ಲಕ್ಷ್ಮೇಶ್ವರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಸಮಾಜ ಕಲ್ಯಾಣ ಇಲಾಖೆ ಗದಗ ವತಿಯಿಂದ ವಡಯರ ಮಲ್ಲಾಪೂರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕ ಮಟ್ಟದ ಕರಾಟೆ ಸ್ಪರ್ದೆ ಜರಗಿತು. ಪಂದ್ಯಾವಳಿಯಲ್ಲಿ 20 ಕ್ಕೂ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು , 50 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಕರಾಟೆ ಸ್ಪರ್ಧೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ, ಕ್ಷೇತ್ರ ದೈಹಿಕ ಪರಿವಿಕ್ಷಕರು ಎಮ್ ಎಮ್ ಹವಳದ ಕರಾಟೆ ಇವತ್ತಿನ ದಿನಮಾನಗಳಲ್ಲಿ ಅತಿ ಅವಶ್ಯಕತೆ ಕ್ರೀಡೆ ಇದ್ದು ಸ್ವರಕ್ಷಣೆ, ಆತ್ಮಬಲ, ಆತ್ಮರಕ್ಷಣೆ, ಹೆಚ್ಚಿಸಲು ಅದರಲ್ಲಿ ಮಹಿಳೆಯರಿಗೆ ಕರಾಟೆ ಅತ್ಯಾವಶ್ಯಕವಾಗಿದ್ದು ಇನ್ನು ಹೆಚ್ಚಿನ ಸ್ಪರ್ಧೆಗಳನ್ನು ಕರಾಟೆ ಕ್ರೀಡೆಗಳು ನಡೆದರೆ ಹೆಚ್ಚಿನ ಕ್ರೀಡಾಪಟುಗಳು ಹೊರ ಹೊಮ್ಮತ್ತಾರೆ,ಎಂದು ಹೇಳಿದರು
ಬಿ ಆರ್ ಪಿ ಬಸವರಾಜ ಯರಗುಪ್ಪಿ ಮಾತನಾಡಿ ಕರಾಟೆಯನ್ನು ನಮ್ಮ ತಾಲೂಕಿನಲ್ಲಿ ನಡೆದದ್ದು ಬಹಳ ವೀರಳ ಕರಾಟೆ ಪ್ರತಿ ಒಂದು ಗ್ರಾಮದ ಮಕ್ಕಳಿಗೆ ತರಬೇತಿ ಸಿಗಬೇಕು ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: