾಡಿ ಕರ‍್ಯಕರ್ತರ ಅಭಿಪ್ರಾಯ ಪಡೆದು ಮಾಡುತ್ತೇನೆ. ನನಗೆ ಅಧಿಕಾರ ಶಾಶ್ವತ ಅಲ್ಲ, ಜನರ ಸೇವೆ ಜನರಿಗೆ ಅಭಿವೃದ್ಧಿ ಮಾಡುವುದೇ ನನ್ನ ಮುಖ್ಯ ಗುರಿ.
ನಾನು ಇರೋತನಕ ತಾಲೂಕಿನ ಮತದಾರರ ಋಣ ಇದೆ, ನಾನು ಸತ್ತಮೇಲೆ ಇವರ ಋಣ ತೀರುವುದು. ಮತದಾರ ದೇವರು ನನಗೆ ಅಧಿಕಾರ ನೀಡಿರುವುದು. ನಾವು ಪ್ರಾಮಾಣಿಕವಾಗಿ ಜನರ ಸೇವೆ ಮಾಡಲು ಬಂದಿದ್ದು ಹಣ ಆಸ್ತಿ ಮಾಡಲು ಬಂದಿಲ್ಲ. ಆದರೆ ಶರತ್ ಬಚ್ಚೇಗೌಡ ಒಂದು ಭಾರಿ ಶಾಸಕನಾಗಿರುವುದು. ಆದರೆ ನಾನು ೩ ಭಾರಿ ಶಾಸಕ, ೨ ಭಾರಿ ಸಚಿವ ಒಂದು ಭಾರಿ ವಿಧಾನಪರಿಷತ್ ಸದಸ್ಯರಾಗಿದ್ದೇನೆ ನನ್ನ ಹಿರಿತನಕ್ಕೂ ಸಹ ಗೌರವ ಬೇಡವೇ. ಬಚ್ಚೇಗೌಡರೇ ಕೊನೆಯ ಕೆಲವು ಭಾರಿ ನನ್ನನ್ನು ಮಾತನಾಡಿಸಿ ಚೆನ್ನಾಗಿ ಕೆಲಸ ಮಾಡು ಎಂದು ಹೇಳಿದ್ದಾರೆ. ಆದರೆ ಶರತ್ ಬಚ್ಚೇಗೌಡ ಶಕ್ತಿ ಇದೆ ಎಂದು ಈ ರೀತಿಯಲ್ಲಾ ಆಡುತ್ತಿದ್ದಾರೆ ಇದೆಲ್ಲಾ ಬಹಳ ದಿನ ಉಳೀಯುವುದಿಲ್ಲ. ಉದ್ಘಾಟನೆಗೆ ತೆರಳುವ ವೇಳೆ ಕತ್ತರಿ ಏನಾದರೂ ಜೋಬಿನಲ್ಲಿ ಇಟ್ಟುಕೊಂಡು ಬರುತ್ತಾರೇನೋ ಗೊತ್ತಿಲ್ಲ ನಾನು ತೆರಳು ಮೊದಲು ಉದ್ಘಾಟನೆಗೆ ಸಿದ್ಧವಾಗಿರುತ್ತಾರೆ. ಎಂದು ಟೀಕಿಸಿದರು

ಹೊಸಕೋಟೆ ತಾಲೂಕು ರಿಪೋರ್ಟರ್ :-
ನಿಖಿಲ್ ರೆಡ್ಡಿ ಹೊಸಕೋಟೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾವಿರ್ಯಾರ ಚಿತ್ರದ ಫಸ್ಟ್ ಲುಕ್ ರಿಲೀಸ್

Fri Feb 11 , 2022
  ನಿವಿನ್ ಪೌಲಿ ಮತ್ತು ಸ್ಯಾಂಡಲ್​ವುಡ್ ನಟಿ ಶಾನ್ವಿ ಶ್ರೀವಾತ್ಸವ ನಟನೆಯ ಬಹುಕೋಟಿ ವೆಚ್ಚದ ಸಿನಿಮಾ ಮಾಲಿವುಡ್ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಿರುವ, ಶಾನ್ವಿ ಶ್ರೀವಾತ್ಸವ ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ ಮಲಯಾಳಂನ ‘ಮಹಾವಿರ್ಯಾರ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಖ್ಯಾತ ಲೇಖಕ ಎಂ. ಮುಕುಂದನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ […]

Advertisement

Wordpress Social Share Plugin powered by Ultimatelysocial