ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಕಲಘಟಗಿ ಪಟ್ಟಣ ಭರ್ಜರಿ ತಯಾರಿ.

ಉತ್ತರ ಕರ್ನಾಟಕದ ಜಾತ್ರೆಯಲ್ಲಿ ಕಲಘಟಗಿಯ ಗ್ರಾಮದೇವಿಯ ಜಾತ್ರೆಯು ಸುಪ್ರಸಿದ್ದಿ ಪಡೆದಿದೆ. ಈ ಜಾತ್ರೆಯು ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಇದಾಗಿದೆ.ಇದೆ ತಿಂಗಳು 7 ನೇ ತಾರಿಖಿನಿಂದ ಇಲ್ಲಿ ಹೋರವಾರ ಪ್ರಾರಂಭವಾಗಲಿದ್ದು ಶುಕ್ರವಾರ ಹಾಗೂ ಮಂಗಳವಾರ ಐದುವಾರಗಳು ಮುಂಜಾನೆ 10 ರಿಂದ ಸಂಜೆ 5 ರವರೆಗೆ ಕಲಘಟಗಿ ಪಟ್ಟಣದ ಜನರು ತಮ್ಮ ತಮ್ಮ ಮನೆಗಳಿಗೆ ಬಿಗ ಹಾಕಿ ಊರ ಹೊರಗಡೆ ತೆರಳುವ ನಿಯಮವನ್ನು ಆಚರಿಸುತ್ತಾರೆ.ವಾರಗಳು ಮುಗಿದ ನಂತರ ಮಾರ್ಚ 1 ರಿಂದ 9 ದಿನಗಳ ಕಾಲ ಕಲಘಟಗಿ ಪಟ್ಟಣದ ಚೌತಮನೆಕಟ್ಟೆಯಲ್ಲಿ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರನ್ನು ಮೆರವಣಿಗೆ ಮಾಡುವ ಮೂಲಕ ಕೂಡಿಸಿ ವಿಜ್ರಂಭಣೆಯಿಂದ ಜಾತ್ರೆ ಮಾಡಲಾಗುತ್ತದೆ.ಜಾತ್ರೆಗೆ ಇಗಾಗಲೆ ಭರ್ಜರಿ ತಾಯಾರಿ ನಡೆದಿದ್ದು ದೇವಸ್ಥಾನಕ್ಕೆ ಸುಣ್ಣ ಬಣ್ಣ ಹಚ್ಚಲಾಗಿದೆ ಕಳೆದ ಎರಡು ದಿನಗಳ ಹಿಂದೆ ದೇವಿಯ ಕೋಣವನ್ನು ಊರಿನಲ್ಲಿ ಮೆರವಣಿಗೆ ಮಾಡುವ ಮೂಲಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಚಾಲನೆ ನಿಡುವಾಗ ಹಾಲಿ ಹಾಗೂ ಮಾಜಿ ಶಾಸಕರು ಜೋತೆ ಗೂಡಿ ಚಾಲನೆ ನಿಡಿದ್ದು ವಿಶೇಷವಾಗಿತ್ತು.ಎನೆ ಆಗಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ದೇವಿ ಜಾತ್ರೆಗೆ ಕಲಘಟಗಿ ಪಟ್ಟಣ ಸಜ್ಜಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬಂದು ದೇವಿ ದರ್ಶನ ಪಡೆಯುತ್ತಾರೆ ಹಾಗಾದರೆ ತಾವು ಕೂಡ ದೇವಿ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆಯಬೇಕೆಂದು ದೇವಸ್ಥಾನದ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʻಕೇಂದ್ರ ಬಜೆಟ್‌ʼ ಮಂಡನೆ ಆರಂಭಿಸಿದ ವಿತ್ತ ಸಚಿವೆ ʻನಿರ್ಮಲ ಸೀತಾರಾಮನ್‌ʼ.

Wed Feb 1 , 2023
ಐದನೇ ಬಾರಿಗೆ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಅವರು ಇಂದು ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ.ಇದೇ ವೇಳೆ ಬಜೆಟ್‌ ಮಂಡನೆಗೂ ಮುನ್ನ ಭಾರತದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್‌ಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದಾರೆ. ಬಳಿಕ ಅವರು ಸಂಸತ್ತು ಭವನಕ್ಕೆ ತೆರಳಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಭಾಗವಹಿಸಿ ಸಚಿವ ಸಂಪುಟವನ್ನು ಮುಗಿಸಿ […]

Advertisement

Wordpress Social Share Plugin powered by Ultimatelysocial