ಮುಳಬಾಗಿಲು: ನಗರದ ಶ್ರೀಪಾದರಾಜರ ಮಠದ ಪೀಠಾಧ್ಯಕ್ಷ ಕೇಶವನಿಧಿ ತೀರ್ಥ ಶ್ರೀಪಾದಂ ಅವರು ಶುಕ್ರವಾರ ಹರಿಪಾದಸೇರಿದರು.ಬೆಂಗಳೂರಿನ ಚಾಮರಾಜಪೇಟೆಯ ಶ್ರೀಮಠದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಇಟ್ಟು ನಂತರ ಮುಳಬಾಗಿಲು ಮೂಲ ಮಠದ ಹೊರವಲಯದ ನರಸಿಂಹತೀರ್ಥದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಮಧ್ಯಾಹ್ನ ಬೃಂದಾವನ ಕಾರ್ಯಕ್ರಮ ನಡೆಯಿತು. ಮಠದ ಶ್ರೀಗಳಾದ ಸುಜಯನಿಧಿ ತೀರ್ಥರು ಬೃಂದಾವನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೇಶವನಿಧಿ ತೀರ್ಥ ಅವರ ಪೂರ್ವಾಶ್ರಮದ ಹೆಸರು ಕೆ. ಕೇಶವಮೂರ್ತಿ. ಬಿ.ಇ ಪದವೀಧರರಾಗಿದ್ದ ಶ್ರೀಗಳು 2009ರ ಮಾರ್ಚ್ 12ರಂದು ಮಠಾಧೀಶರಾಗಿ ಆಶ್ರಮ ದೀಕ್ಷೆ ಸ್ವೀಕರಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada