ಕೇಶವ ನಿಧಿ ತೀರ್ಥ ಸ್ವಾಮೀಜಿ ಲಿಂಗೈಕ್ಯ

ಮುಳಬಾಗಿಲು: ನಗರದ ಶ್ರೀಪಾದರಾಜರ ಮಠದ ಪೀಠಾಧ್ಯಕ್ಷ ಕೇಶವನಿಧಿ ತೀರ್ಥ ಶ್ರೀಪಾದಂ ಅವರು ಶುಕ್ರವಾರ ಹರಿಪಾದಸೇರಿದರು.ಬೆಂಗಳೂರಿನ ಚಾಮರಾಜಪೇಟೆಯ ಶ್ರೀಮಠದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಇಟ್ಟು ನಂತರ ಮುಳಬಾಗಿಲು ಮೂಲ ಮಠದ ಹೊರವಲಯದ ನರಸಿಂಹತೀರ್ಥದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಮಧ್ಯಾಹ್ನ ಬೃಂದಾವನ ಕಾರ್ಯಕ್ರಮ ನಡೆಯಿತು. ಮಠದ ಶ್ರೀಗಳಾದ ಸುಜಯನಿಧಿ ತೀರ್ಥರು ಬೃಂದಾವನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೇಶವನಿಧಿ ತೀರ್ಥ ಅವರ ಪೂರ್ವಾಶ್ರಮದ ಹೆಸರು ಕೆ. ಕೇಶವಮೂರ್ತಿ. ಬಿ.ಇ ಪದವೀಧರರಾಗಿದ್ದ ಶ್ರೀಗಳು 2009ರ ಮಾರ್ಚ್‌ 12ರಂದು ಮಠಾಧೀಶರಾಗಿ ಆಶ್ರಮ ದೀಕ್ಷೆ ಸ್ವೀಕರಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ʼಹೆಸರು ಬೇಳೆʼ ಹಲ್ವ ಮಾಡಿ ನೋಡಿ ?

Sun Jan 30 , 2022
ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, ಸಕ್ಕರೆ, ಒಣ ಹಣ್ಣುಗಳ ಮಿಶ್ರಣ ಇರುವುದರಿಂದ ಇದನ್ನು ಸವಿಯಲು ಖುಷಿ ಆಗುತ್ತದೆ.ಹಾಗಾದರೆ ಈ ಹಲ್ವಾ ತಯಾರಿಸುವುದು ಹೇಗೆ ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು ಹಳದಿ ಬಣ್ಣದ ಹೆಸರುಬೇಳೆ – 1 ಕಪ್ ನೀರು-1/2 ಕಪ್ ತುಪ್ಪ- 3/4 ಕಪ್ ಸಕ್ಕರೆ -1 […]

Advertisement

Wordpress Social Share Plugin powered by Ultimatelysocial