ಕೊರಟಗೆರೆ :- ಬೆಳಗಾವಿಯಲ್ಲಿ ಇತ್ತೀಚೆಗೆ ಎಂ.ಇ.ಎಸ್ ಪುಂಡರು ಕನ್ನಡ ಬಾವುಟವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೆಯೇ ಬಂಧಿಸಿರುವ ಕನ್ನಡಿಗರನ್ನು ಕೂಡಲೇ ಬಿಡುಗಡೆಗೊಳಿಸಬೇಕಾಗಿ ಕೊರಟಗೆರೆಯ ಕನ್ನಡಪರ ಸಂಘಟನೆಗಳು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು .ಕನ್ನಡಿಗರು ಮೌನವಾಗಿದ್ದರೆ ಎಂದರೆ ಶಾಂತ ರೀತಿಯಿಂದ ವರ್ತಿಸುವುದು ಕನ್ನಡಿಗರ ಹುಟ್ಟುಗುಣ ಅದನ್ನು ಎಮ್. ಇ.ಎಸ್ ಪುಂಡರು ಇನ್ನಿತರೆ ನಾಡ ದ್ರೋಹವನ್ನು ಬಗೆಯುತ್ತಿರುವ ಪುಂಡರು ದುರ್ಬಳಕೆ ಮಾಡಿಕೊಂಡರೆ ಸುಮ್ಮನೆ ಕೂರಲು ಇಲ್ಲಿ ಯಾರೂ ಹೇಡಿಗಳಿಲ್ಲ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ ಇದು ಹೀಗೆ ಮುಂದುವರಿದರೆ ಬೆಳಗಾವಿಯ ಗಡಿಭಾಗದಲ್ಲಿರುವ ಅವರ ಜಾಗಕ್ಕೆ ತೆರಳಿ ಇಂತಹ ಪುಂಡರಿಗೆ ತಕ್ಕ ಉತ್ತರ ಕೊಡಲು ತೊಡೆತಟ್ಟಿ ನಿಲ್ಲುತ್ತೇವೆ ಎಂದು ಎಚ್ಚರಿಕೆ ಸಂದೇಶವನ್ನು ಮಾನ್ಯ ಮುಖ್ಯಮಂತ್ರಿಯವರು ಕುಲಂಕುಷವಾಗಿ ಪರಿಶೀಲಿಸಿ ಇಂತಹ ಪುಂಡರನ್ನು ಬಂಧಿಸದಿದ್ದರೆ ಉಗ್ರ ಹೋರಾಟದ ಮೂಲಕ ಬೆಳಗಾವಿಯಲ್ಲೇ ಪುಂಡರಿಗೆ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada