ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಪರವಾಗಿ ಖ್ಯಾತ ಚಿತ್ರನಟ ಕಿಚ್ಚ ಸುದೀಪ ಅವರು ಚುನಾವಣೆ ಪ್ರಚಾರ ನಡೆಸಿದರು. ಕಿಚ್ಚ ಸುದೀಪ ಅವರ ಆಗಮನದಿಂದ ಚುನಾವಣೆ ಪ್ರಚಾರ ರಂಗೇರಿತು ತೆರೆದ ವಾಹನದಲ್ಲಿ ಕಿಚ್ಚ ಸುದೀಪ ಅವರು ಡಾ. ರವಿ ಪಾಟೀಲ ಅವರ ಪಕ್ಕದಲ್ಲಿ ನಿಂತು ಕೈ ಬೀಸಿ ಅಭಿಮಾನಿಗಳ ಗಮನ ಸೆಳೆದರು ಅಭಿಮಾನಿಗಳು ಕೂಡ ಪುಷ್ಪಾರ್ಚನೆ ಮಾಡುವುದರ ಮೂಲಕ ಬರಮಾಡಿಕೊಂಡರು. ರ್ಯಾಲಿ ಮಾರ್ಗದುದ್ದಕ್ಕು ಭಾರಿ ಸಂಖ್ಯಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಂಡರು.ಅಭಿಮಾನಿಗಳ ಜೊತೆಗೆ ಕ್ಯಾಪ್ ಬಂದಲಿಸಿಕೊಂಡ ಅಭೀನಯ ಚಕ್ರವರ್ತಿ ಸುದೀಪ ಅಭಿಮಾನಿಗಳು ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದರು. ತೆರೆದ ವಾಹನದಲ್ಲಿ ಕಿಚ್ಚ ಸುದೀಪ ಅವರು ಒಂದೂವರೆ ಕಿಲೋಮೀಟರ ರ್ಯಾಲಿ ನಡೆಸಿದರು ಮತದಾರರಿಗೆ ಕೈ ಮುಗಿದು ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಪರವಾಗಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ, ಸಂಸದೆ ಮಂಗಳಾ ಅಂಗಡಿ , ಹಾಲಿ ಶಾಸಕ ಅನಿಲ ಬೇನಕೆ, ಮುರ್ಗೆಂದ್ರ ಗೌಡ ಪಾಟೀಲ ಮತ್ತು ಮುಖಂಡರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯಯಲ್ಲಿ ಭಾಗಿಯಾಗಿದರು.
https://play.google.com/store/apps/details?id=com.speed.newskannada