ಡಾ.ಉಪೇಂದ್ರ ಅವರು ಮೊದಲಿನಿಂದಲೂ ತಮ್ಮದೇಯಾದ ಕ್ರಿಯಾಶೀಲತೆಯ ಮೂಲಕ ವಿಶಿಷ್ಟ ನಟನೆ, ವಿಶಿಷ್ಟ ನಿರ್ದೇಶನ, ಸಂಭಾಷಣೆ ಹೀಗೆ ತಮ್ಮದೇಯಾದ ಮ್ಯಾನರಿಸಂ ಮೂಲಕ ಕನ್ನಡ ವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.
ಜೀರೋದಿಂದ ಹೀರೋ ಆದವರ ಪೈಕಿ ಡಾ. ಉಪೇಂದ್ರ ಅವರು ಒಬ್ಬರು, ಅವರು ನಟ ನಿರ್ದೇಶಕ ಕಾಶೀನಾಥ್ ಅವರ ಶಿಷ್ಯ ಬಳಗದಲ್ಲಿ ಪ್ರಮುಖರು ಏನಿಸಿದ್ದರು, ಕಾಲೇಜ್ ಕಲಿಯುವ ಸಮಯದಲ್ಲಿ ನಾಟಕ, ಸಿನಿಮಾ, ಕವಿತೆ ಬರೆಯುವದು ಹೀಗೆ ಒಂದಿಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗುತ್ತಿದ್ದರು, ಕಾಶೀನಾಥರ ಬಳಗದಲ್ಲಿ ಗುರುತುಸಿಕೊಂಡು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡು ಅನೇಕ ವಿಷಯಗಳನ್ನು ಕಲಿತರು, ಮುಂದೆ ನಿರ್ದೇಶಕನಾಗಿ ಹಲವು ಸಿನಿಮಾ ಮಾಡಿ ಗೆದ್ದರು, ಉಪೇಂದ್ರ ಸಿನಿಮಾ ಮೂಲಕ ನಾಯಕ ನಟನಾದರು. ಅಲ್ಲಿಂದ ಇಲ್ಲಿತನಕ ಕನ್ನಡ ಮತ್ತು ಬೇರೆ ಬೇರೆ ಭಾಷೆಯ ಸಿನಿಮಾ ರಂಗದಲ್ಲಿ ತಮ್ಮದೇಯಾದ ವಿಶೇಷ ಸ್ಥಾನವನ್ನು ಪಡೆದಿದ್ದಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: