ದುಪ್ಪಟ್ಟು ಹಣ ವಸೂಲಿಗೆ ಇಳಿದಿವೆ ಟ್ಯಾಕ್ಸಿ, ಆಟೋ ಸವಾರರು, ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಪ್ರತಿಭಟನೆ ಬೆಳಗಾವಿಯಲ್ಲಿ ಕೂಡ ಮುಂದುವರೆದಿದೆ. ಬೆಳಗಾವಿಯ ಪ್ರತಿಭಟನ ವೇದಿಕೆ ಹಾಗೂ ಬಸ್ ನಿಲ್ದಾಣ ಪ್ರಯಾಣಿಕರು , ನೌಕರರು ಇಲ್ಲದೆ ಖಾಲಿ ಖಾಲಿ ಯಾಗಿದ್ದು, ಅಧಿಕಾರಿಗಳು ಇತರೆ ಡಿಪೋ ಬಸ್ ಗಳನ್ನು ನಿಲ್ದಾಣದಲ್ಲಿ ಪಾರ್ಕಿಂಗ್ ಹಾಕಿಸಿದ್ದಾರೆ. ಎರಡು ದಿನ ನಿರಂತರ ಧರಣಿ ಮಾಡಿರೋ ಸಾರಿಗೆ ನೌಕರರನ್ನು ಅಧಿಕಾರಿಗಳು ಹತ್ತಿಕ್ಕಲು ಯತ್ನಸಿದ್ದು, 40 ಕ್ಕೂ ಹೆಚ್ಚು ನೌಕರರನ್ನು ರಾತ್ರಿ ಬಸ್ ನಿಲ್ದಾಣದಿಂದ ಅಧಿಕಾರಿಗಳು ಹೊರಹಾಕಿದ್ದರೆ. ಈ ಕಾರಣ ಇಂದು ಕುಟುಂಬ ಸಮೇತ ಸಾರಿಗೆ ನೌಕರರು ಧರಣಿ ನಡೆಸಿದ್ದು, ಧರಣಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಬಾಗಿಯಾಗಿದ್ದಾರೆ. ಇನ್ನೂ ನಿಲ್ದಾಣದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಜನ ಪರದಾಡುವಂತಾಗಿದ್ದು, ವಿಧಿಯಿಲ್ಲದೆ ಖಾಸಗಿ ಬಸ್ ಗಳತತ್ ಮುಖ ಮಾಡಿದ್ದಾರೆ ಹಾಗೂ ಆಟೋ ಟ್ಯಾಕ್ಸಿ ಸವಾರರು ದುಪ್ಪಟ್ಟು ಹಣ ವಸೂಲಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಮುಂಜಾನೆ 10 ಗಂಟೆಯದರೂ ಚಳಿಗೆ ಹೊರಬಾರದ ಸಾರ್ವಜನಿಕರು