ಕನಕದಾಸರ ಜಯಂತಿ ಆಚರಣೆ. ಬಸವನ ಬಾಗೇವಾಡಿ. ಪಟ್ಟಣದ ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತೋತ್ಸವ ಜರಗಿತು. ಕಾರ್ಯಕ್ರಮವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವ ಮೂಲಕ ತಾಲೂಕ ದಂಡಾಧಿಕಾರಿಗಳಾದ ಬಿ.ವಿ ಬಳಗಾರ ಅವರು ಚಾಲನೆ ನೀಡಿದರು. ಜಯಂತೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಂಡಾಧಿಕಾರಿಗಳು ಬಿ.ವಿ ಬಳಗಾರ್ ಅವರು ಮಾತನಾಡಿ ದಾಸ ಶ್ರೇಷ್ಠ ಕನಕದಾಸರು ಒಂದು ಜಾತಿಗೆ ಸೀಮಿತವಾಗದೆ ಅವರು ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತಿದ್ದಾರೆ.ಇಂತಹ ಶ್ರೇಷ್ಠರ ಜಯಂತಿ ಮಾಡುವುದು ಹೆಮ್ಮೆಯಾಗಿದೆ. ಜೊತೆಗೆ ಕೋವಿಡ್ -19 ಇರುವುದರಿಂದ ಕಾರ್ಯಕ್ರಮವನ್ನು ಸಂಕ್ಷಿಪ್ತ ಹಾಗೂ ಸರಳವಾಗಿ ಆಚರಿಸಲಾಯಿತು.ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ.ಉಪತಹಶೀಲ್ದಾರಾದ ಪಿ.ಜಿ ಪವಾರ ಜೊತೆಗೆ ರಾಜಶೇಖರ್ ಯರನಾಳ ಅಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಬಾಗೇವಾಡಿ ಹಾಗೂ ಪರಶುರಾಮ್ ಮುತ್ಯಾ ಮಣ್ಣೂರ. ಸಂಗಪ್ಪ ವಾಡೆದ. ಸಂಗಮೇಶ ಓಲೇಕಾರ ರಾಜೇಶ್ವರಿ ಯರನಾಳ. ವಿಕಾಸ್ ಜೋಗಿ ಮಲ್ಲಿಕಾರ್ಜುನ ಅಂಬಳನೂರ. ಮುತ್ತು ಹಾಲಿಹಾಳ. ಹಾಲುಮತ ಸಮಾಜದ ಯುವಕರು ಹಾಗೂ ಹಿರಿಯರು. ಉಪಸ್ಥಿತರಿದ್ದರು.
ಇದನ್ನು ಓದಿ : ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ ಜಟಿಜಟಿ ಮಳೆ