ಗಂಡನನ್ನು ಬೆದರಿಸಲು ಹೋಗಿ ಗರ್ಭಿಣಿಯ ಎಡವಟ್ಟು

ಗಂಡನನ್ನು ಬೆದರಿಸುವ ಸಲುವಾಗಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿಯ ಸ್ಥಿತಿ ಇದೀಗ ಗಂಭೀರವಾಗಿದ್ದು, ಸತ್ತು ಹೋಗಿರುವ ಮಗುವನ್ನು ಹೊರ ತೆಗೆಯಲು ಮೂರು ದಿನಗಳಿಂದ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪರಸ್ಸಾಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.ಅರುಣಿಮಾ (27), ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಕೆ. ಈಕೆಯ ಗಂಡ ಅಜಯ್​ ಪ್ರಕಾಶ್​ ಓರ್ವ ಯೋಧ. ಘಟನೆ ನಡೆಯುವ ಸಮಯದಲ್ಲಿ ಅಜಯ್​ ಮನೆಯಲ್ಲೇ ಇದ್ದ. ಸೇನೆಯಿಂದ ರಜೆಯ ಮೇಲೆ ಊರಿಗೆ ಬಂದಿದ್ದಾಗಲೇ ಅರುಣಿಮಾ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರುಣಿಮಾಳನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗ್ಯಾಸ್​ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಆರಂಭದಲ್ಲಿ ಅಜಯ್​ ಆಸ್ಪತ್ರೆಗೆ ಹೇಳಿಕೆ ನೀಡಿದ್ದ.ಅರುಣಿಮಾ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಘಟನೆಯ ಬೆನ್ನಲ್ಲೇ ಪಾರಸ್ಸಾಲಾದಲ್ಲಿರುವ ಅಜಯ್​ ಮನೆಯನ್ನು ಪೊಲೀಸರು ಸೀಲ್​ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ಅವಿಭಜಿತ ಕೋಲಾರ (Kolar) ಜಿಲ್ಲೆಯಲ್ಲಿ ಪಕ್ಷಕ್ಕೆ ಬೂಸ್ಟ್‌ ಸಿಗಲಿದ!

Thu Jan 5 , 2023
ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೊನೆ ಚುನಾವಣೆ ಆದರೂ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಅಳೆದು ತೂಗಿ ಕೊನೆಗೂ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.2023ರ ಚುನಾವಣೆ ಅವರ ಪಾಲಿಗೆ ಬಹುತೇಕ ಕೊನೆ ಚುನಾವಣೆ. ಕೊನೆಯ ಅವಕಾಶಕ್ಕಾಗಿ ಪುತ್ರ ಯತೀಂದ್ರ ಭವಿಷ್ಯದ ಅವಕಾಶಗಳಿಗೆ ತೊಡಕಾಗಬೇಡಿ ಎಂಬ ಕುಟುಂಬದ ಆಗ್ರಹಕ್ಕೆ ಮಣಿದು, ತಮ್ಮ ಪಾಲಿಗೆ ಸುರಕ್ಷಿತ ಎಂದು ಭಾವಿಸಿದ್ದ ವರುಣದಿಂದ ಸ್ಪರ್ಧಿಸುವ ಚಿಂತನೆ ಕೈಬಿಟ್ಟಿದ್ದಾರೆ. ಬೆಂಬಲಿಗರ […]

Advertisement

Wordpress Social Share Plugin powered by Ultimatelysocial