ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ. ಪವಿತ್ರ ಕೇಸರಿ ಬಟ್ಟೆ ಹಾಕಿ,ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದ್ದು,ಇಂತವರು ದೇಶಕ್ಕೆ ಉಪದೇಶ ಮಾಡಲು ಹೊರಟಿದ್ದಾರೆ ಎಂದು ಟೀಕೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸರಿಗೆ ಮಾಹಿತಿ ನಡೆದಿದ್ದ ಸ್ಯಾಂಟ್ರೋ ರವಿ, ತನ್ನನ್ನು ತಾನು ಬಿಜೆಪಿ ಕಾರ್ಯಕರ್ತ ಹೇಳಿದ್ದು, ಹಲವಾರು ಟ್ರಾನ್ಸ್ ಫರ್ ಮಾಡಿಸಿಕೊಟ್ಟಿದ್ದಾಗಿ ಹೇಳಿದ್ದಾನೆ. ಬಿಜೆಪಿಯವರು ಒಂದು ವಷ೯ದಿಂದ ಅವನನ್ನು ಬಿಟ್ಟು, ಇವಾಗ ಅರೆಸ್ಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಟೀಕೆ. ಕಲಬುರಗಿ:ಬಿಜೆಪಿ ಪಕ್ಷದವರು ಪವಿತ್ರವಾದ ಕೇಸರಿ ಬಟ್ಟೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೆ, ಸ್ಯಾಂಟ್ರೋ ರವಿಯ ದಂಧೆಯ ಬಗ್ಗೆ ವರ್ಷದ ಹಿಂದೆಯೇ ತಿಳಿದಿದ್ದರೂ ಆತನನ್ನು ಬಂಧಿಸದೇ ಇದ್ದ ಬಿಜೆಪಿ, ಈಗ ಆತನನ್ನು ಬಂಧಿಸುತ್ತೇವೆ ಎಂದು ಹೇಳುತ್ತಾ ನಾಟಕವಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಅವರು ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪವಿತ್ರ ಕೇಸರಿ ಬಟ್ಟೆ ಹಾಕಿ,ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದ್ದು,ಇಂತವರು ದೇಶಕ್ಕೆ ಉಪದೇಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಜಗದೀಶ್ ಎಂಬ ವ್ಯಕ್ತಿ ಕಳೆದ ಜನವರಿ 22 ರಂದು ಸ್ಯಾಂಟ್ರೋ ರವಿ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಯಾಂಟ್ರೋ ರವಿಯನ್ನು ವಿಚಾರಣೆಗೊಳಪಡಿಸಿದ್ದರು. ಆಗ, ಆತ ತಾನು ಬಿಜೆಪಿಯ ಸಕ್ರಿಯ ಕಾಯ೯ಕತ೯ನೆಂದು ಹೇಳಿಕೊಂಡಿದ್ದಾನೆ. ಇದರ ಜೊತೆಗೆ ತಾನು ಮೂರು ನಾಲ್ಕು ವರ್ಷಗಳ ಕಾಲದಿಂದಲೂ ಬಿಜೆಪಿ ಕಾಯ೯ಕತ೯ನಾಗಿ ಕೆಲಸ ಮಾಡುತ್ತಿದ್ದೆ. ಬಿಜೆಪಿಯ ಹಲವು ಶಾಸಕರು, ಸಚಿವರ ಜೊತೆಗೆ ನನ್ನ ಒಡನಾಟ ಇದ್ದು,ಹೀಗಾಗಿ ಹಲವು ಅಧಿಕಾರಿಗಳನ್ನು ವಗಾ೯ವಣೆ ಮಾಡಿಸಿದ್ದೇನೆ ಎಂದು ಪೋಲಿಸರ ಮುಂದೆ ಹೇಳಿದ್ದಾನೆ. ಬಿಜೆಪಿಯವರು ಒಂದು ವಷ೯ದಿಂದ ಅವನನ್ನು ಬಿಟ್ಟು, ಇವಾಗ ಅರೆಸ್ಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಹೇಳಿದರು.
https://play.google.com/store/apps/details?id=com.speed.newskannada