ಕರ್ನಾಟಕಕ್ಕೂ ನಿಮಗೂ ಸಂಬಂಧ ಏನು?:

ಬೆಂಗಳೂರು: ‘ಕರ್ನಾಟಕಕ್ಕೂ ನಿನಗೂ ಏನ್‌ ಸಂಬಂಧ? ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು? ಪ್ರಧಾನಿ ಬಳಿ ಕೇಳಿ, ನಮ್ಮ ಕುಟುಂಬದ ಏನು ಅಂತ.’
– ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ ಪರಿ.ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡರ ಕುಟುಂಬ, ಜಾತ್ಯತೀತ ಜನತಾದಳ ಹಾಗೂ ಪಂಚರತ್ನ ಯೋಜನೆಗಳನ್ನು ಟೀಕಿಸಿರುವ ಬಿ.ಎಲ್‌. ಸಂತೋಷ್‌ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಏಕವಚನದಲ್ಲಿಯೇ ತಿರುಗೇಟು ನೀಡಿದರು.ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್‌ ಸಂಬಂಧ? ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು?,” ಎಂದು ಏಕವಚನದಲ್ಲೇ ಸಂತೋಷ್‌ ವಿರುದ್ಧ ಹರಿಹಾಯ್ದರು.
”ಮಿಸ್ಟರ್‌ ಸಂತೋಷ್‌, ಲೂಟಿ ದರೋಡೆ ಮಾಡಿ ಕರ್ನಾಟಕದ ಹಣ ಕೊಂಡೊಯ್ದಿದ್ದೀರಾ. ಸಂತೋಷವಾಗಿದ್ದೀರಂತೆ ಲೂಟಿ ಹೊಡೆದು. ರಾಜ್ಯದಲ್ಲಿಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಅಪರೇಷನ್‌ ಕಮಲ ಮಾಡಿ ನಮ್ಮ ಸರಕಾರ ತೆಗೆದಿರಿ,” ಎಂದು ಕಿಡಿಕಾರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ತಾಜ್‌ ಮಹಲ್‌ ಷಹಜಹಾನ್ ತನ್ನ ಪ್ರೀತಿಯ ಹೆಂಡತಿ ಮುಮ್ತಾಜ್ ಮಹಲ್ ನೆನಪಿಗಾಗಿ ತಾಜ್ ಮಹಲ್ ಅನ್ನು ನಿರ್ಮಿಸಿದ.

Wed Dec 21 , 2022
ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್‌ ಮಹಲ್‌ ಸಹ ಒಂದು. ಭಾರತೀಯ ಪುರಾತತ್ವ ಇಲಾಖೆಯು ಅದರ ನಿರ್ವಹಣೆ ಮಾಡುತ್ತಿದ್ದು, ಆಸ್ತಿ ತೆರಿಗೆಯಾಗಿ ಸುಮಾರು 1.40 ಲಕ್ಷ ರೂಪಾಯಿ ಹಾಗೂ ನೀರಿನ ತೆರಿಗೆಯಾಗಿ ಸುಮಾರು ಒಂದು ಕೋಟಿ ರೂಪಾಯಿ ಪಾವತಿಸುವಂತೆ ತಿಳಿಸಲಾಗಿದೆ. ವಿಶ್ವವಿಖ್ಯಾತ ತಾಜ್‌ ಮಹಲ್‌ಗೆ ಆಗ್ರಾ ನಗರ ನಿಗಮವು ತೆರಿಗೆ ಕಟ್ಟುವಂತೆ ನೋಟಿಸ್‌ ಜಾರಿ ಮಾಡಿದೆ. ಭವ್ಯ ತಾಜ್‌ ಮಹಲ್‌ಗೆ ಆಸ್ತಿ ತೆರಿಗೆ ಮತ್ತು ಜಲ ತೆರಿಗೆ ವಿಧಿಸಿ, ಅವುಗಳ ಪಾವತಿಗೆ ಸಂಬಂಧಿಸಿದಂತೆ […]

Advertisement

Wordpress Social Share Plugin powered by Ultimatelysocial