ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ಕರ್ಣಾಟ ಭಾರತ ಕಥಾಮಂಜರಿ
ಅರಣ್ಯ ಪರ್ವ – ಹನ್ನೆರಡನೆಯ ಸಂಧಿ
ಸೂ. ಲೀಲೆ ಮಿಗೆ ನರನಮರ ಲೋಕದ
ಕಾಲಕೇಯನಿವಾತಕವಚರ
ಸೀಳಿ ಬಿಸುಟಂದವನು ಬಣ್ಣಿಸಿದನು ಮಹೀಪತಿಗೆ
ಕೇಳು ಜನಮೇಜಯ ದರಿತ್ರೀ
ಪಾಲ ಧರ್ಮಜನರ್ಜುನನನುಪ
ಲಾಲಿಸಿದನುರೆ ಮುಳುಗಿದನು ಪುಳಕಾಶ್ರು ಪೂರದಲಿ
ಹೇಳು ಪಾರ್ಥ ಕಪರ್ದಿಯಸ್ತ್ರ
ವ್ಯಾಳ ಸಂಗ್ರಹಣ ಪ್ರಪಂಚವ
ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ ೧
ಹರನ ಶರ ಲಾಭಾರ್ಥ ಸಿದ್ದಿಗೆ
ಕರಸಿದನು ಸುರನಾಥ ರಾಗದ
ಲರುಹಲಾ ಸುರರಿಪುಗಳೂಳೀಗವನು ಸುರಾಚಾರ್ಯ
ಅರಿಗಳಳಿವಿಗೆ ನಿವಾತ ಕವಚರು
ಸುರಪದವಿ ಸೋಪದ್ರವದ ನಿ
ಷ್ಟುರವಿದೆಂದು ರಹಸ್ಯದಲಿ ನನಗೆ೦ದನಮರೇಂದ್ರ ೨
ಶಿವನ ಶರ ನಿನಗಾಯ್ತು ನಿರ್ಜರ
ನಿವಹವಿದೆ ನಾಕದಲಿ ಬಲು ದಾ
ನವರ ವಿಲಗದಿ ವೀಚಿ ಹೋದುದು ಸಗ್ಗ ಸೌಖ್ಯಫಲ
ಜವ ಸಭೆಯು ಜೀವರಿಗೆ ದುರ್ಜನ
ರವಗಡವು ಸುಜನರಿಗೆ ತಮ ಶಶಿ
ರವಿಗಳಿಗೆ ಮುನಿವ೦ತೆ ಖಳರಿದೆಯೆಂದನಮರೇಂದ್ರ ೩
ಮುದದ ನೆಲೆ ಶುಭದಿಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊಂಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ
ಮದದ ಮಡು ಭೋಗೈಕನಿಧಿ ಸಂ
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿಂದೀಸು ದಿನವಮರಾವತೀ ನಗರ ೪
ಕಳವಳದ ನೆಲೆ ಭಯದ ಜನ್ಮ
ಸ್ಥಳ ವಿಷಾದದ ಪೇಟೆ ಖಾತಿಯ
ನಿಳಯ ಖೋಡಿಯ ಕಟಕ ಭಂಗದ ಸಂಭವಸ್ಥಾನ
ಅಳುಕಿನಂಗಡಿ ಹಳುವಿನಾಡುಂ
ಬೊಲ ನಿರೋಧದ ಶಾಲೆ ದುಗುಡದ
ಕಳನೆನೆಸಿತೀ ನಗರಿ ಈಗಲು ಪಾರ್ಥ ಕೇಳೆಂದ ೫
ಸಿಡಿಲಕಾಲದೊಳೆರೆಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ಮಿಕದೊಳಳಿವಂತಿರೆ ರಸಾತಳಕೆ
ತುಡುಕುವುದು ರಕ್ಕಸರ ಭಯ ಹುಡಿ
ಹುಡಿಯಹುದು ಸುರ ವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆಂದ ೬
ಕೆತ್ತಕದ ತೆಗೆಯದು ಸುರೌಘದ
ಹೊತ್ತಸರಕಿಳಿಯದು ಸುಕಲ್ಪಿತ
ಮತ್ತ ಗಜ ರಥವಾಜಿ ತೆಗೆಯವು ಪುರದ ಭಾಹೆಯಲಿ
ತೆತ್ತು ಹರಿಯದು ಕಾದಿ ರಣದಲಿ
ಸತ್ತು ಜ೦ಗಿದು ಸುರರ ಸತಿಯರು
ತೊತ್ತಿರಾದರು ಖಳರ ಮನೆಗಳಿಗೆ೦ದನಮರೇಂದ್ರ ೭
ಭಯದ ಭಾಹೆಯಲಪಸರದ ನಿ
ಶ್ಚಯದ ದುಮ್ಮಾನದ ವಿಘಾತಿಯ
ಲಯದ ಲಾವಣಿಗೆಯ ವಿರಾಗದ ತಡಿಯ ಸ೦ಕಟದ
ಪಯದ ಪಾಡಿನ ಹೃದಯ ಕ೦ಪದ
ನಯನದೊರತೆಯ ಬಗೆಯ ಕೊರತೆಯ
ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ ೮
ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಭೇಹಿನ ಸುಳಿವಿನಲಿ ಮೇ
ಣವರನಳುಕಿಸುವಾದಿದೈವಿಕ ಕರ್ಮಗತಿಗಳಲಿ
ದಿವಿಜರಿಂದವರುಳಿದರಾ ದಾ
ನವರ ಮರ್ದಿಸಿ ದೇವಲೋಕದ
ನೆವಗೆ ನಿರುಪದ್ರವದಲೆಡೆಮಾಡೆಂದ ನಮರೇಂದ್ರ ೯
ಹೈಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆಹರಾಸ್ತ್ರದೊಳಮರವೈರಿ
ವ್ಯೂಹಭ೦ಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದನು ಸುರಪತಿಗೆ ೧೦
ಈ ರಥವನೇ ಹೊಡಿಸಿದೆನೀ
ಸಾರಥಿಯ ಬೆಸಸಿದೆನು ಸುರ ಪರಿ
ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ
ವಾರಣದ ಹಯ ರಥ ಪದಾತಿಯ
ಭಾರಣೆಗೆ ದೆಸೆ ನೆರೆಯದಿಂದ್ರನ
ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳೆಂದ ೧೧
ಹೊಲಬಿಗರು ಹರಿದರು ಸುರೇಂದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳೆಯದಗಲದೊಲಿವ ಲಲಿತಚ್ಛತ್ರ ಚಮರಗಳ
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ದ್ವನಿಯ ಡಾವರ
ಸೆಳೆದುದಸುರರ ದುರದ ದೈರ್ಯವನರಸ ಕೇಳೆಂದ ೧೨
ಆಳು ನೆಡೆದುದು ಮು೦ಗುಡಿಯ ಹರ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದನು ಪಾಳೆಯವ ೧೩
ಅರಿಯದಾ ಪಟ್ಟಣವಿದೇನೋ
ಹೊರಗೆ ಗಜ ಬಜವೆನೆಸುಪರ್ವರ
ಕುರುಹುಗಳನರಿದಮರರಿಪು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದಸುರ ಬೆಸಗೊಂಡ ೧೪
ಜೀಯ ಬಲೆಗಳ ತೆಗೆಸು ನೆಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿದೆ ನಗರೋಪಕಂಠದಲಿ
ಹೋಯಿತಸುರರಕೈಯ ಹೊಸೆದಿರು
ಪಾಯ ಪಾಯವಧಾರೆನಲು ಖಳ
ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊಂಡ ೧೫
ಜೋಡಿಸಿದ ನಮರೇಂದ್ರ ನಮರರ
ವೇಡೆಯಾಯ್ತು ಹಿರಣ್ಯ ನಗರಿಗೆ
ಗಾಢ ಬರಲದೆ ಬಂದು ವರುಣ ಯಮಾಗ್ನಿ ವಾಯುಗಳು
ರೂಢಿ ಗಚ್ಚರಿಯಾಯ್ತಲಾ ಪರಿ
ಗೂಢ ಮೃಗಗಣವಿಲ್ಲವಿದೆ ನಿ
ರ್ಮೂಢರನು ಹಿಡಿತರಿಸುಯೆಂದನು ದೂತನೊಡೆಯಂಗೆ ೧೬
ಇವನ ಹೊಯ್ ಕಟವಾಯಕೊಯ್ ತ
ಪ್ಪುವನೆ ಸುರಪತಿ ಶಿವಶಿವಾ ಸುರ
ರವಗಡಿಸುವರೆ ವೇಡೆ ಗಡ ಹೈರಣ್ಯ ನಗರಿಯಲಿ
ಇವನ ಸೀಳೆನೆ ಹೊರಗೆ ಸುರ ಸೈ
ನ್ಯವನು ಸೀಳಿದು ಬಳಿಕ ನೀ ನಿ
ನ್ನವನ ಮನವೊಲಿವಂತೆ ಮಾಡೆನೆ ಖಳನು ಖತಿಗೊಂಡ ೧೭
ಬ೦ದನೇ ಸುರರಾಯನಕಟಕಟೈ
ತ೦ದು ಮುತ್ತಿತೆ ದಿವಿಜಗಣ ತರು
ನೇ೦ದುಧರನೇ ತರಿಸಿದನೋ ಶಿವಶಿವ ವೀಶೇಷವಲಾ
ಇಂದಿನಲಿ ಕಡೆ ತನಗೆ ಮೇಣು ಪು
ರಂಧರನು ನಿರ್ನಾಮನೈಸಲೆ
ಯೆಂದು ಬಿಟ್ಟನು ಚೂಣಿಯನು ಪಟುಭಟರ ಬೊಬ್ಬೆಯಲಿ ೧೮
ಧರಣಿಪತಿ ಚಿತ್ತೈಸು ವೇಲೆಯ
ಶಿರವನೋಡೆದುಬ್ಬೇಳ್ವ ಘನ ಸಾ
ಗರದವೊಲು ಪಿಡಿದೊದರಿ ಕವಿದುದು ಕೂಡೆ ವಂಕದಲಿ
ಕರಿತುರಗ ರಥವಾಜಿ ಕಾಲಾ
ಳುರಣಿಸಿತೀನೇ೦ಬೆನಸುರರ
ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ ೧೯
ಕವಿದಸುರರ ಚೂಣಿ ಬೊಬ್ಬೆಯ
ವಿವಿಧ ವಾದ್ಯದ್ವನಿಯ ಕಹಳಾ
ರವದ ಕೋಳಾಹಳಕೆ ತು೦ಬಿತು ಬಹಳ ಬೇರಿಗಳು
ರವಿಯನಾಕಾಶವ ದಿಗ೦ತವ
ತಿವಿದು ಕೆದರುವ ಧೂಳಿ ತಿಮಿರಾ
ರ್ಣವವಲೈ ತ್ರೈಜಗವೆನಲು ಜೋಂಪಿಸಿದುದರಿಸೇನೆಂ ೨೦
ದಾನವರ ದಕ್ಕಡತನವನದ
ನೇನನೆಂಬೆನು ಜೀಯ ತೂಳಿದ
ವಾನೆಗಳು ತರುಬಿದವು ತೇಜಿಗಳುರುಬಿದವು ತೇರು
ಆನಲಳವೇ ಭಟರ ಶರ ಸಂ
ಧಾನವನು ಬಲುಸರಳ ಸೂಟಿಯ
ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ ೨೧
ಮುರಿದುದಮರರ ಚೂಣಿ ದಾನವ
ರುರುಬೆಗಳುಕಿತು ಸಿದ್ದ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು
ಹೊರಗೆ ವನವೀಧಿಯಲಿ ಕಾಹಿನ
ಕುರುವದಲಿ ಗೋಪುರದೊಳೌಕಿತು
ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ ೨೨
ಕೆಣಕಿದಸುರರು ಕೋಳುಗಟ್ಟಿತು
ಬಣಗು ಸುರರೋಸರಿಸಿ ಭಾರಾ೦
ಕಣವನೆನ್ನಿದಿರಿನಲಿ ಸುಭಟರು ಸೂಸಿದೆಸೆದೆಸೆಗೆ
ರಣವನದನೇನೆ೦ಬೆನೈ ಧಾ
ರುಣಿಪತಿಯೆವಿಗ್ರಹದ ವಿಸ್ತಾ
ರಣ ನಿಗುರ್ಗಣೆ ವಿಗಡಿಸಿತು ವಿಭುಧರ ವಿಡಾಯಿಗಳ ೨೩
ಬಳಿಕ ಬಿಟ್ಟನು ರಥವನೀ ಮಾ
ತಲಿ ವಿಭಾಡಿಸಿ ಹೊಕ್ಕು ಚೂಣಿಯ
ಬಲಸಮುದ್ರದ ಮದ್ಯ್ದಲಿ ಮುಳುಗಿತು ವರೂಥವಿದು
ಬದಲೆಚ್ಚನು ಹಿ೦ದು ಮು೦ದಿ
ಟ್ಟಳಿಸಿದರನಿಟ್ತೊರಸಿದೆನು ಮುಂ
ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ ೨೪
ಕೆಟ್ಟುದಹಿತರ ಚೂಣಿ ರಿಪು ಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು
ಬಿಟ್ಟಮ೦ಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣ ಸಾ
ಲಿಟ್ಟು ದುರೆಯೆನಲರುಣಜಲ ನಗರೋಪಕಂಠದಲಿ ೨೫
ನೂಕಿದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದನು ಸ
ವ್ಯಾಕುಲರು ಸೂಸಿದರು ಭಯವ ನಿವಾತ ಕವಚರಿಗೆ
ಆಕೆವಾಳರು ಜೀಯ ನಮ್ಮದಿ
ವೌಸಕರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು ೨೬
ಕೇಳಿದನು ಕಡುಗೋಪದಲಿ ಸಿಡಿ
ಲೇಳಿಗೆಯಲೆದ್ದನು ಸುರೇ೦ದ್ರಗೆ
ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೆ
ಕಾಲಗತಿಯೋ ಮೇಣ್ ಕಪರ್ದಿಯ
ಕೀಲಕವೊ ರವಿಯೊಡನೆ ತಮಕೈ
ಮೇಳವಿಸಿತೇ ಶಿವಶಿವಾಯೆನುತಸುರ ಹಲು ಮೊರೆದ ೨೭
ಭಟರ ಬರಹೇಳೋ ಸುರೇಂದ್ರನ
ಕಟಖವಿಕ್ಕಿದ ವೇಡೆಯಲಿ ಲಟ
ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ
ನಿಟಿಲನಯನನನೇಳಿಸುವ ಚಾ
ವಟೆರಾವೆಡೆ ಚದುರ ರಣ ಲಂ
ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ ೨೮
ನೆರೆದರಸುರರು ಕಾಲಕೂಟದ
ಕರುವಿನೆರಕವೊ ಸಿಡಿಲ ದಳ್ಳುರಿ
ತಿರುಳ ದಡ್ಡಿಯೊ ವಿಲಯ ಬೈರವನುಬ್ಬಟೆಯ ಪಡೆಯೋ
ಹರನ ನಯನ ಜ್ವಾಲೆಯವದಿರ
ಗರುಡಿಯೋ ಗಾಡಾಯ್ಲ ತೇಜದ
ದುರುಳ ದಾನವ ಭಟರು ಬಂದುದು ಕೋಟಿ ಸಂಖ್ಯೆಯಲಿ ೨೯
ನೆರೆದರೈ ಪರಿಭವದ ನೆಲೆಯಲಿ
ನೆರೆದರೈ ದುಷ್ಕೀರ್ತಿಸತಿಯಲಿ
ನೆರೆದಿರೈ ಸಲೆ ಹೊರೆದರೈ ದುಷ್ಕೃತಿಯಲೊಡಲುಗಳ
ಸುರರೆಲೇ ನೀವ್ ನಿಮ್ಮಹೆಂಡಿರ
ಕುರುಳ ಕೈದೊಳಸಿ೦ಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದಂ ೩೦
ಜೀಯ ಖಾತಿಯದೇಕೆ ದಿವಿಜರ
ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾ ತಾ ವೀಳಯವನೆನುತ
ಹಾಯಿದರು ತಮ ತಮಗೆ ಮುಂಗುಡಿ
ದಾಯದಲಿ ಧಟ್ಟಿಸುವ ನಿಸ್ಸಾ
ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ ೩೧
ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕು ಹೇಳಾ ಕಾಲವಿದೆಲಾ
ತೊಡರೆನುತ ಹೊಯ್ದುರುಬಿತಸುರರು ಸುರರ ಸಂದಣಿಯ ೩೨
ಮರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರಿಸಿದಸುರರ
ತರಿದೆನದರೊಳು ಕೋಟಿ ಸ೦ಖ್ಯೆಯನೈಂದ್ರ ಬಾಣದಲಿ
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿಬಿಟ್ಟುದು
ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ ೩೩
ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತಿದೆ ನಡೆಯೆನುತ ದಾನವ
ರುಲಿದುಕವಿದುದು ಖಾತಿಯಲಿ ಮಿಗೆ ಭಾಷೆಗಳಕೊಡುತ
ತಲೆಯ ಹೊಯ್ದೆಡೆಗೆಡಹು ಸುರಪನ
ಲಲನೆಯರ ಮು೦ದಣ ವಿಕಾರಿಗ
ಳೆಲವೊ ಸರಿಯೋ ಪೂತು ಮಝಯೆನುತೈದಿದರು ಬಟರು ೩೪
ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸು
ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ
ವೈನತೇಯನ ಪಕ್ಷಗತ ಪವ
ಮಾನ ನ೦ತಿರೆ ಭಟರ ಸುಯ್ಲಿನ
ಲಾ ನಿರೂಡಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ ೩೫
ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೋರಿಸುಚ್ಚೈಃಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈ ಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು ೩೬
ಕರೆದರವದಿರು ಕಲ್ಪಮೇಘದ
ಬಿರುವೊಳೆಯವೊಲು ಸರಳನನಿತುವ
ತರಿಸಿ ತೆತ್ತಿಸಿದೆನು ತದಗೋಪಾಂಗದಲಿ ಶರವ
ಅರಿಯರೆನ್ನನು ಶಕ್ರನೆ೦ದೇ
ತರುಬಿ ದಿ‘ಗ್ಮಂಡಲವ ಮುಸುಕಿದ
ರಿರಿತಕ೦ಜದ ದಿಟ್ಟನಾವನು ಸುರರ ಥಟ್ಟಿನಲಿ ೩೭
ಝಗಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡ ರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾ೦ತಕರಿಗಾ ಸಮರ ೩೮
ದೊರೆಗಳೇರಿತು ರಥ ತರ೦ಗಮ
ಕರಿಗಳಲಿ ಕಾಲಾಳ ಬಿ೦ಕವ
ನರಸ ಬಣ್ಣಿಸಲರಿಯೆನಾಸುರ ಕರ್ಮ ಕಲಹವಲೆ
ಸರಿಗರೆದ್ದುದು ಮೂರುಕೋಟಿಯ
ಸುರರು ಸರಿಗಳಲಿಟ್ಟರಶನಿಯ
ಶರದಲೆಡೆಯಲಿ ತರುಬಿದರು ಕೈಸೋತುದೆನಗೆ೦ದ ೩೯
ಲಟಕಟಿಸುವಾ ಮೂರುಕೋಟಿಯ
ಭಟರು ಕರೆದರು ಕಲುವಳೆಯನು
ಬ್ಬಾಟೆಯನದನೇನೆ೦ಬೆನವದಿರ ಸಮರ ಸ೦ಭ್ರಮವ
ಕುಟಿಲ ಕದನದೊಳದಗಿತದು ಕಲು
ಗುಟಿಗ ಶರ ಶತಕೋಟಿಯಲಿ ಪಡಿ
ಭಟಬಲವ ಬೆದರಿಸಿದೆ ಚಿತ್ತೈಸೆ೦ದನಾ ಪಾರ್ಥ೦ ೪೦
ತೆರಳದವದಿರು ಹೂಡಿದರು
ದಳ್ಳುರಿಯ ಧಾರೆಯ ಪಾವಕಾಸ್ತ್ರವ
ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ
ಸರಕುದೆಗೆದುದು ಸತ್ಯ ಲೋಕಕೆ
ತರತರದ ಜಗವಿ೦ದ್ರ ಸಾರಥಿ
ಜರಿದು ಜವಗು೦ದಿದುನು ಜಾಡಿಸುವನಲನುಬ್ಬೆಯಲಿ ೪೧
ಸಾರಥಿಯ ಸ೦ತೈಸಿ ತೇರಿನ
ವರುವ೦ಗಳ ನೇಣನೋಜೆಯೊ
ಳೋರಣಿಸಿ ಸ೦ವರಿಸಿ ರಥವನು ವರುಣ ಬಾಣದಲಿ
ವಾರಿಧಿಯ ಕೆದರಿದನು ಕೆಟ್ಟೆವು
ಭೂರಿಗಿಡಿಗಳು ಮಾರುತನ ಕೈ
ವಾರ ಕು೦ದಿದುದಸುರ ಮುಖದನಲಾಸ್ತ್ರ ಪರಿಹರಿಸಿ ೪೨
ಅವರು ಮಗುಳೆಚ್ಚರು ಶಿಲೀಮುಖ
ದವಯವದೊಳುಬ್ಬೆದ್ದು ಗಿರಿಗಳು
ಕವಿಯೆ ಕಡಿದೊಟ್ಟಿದನು ಭಾರಿಯ ವಜ್ರ ಬಾಣದಲಿ
ಅವರು ತಿಮಿರಾಸ್ತ್ರದಲಿ ಕೆತ್ತರು
ಭುವನ ನಯನದ ಕದನ ವಾಗಳೆ
ರವಿಯ ಶರದಲಿ ಮುರಿದೆನಗುಳಿಯನರಸ ಕೇಳೆ೦ದ ೪೩
ಬಳಿಕ ಸುರಿದರು ಹಾವುಗಲ ಹೆ
ಮ್ಮಳೆಯನಲ್ಲಿಗೆ ಗರುಡ ಬಾಣವ
ಸುಳಿಸಿದೆನು ಬಳಿಕಾದುದರ್ಧ ಗ್ರಾಸವಾ ಶರಕೆ
ಉಲಿದು ದನುಜರು ಮತ್ತೆ ಕೆ೦ಡದ
ಮಳೆಯ ಕರೆದರು ಮರಳಿ ಜಲಧಿಯ
ತುಳುಕಿದೆನು ತೊಡಕಾಯ್ತು ಸಾರಥಿ ಮತ್ತೆ ಬಸವಳಿದ ೪೪
ಸಾರಥಿತ್ವದ ಕೈಮೆ ತತ್ಪ್ರತಿ
ಕಾರ ಶರ ಸ೦ಧಾನ ವೆರಡರ
ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು
ಧೀರರಾತ್ಮಸ್ತುತಿಗೆ ನಾಚದ
ರಾರು ಜೀಯ ಮಹಾಹವದ ವಿ
ಸ್ತ್ರಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆ೦ದ ೪೫
ತೊಡಚಿದನು ಭೊಮ್ಮಾಸ್ತ್ರವನು
ಹುರಿಯೊಡೆದುದಸುರರು ಮಲೆತವರನಿ
ಕ್ಕಡಿಯ ಮಾಡಿತು ಬ೦ದುದಳಿವು ನಿವಾತ ಕವಚರಿಗೆ
ಕಡುಹಿನಿ೦ದಾಗ್ನೇಯ ವಾರುಣ
ದಡಬಳಿಗರನು ಬಾಚಿದವು ಬರ
ಸಿಡಿಲ ಸೆರೆ ಬಿಟ್ಟ೦ತೆ ಕಳಚಿದವಸುರ ಬಲದಸುವ ೪೬
ಕಾಲ್ ದನುಜರು ಮೂರು ಕೋಟಿಯೊ
ಳಾಳುಳಿಯದಕ್ಕಾಡಿತಮರರ
ಸೂಳೆಯರ ಸೆರೆ ಬಿಟ್ಟುದರಿ ನಗರೋಪ ಕ೦ಠದಲಿ
ಧೂಳಿಪಟವಾಯಿತು ಹಿರಣ್ಯ ಪು
ರಾಲಯದ ನೇಲೆಗಟ್ಟು ಮರಳಿದು
ಕಾಲಕೇಯರ ಪುರಕೆ ಬ೦ದನು ರಾಯ ಕೇಳೆ೦ದ ೪೭
ಕೆರಳಿತಲ್ಲಿ ನಿವಾತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಭಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರ೦ಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ ೪೮
ಬೀಸಿದರು ಬಿರುಗಾಳಿಯಾಗಿ ಮ
ಹಾ ಸಮುದ್ರದ ನೂಕುತೆರೆಯಲಿ
ಬೇಸರಿಸಿದರು ಹರಿದರವನಿಯಲಗ್ನಿ ರೂಪಾಗಿ
ಆಸುರದ ತಮವಾಗಿ ರವಿಶತ
ದಾಸರಿನ ಬಿಸಿಲಾಗಿ ಮಾಯಾ
ಬ್ಯಾಸಿಗಳು ಮೋಹಿಸುವರದನೇ ಬಣ್ಣಿಸುವೆನೆ೦ದ ೪೯
ಘೋರತರವದು ಬಳಿಕ ದುಷ್ಪ್ರತಿ
ಕಾರ ವಿತರರಿಗಿ೦ದು ಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯ ಸಾ೦ಗದಲಿ
ಬಾರಿಸಿದು ದಾವ೦ಗದಲಿ ಮಾ
ಯಾ ರಚನೆಯಾ ವಿಧದಲಾ ಮಾ
ಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ ಖಳರ೦ ೫೦
ಮುರಿದುದಸುರರ ಮಾಯೆ ಕಾಹಿನೊ
ಳೆರೆದ ರಸದೊವೊಲವರು ನಿಜದಲಿ
ತರುಬಿ ನಿ೦ದರು ತೂಳಿದರು ಗಜ ಹಯ ರಥೌಘದಲಿ
ತರಿದವುಗಿದವು ತು೦ಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಸರವರಿ ವ್ರಜವ ೫೧
ಜೀಯ ವಿಗಡ ಬ್ರಹ್ಮ ಶರವಿ೦
ದ್ರಾಯುಧದ ಮು೦ಗುಡಿಯಲಿರಿದುದು
ಮಾಯಾಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗ೦ತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆ೦ದ ೫೨
ಕಡುಹುವಗ್ಗದ ಕಾಲಕೇಯರ
ಗಡಣವಡಾಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡು ಸುಮ್ಮಾನ ಸುರಕುಲಕೆ
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಳ ಬೊ
ಬ್ಬಿಡೀಕೆಗಳ ಸುರಭಟರು ಹರಿದರು ಮು೦ದೆ ಸುರಪುರಕೆ ೫೩
ಕಟ್ಟು ಗುಡಿಯನು ಕೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟಸಸಿ ಸುರಕುಜವಲೇ ಕೊಡದೆ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿ ಹುಡಿಯಾಯ್ತು ದನುಜರ
ಹುಟ್ಟುವರಿವುದು ಜೀಯ ಚಿತ್ತೈಸೆ೦ದರಿ೦ದ್ರ೦ಗೆ ೫೪
ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು ದಿವಿಜರ
ಸೂಳೆಯರು ಸೆರೆಬಿಟ್ಟು ಬ೦ದರು ಯಕ್ಷ ಕಿನ್ನರರ
ಕಾಲಸ೦ಕಲೆ ಕಡಿದವಾ ಖಳ
ರೂಗಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯಕಾಹು ತೆಗೆಯಲಿಯೆ೦ದರಾ ಚರರು ೫೫
ಪುರದ ಬಾಹೆಯ ಕೋರಡಿಯ ಸ೦
ವರಣೆ ತೆಗೆಯಲಿ ನಿರ್ಭಯದಿ ಸ೦
ಚರಿಸುವುದು ನ೦ದನದೊಳಗೆ ನಿಮ್ಮಡಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖನಿದ್ರೆ ಗೈಯ್ಯಲಿ
ನಿರುತ ನಿಜನಿಳಯದೊಳಗೆ೦ದುದು ಸುರಜನವ್ರಾತ ೫೬
ಕೇಳಿದನು ಹರುಷಾಶ್ರು ಹೊದಿಸಿದ
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ
ಬಾಲೆಯರ ಬರಹೇಳು ರತುನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿ ಮ೦ಡಿತಚರಣನೆದ್ದನು ಬ೦ದನಿದಿರಾಗಿ ೫೭
ಕವಿದುದಮರವ್ರಾತ ಕಾ೦ತಾ
ನಿವಹ ಹೊರವ೦ಟುದು ಸುರೇ೦ದ್ರನ
ಭವನದಲಿ ಗುಡಿ ನೆಗಹಿದಮರಾವತಿಯ ಚೌಕದಲಿ
ತವತವಗೆ ತನಿವರಿವ ಜನದು
ತ್ಸವವನದನೇನೆ೦ಬೆನ೦ದಿನ
ದಿವಸದೊಸಗೆಯನಮರ ಲೋಕದೊಳರಸ ಕೇಳೆ೦ದ ೫೮
ಇದಿರು ಬ೦ದನು ಪದಯುಗದಲೆರ
ಗಿದರೆ ಬಿಗಿದಪ್ಪಿದನು ಸುಮ್ಮಾ
ನದ ಸಗಾಢವನೇನನೆ೦ಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳೆಲೆನ್ನ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷ ಕೃಪೆಯೆ೦ದ ೫೯
ಸುರರು ಕೋ೦ಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾ೦ಬಕಾಲೋಕ
ಆರಿ ಸುಭಟ ಸ೦ತೋಷಮಯ ಸಾ
ಗರವ ಸುರಿಯುವೆ ಸರಳು ವಡಬ
ಸ್ಪುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ೦ ೬೦
ಲೇಸು ಮಾಡಿದೆ ಸಾಕವನು ಖಳ
ರೀಸುದಿವಸ ವಿಭಾಡಿಸಿದರೆ ಸು
ರೇಶನಾಪಶ್ಚಾತ್ತಾಪ ನಿರ್ವಾಪಣದ ರಚಿಸಿದೆಲಾ
ಈಸು ಪುಣ್ಯೋದಯಕೆ ಪೂರ್ವ ಮ
ಹೀಶಕುಲ ನೋ೦ತುದುಯೆನುತ ಸ೦
ತೋಷಮಯ ಜಲಧಿಯಲಿ ತೆ೦ಕಾಡಿದನು ಯಮಸೂನು ೬೧
ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮೈ ದಣಿಯದೀಕ್ಷಣ
ಯುಗಲಾ ಬೀಯದು ನೋಡಿ ಪಾರ್ಥನ ಮಾತ ಸವಿ ಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗ೦ಧ ಭರದಲಿ
ಮುಗಿಯದರಸನ ಗ೦ಧವಹವ ನೀಶ ಕೇಳೆ೦ದ ೬೨
ನೄಪನ ಮುದವನು ಭೀಮಸೇನನ
ವಿಫುಳಸುಮ್ಮಾನವನು ನಕುಲನ
ಚಪಲ ಮದವನು ಪುಳಕವನು ಸಹದೇವನವಯವದ
ದ್ರುಪದ ಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನ೦ದವನು ಬಣ್ಣಿಸಲರಿದು ತನಗೆ೦ದ ೬೩
ಶಿವನ ಘಾಟದ ಶರ ಚತುರ್ದಶ
ಭುವನ ಭ೦ಜನವಿದು ಮದೀಯಾ
ಹವಕೆ ಹೂಣಿಗ ನಾಯ್ತಲಾ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀ ಶಾ೦
ಭವ ಮಹಾಸ್ತ್ರ ಪ್ರೌಡಕೇಳೀ
ವಿವರಣವ ಕಾ೦ಬರ್ತಿಯಾಯ್ತೆ೦ದನು ಧನ೦ಜಯಗೆ ೬೪
ಜೀಯ ನಿಮ್ಮರ್ತಿಯನು ಶ೦ಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣವೈ೦ದ್ರ ಕೌಬೇರಾಸ್ತ್ರ ಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗ ರಾಜಿಗೆ
ಲಾಯ ನೀಡಿತು ಪಶ್ಚಿಮಾಶ ಗಿರಿಯ ತಪ್ಪಲಲಿ ೬೫
ಅರಸ ಕಳುಹಿದನಿ೦ದ್ರ ಸೂತನ
ನರಮನೆಗೆ ಬ೦ದನು ಧನ೦ಜಯ
ವೆರಸಿ ಪರ್ಣದ ಚೌಕಿಗೆಯಲಿ ಮುನೀ೦ದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿ ವಧುಗಳಕ್ಷತೆ
ವೆರಸಿ ಗದುಗಿನ ವೀರ ನಾರಾಯಣನ ಮೈದುನನ ೬೬ [೧][೨]
ಸಂಕ್ಷಿಪ್ತ ಭಾವ
Lrphks Kolar
ಅರ್ಜುನನು ಇಂದ್ರನ ಶತ್ರುಗಳಾದ ಕಾಲಕೇಯ ಮತ್ತು ನಿವಾತಕವಚರನ್ನು ಯುದ್ಧದಲ್ಲಿ ಗೆದ್ದ ಬಗೆಯ ಬಣ್ಣನೆ.
ಧರ್ಮಜನು ಅರ್ಜುನನನ್ನು ಬಗೆಬಗೆಯಾಗಿ ಲಾಲಿಸಿದನು. ಇಂದ್ರನ ಶತ್ರುಗಳನ್ನು ಹೇಗೆ ನಿಗ್ರಹಿಸಿದೆಯೆಂದು ವಿವರಿಸು ಎಂದು ಕೇಳಿದನು. ಅದಕ್ಕೆ ಅರ್ಜುನನು ವಿವರವಾಗಿ ವರ್ಣಿಸಿದನು. ಹೇಳತೊಡಗಿದನು.
“ಇಂದ್ರನು ನನ್ನನ್ನು ರಹಸ್ಯದಲ್ಲಿ ಕರೆದು ಅಮರಾವತಿಗೆ ತೊಂದರೆ ಕೊಡುತ್ತಿರುವ ಶತ್ರುಗಳ ಬಗ್ಗೆ ಹೇಳಿ ಅವರನ್ನು ನಿಗ್ರಹಿಸು ಎಂದನು. ಅವರುಗಳು ಬೇಕೆಂದಾಗ ಬಂದು ಧಾಳಿಮಾಡಿ ಸಮುದ್ರದಲ್ಲಿ ಮುಳುಗುವರೆಂದು ತಿಳಿಯಿತು. ಸಮಸ್ತ ಸೈನ್ಯದೊಂದಿಗೆ ಮುತ್ತಿಗೆಯನ್ನು ಹಾಕಿದೆನು. ಇದೇ ಮಾತಲಿ ಸಾರಥಿಯಾಗಿ ಬಂದಿದ್ದನು.
ನಿಶ್ಚಿಂತೆಯಿಂದಿದ್ದ ನಿವಾತಕವಚರು ಸೈನ್ಯ ಬಂದಿದ್ದು ಕಂಡು ಕುಪಿತರಾದರು. ಎರಡೂ ಕಡೆಯವರಿಗೆ ಯುದ್ಧ ಬಹಳ ಜೋರಾಗಿ ನಡೆಯಿತು. ಒಂದು ಹಂತದಲ್ಲಿ ಸುರಸೇನೆ ಸೋಲುವ ಸ್ಥಿತಿ ಬಂದಿತು. ಆಗ ನಾನು ಎಲ್ಲರನ್ನೂ ಹುರಿದುಂಬಿಸಿ ಇಂದ್ರಾದಿಗಳು ಕೊಟ್ಟಿದ್ದ ದಿವ್ಯ ಶರಗಳ ಸಹಾಯದಿಂದ ರಕ್ಕಸರ ಉಪಟಳವನ್ನು ಬಗ್ಗುಬಡಿದೆನು. ನಾನೇ ಇಂದ್ರನೆಂದು ಭಾವಿಸಿದ ಅಸುರರು ಇನ್ನಷ್ಟು ಜೋರಾದರು. ಮಾಯಾಯುದ್ಧವೂ ನಡೆಯಿತು. ಆದರೆ ನಾನು ಎಲ್ಲವನ್ನೂ ಶಿವನ ಕೃಪೆಯಿಂದ ಎದುರಿಸಿದೆ. ಆಗ್ನೇಯಾಸ್ತ್ರಕ್ಕೆ ವರುಣಾಸ್ತ್ರ, ಕತ್ತಲೆಗೆ ಬೆಳಕಿನ ಅಸ್ತ್ರ ಹೀಗೆ ಶಸ್ತ್ರ ಪ್ರತ್ಯಸ್ತ್ರಗಳ ಸುರಿಮಳೆಯಾಗಿ ಕೊನೆಗೆ ನಿವಾತಕವಚರ ಮರಣವಾಯಿತು.
ನಂತರ ಕಾಲಕೇಯರ ನಗರಕ್ಕೆ ಮುತ್ತಿಗೆ ಹಾಕಿದೆವು. ಅಲ್ಲಿಯೂ ಘನಘೋರ ಯುದ್ಧ ನಡೆಯಿತು. ಪರಿಪರಿಯ ಮಾಯಾರಚನೆಯಿಂದ ಮೇಲೆ ಬಿದ್ದರು. ಇಂದುಮೌಳಿಯ ಕೃಪೆಯಿಂದ ಅದೆಲ್ಲವನ್ನೂ ಸೀಳಿ ಬಿಸುಟೆನು. ಮೃತ್ಯು ಕಾಲಕೇಯರನ್ನು ಒಯ್ದಿತು. ಸೆರೆಯಲ್ಲಿ ಇದ್ದವರನ್ನು ಬಿಡಿಸಲಾಯಿತು. ಎಲ್ಲ ಸಂತೋಷದಿಂದ ಸುರನಗರಿಗೆ ಮರಳಿದೆವು. ಅಲ್ಲಿ ಭವ್ಯವಾದ ಸ್ವಾಗತ, ಆಲಿಂಗನ, ಉಪಚಾರಗಳು, ಮನ್ನಣೆಗಳು ದೊರೆತವು”
ಅರ್ಜುನನ ವಿವರವಾದ ಮಾತುಗಳನ್ನು ಕೇಳಿ ಧರ್ಮಜನು ಪುಳಕಿತನಾದನು. ಮತ್ತೆ ಮತ್ತೆ ಅವನನ್ನು ಆಲಂಗಿಸಿದನು. ಎಲ್ಲರೂ ಸಂತುಷ್ಟರಾದರು. ಇಂದ್ರನ ಸಾರಥಿಯನ್ನು ಕಳುಹಿಸಿಕೊಟ್ಟರು. ಅರ್ಜುನನಿಗೆ ಆರತಿ, ಅಕ್ಷತೆಗಳು ಸಂದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್. ಜಿ. ವಾಸುದೇವ್ ನಮ್ಮ ನಾಡಿನ ಅಪೂರ್ವ ಕಲಾವಿದರು.

Fri Mar 4 , 2022
ಎಸ್. ಜಿ. ವಾಸುದೇವ್ ನಮ್ಮ ನಾಡಿನ ಅಪೂರ್ವ ಕಲಾವಿದರು. ಎಸ್. ಜಿ. ವಾಸುದೇವ್ ಅವರು, ಎಸ್ ಕೆ. ಗೋಪಾಲ್ ಮತ್ತು ರತ್ನಮ್ಮ ದಂಪತಿಗಳ ಮಗನಾಗಿ 1941ರ ಮಾರ್ಚ್ 3ರಂದು ಮೈಸೂರಿನಲ್ಲಿ ಜನಿಸಿದರು. ಉತ್ತಮ ಭವಿಷ್ಯಕ್ಕಾಗಿ ವಿಜ್ಞಾನವನ್ನೇ ಓದಬೇಕಾಗಿದ್ದ ಒತ್ತಡವನ್ನು ವಾಸುದೇವ್ ಅವರೂ ಎದುರಿಸಿದ್ದರು. ಅನಿವಾರ್ಯವಾಗಿ ಬಿ.ಎಸ್‌ಸಿಗೆ ಸೇರಿದ್ದರು. ಆದರೆ ಚಿತ್ರ ಬಿಡಿಸುವಲ್ಲಿ ಇವರಿಗಿದ್ದ ಪ್ರತಿಭೆಯನ್ನು ಮನಗಂಡ ಕಲಾ ವಿಮರ್ಶಕ ಜಿ. ವೆಂಕಟಾಚಲಂ, ವಾಸು ಅವರ ತಂದೆತಾಯಿಗಳ ಮನ ಒಲಿಸಿದರು. ಜೊತೆಗೆ, […]

Advertisement

Wordpress Social Share Plugin powered by Ultimatelysocial