ಯುದ್ಧ ಸ್ಥಿತಿಯ ಸ್ವರೂಪವು ಮೂಲಭೂತ ಬದಲಾವಣೆಗೊಳಪಟ್ಟಿದೆ ಎಂದು ಗುರುತಿಸಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ರಾವ್ ಚೌಧರಿ ಅವರು ಭಾರತದ ಭದ್ರತಾ ಕ್ರಿಯಾತ್ಮಕತೆ ಬಹುಮುಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದ್ದು ಬಹುಕ್ಷೇತ್ರೀಯ ಸಾಮಥ್ರ್ಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದ ಹೇಳಿದ್ದಾರೆ.ಇಲ್ಲಿನ ದುಂಡ್ಗಲ್ ಸಮೀಪ ವಾಯುಪಡೆ ಅಕಾಡೆಮಿಯಲ್ಲಿ ನಿರ್ಗಮಿತ ಸಂಯುಕ್ತ ಪದವೀಧರರ ಪಥಸಂಚಲನದಲ್ಲಿ ಭಾಷಣ ಮಾಡಿದ ಚೌಧರಿ ಅವರು ಭಾರತೀಯ ವಾಯುಪಡೆಯು ಪರಿವರ್ತನೆಯ ಶೃಂಗದಲ್ಲಿದ್ದು ರಫೇಲ್ ಯುದ್ದ ವಿಮಾನಗಳು, ಅಪಾಚೆ ಹೆಲಿಕಾಪ್ಟರ್ಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಗಳ ಮೂಲಕ ಅತ್ಯಂತ ಸಮರ್ಥ ವಾಯುಪಡೆಯಾಗಿದೆ ಎಂದು ಪ್ರತಿಪಾದಿಸಿದರು.ಭಾರತದ ಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 12 ಮಂದಿ ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅಕಾಲಿಕ ಮರಣ ಹೊಂದಿದ್ದಕ್ಕೆ ದುಃಖ ವ್ಯಕ್ತಪಡಿಸಿದ ಚೌಧರಿ ಅಗಲಿದ ಅಕಾರಿಗಳ ಗೌರವಾರ್ಥ ಈ ಪಥಸಂಚಲನದ ಅನೇಕ ಕಾರ್ಯಕ್ರಮಗಳನ್ನು ಕಡಿತಗೊಳಿಸಲಾಯಿತು ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada