ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಧರಣಿ..!!

ದುಪ್ಪಟ್ಟು ಹಣ ವಸೂಲಿಗೆ ಇಳಿದಿವೆ ಟ್ಯಾಕ್ಸಿ, ಆಟೋ ಸವಾರರು, ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಪ್ರತಿಭಟನೆ ಬೆಳಗಾವಿಯಲ್ಲಿ ಕೂಡ ಮುಂದುವರೆದಿದೆ. ಬೆಳಗಾವಿಯ ಪ್ರತಿಭಟನ ವೇದಿಕೆ ಹಾಗೂ ಬಸ್ ನಿಲ್ದಾಣ ಪ್ರಯಾಣಿಕರು , ನೌಕರರು ಇಲ್ಲದೆ ಖಾಲಿ ಖಾಲಿ ಯಾಗಿದ್ದು, ಅಧಿಕಾರಿಗಳು ಇತರೆ ಡಿಪೋ ಬಸ್ ಗಳನ್ನು ನಿಲ್ದಾಣದಲ್ಲಿ ಪಾರ್ಕಿಂಗ್ ಹಾಕಿಸಿದ್ದಾರೆ. ಎರಡು ದಿನ ನಿರಂತರ ಧರಣಿ ಮಾಡಿರೋ ಸಾರಿಗೆ ನೌಕರರನ್ನು ಅಧಿಕಾರಿಗಳು ಹತ್ತಿಕ್ಕಲು ಯತ್ನಸಿದ್ದು, 40 ಕ್ಕೂ ಹೆಚ್ಚು ನೌಕರರನ್ನು ರಾತ್ರಿ ಬಸ್ ನಿಲ್ದಾಣದಿಂದ ಅಧಿಕಾರಿಗಳು ಹೊರಹಾಕಿದ್ದರೆ. ಈ ಕಾರಣ ಇಂದು ಕುಟುಂಬ ಸಮೇತ ಸಾರಿಗೆ ನೌಕರರು ಧರಣಿ ನಡೆಸಿದ್ದು, ಧರಣಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಬಾಗಿಯಾಗಿದ್ದಾರೆ. ಇನ್ನೂ ನಿಲ್ದಾಣದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಜನ ಪರದಾಡುವಂತಾಗಿದ್ದು, ವಿಧಿಯಿಲ್ಲದೆ ಖಾಸಗಿ ಬಸ್ ಗಳತತ್ ಮುಖ ಮಾಡಿದ್ದಾರೆ ಹಾಗೂ ಆಟೋ ಟ್ಯಾಕ್ಸಿ ಸವಾರರು ದುಪ್ಪಟ್ಟು ಹಣ ವಸೂಲಿಗೆ ಮುಂದಾಗಿದ್ದಾರೆ.

ಇದನ್ನೂ ಓದಿ:ಮುಂಜಾನೆ 10 ಗಂಟೆಯದರೂ ಚಳಿಗೆ ಹೊರಬಾರದ ಸಾರ್ವಜನಿಕರು

Please follow and like us:

Leave a Reply

Your email address will not be published. Required fields are marked *

Next Post

ಮದುವೆಯಾಗುವ ನವ ಜೋಡಿಯ ದಂಪತಿಗಳಿಗೆ ಸಿಹಿ ಸುದ್ದಿ...

Sun Dec 13 , 2020
ಹೊಸದಾಗಿ ಮದುವೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಆಶೀರ್ವಾದಕ್ಕಾಗಿ ಹೋಗುವುದು ಇವಾಗ ದುಸ್ತರವಾಗಿದೆ.. ಇದನ್ನರಿತ ಟಿಟಿಡಿ ಕಾರ್ಯಾಲಯವು ಮದುವೆಯಾಗುವ ಜೋಡಿಗಳಿಗೆ ಸಿಹಿಯ ಸುದ್ದಿಯನ್ನು ನೀಡಿದೆ.. ಈ ಹಿಂದೆ ತಿಮ್ಮಪ್ಪನ ಅನುಗ್ರಹ ಆಶೀರ್ವಾದಕ್ಕಾಗಿ ಬಸ್ಸು ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಅಂಚೆ ಮೂಲಕ ಟಿಟಿಡಿ ಅಧಿಕಾರಿಗಳಿಗೆ ಲಗ್ನಪತ್ರಿಕೆ ಕಳುಹಿಸಿಕೊಟ್ಟರೆ ಸಾಕು.. ಶ್ರೀ ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.. ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ […]

Advertisement

Wordpress Social Share Plugin powered by Ultimatelysocial