ಕನ್ನಡ ಹಾಡುಗಳಿಗೆ ಪಬ್, ಪಾರ್ಟಿಗಳಲ್ಲಿ ಸ್ಥಾನ ಇರಲಿಲ್ಲ. ಕೇವಲ ಹಿಂದಿ, ಇಂಗ್ಲಿಷ್ ಹಾಡುಗಳನ್ನು ಪಬ್, ಪಾರ್ಟಿಗಳಲ್ಲಿ ಪ್ರಸಾರ ಮಾಡುತ್ತಿದ್ದರು. ಆದರೆ, ಇದಕ್ಕೆ ಫುಲ್ಸ್ಟಾಪ್ ಇಟ್ಟಿದ್ದು ಚಂದನ್ ಶೆಟ್ಟಿ ಎಂದರೇ ತಪ್ಪಾಗಲ್ಲ.
ಯಾಕೆಂದರೆ ಇವರು ಮಾಡಿದ ‘ಮೂರೇ ಮೂರು ಪೆಗ್ಗಿ’ಗೆ ಹಾಡು ಇದೆಯಲ್ಲಾ ಅಬ್ಬಬ್ಬಾ..! ಯಾರು ಯೋಚನೆ ಮಾಡಿರದ ರೀತಿಯಲ್ಲಿ ಸಖತ್ ಹಿಟ್ ಆಗಿತ್ತು. ಕನ್ನಡ ಕೇಳಿಸದ ಪಬ್, ಪಾರ್ಟಿಗಳಲ್ಲಿ ಈ ಹಾಡು ಕೇಳಿಸಿತ್ತು. ಯಾವುದೇ ಪಾರ್ಟಿ ಇರಲಿ, ಅಲ್ಲಿ ಈ ಸಾಂಗ್ ಇರಲೇ ಬೇಕಿತ್ತು. ಇದಾದ ಬಳಿಕ ಪಕ್ಕಾ ಚಾಕೋಲೆಟ್ ಗರ್ಲ್ ಜೊತೆ ಬಂದಿದ್ದ ಚಂದನ್ ಶೆಟ್ಟಿ ಪಡ್ಡೆ ಹೈಕ್ಳ ಮನಗೆದ್ದಿದ್ದರು.
ಇತ್ತೀಚೆಗೆ ಪಾರ್ಟಿಫ್ರಿಕ್ಆಗಿದ್ದ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರನ್ನು ಮದುವೆಯಾದ ಬಳಿಕ ಫ್ಯಾಮಿಲ್ ಮ್ಯಾನ್ ಆಗಿದ್ದಾರೆ. ಆದರೆ ಈಗ ಅವರು 10 ರೂಪಾಯಿಗೆ ಸ್ವರ್ಗ ತೋರಿಸಿದ್ದಾರೆ. ಅರೇ, ಏನ್ ಹೇಳುತ್ತಾ ಇದ್ದೀವಿ ಅಂತ ಶಾಕ್ ಆಯ್ತಾ? ಇಲ್ಲ ಅದೇನು ಅಂದರೆ, ಚಂದನ್ ಶೆಟ್ಟಿ ಪ್ರತಿವರ್ಷ ಹೊಸ ವರ್ಷಕ್ಕೆ ಹೊಸ ಆಲ್ಬಮ್ ಸಾಂಗ್ ರಿಲೀಸ್ ಮಾಡುತ್ತಾರೆ. ಹಾಗೇ ಈ ವರ್ಷವೂ, ಅವರ ‘ಲಕ ಲಕ ಲ್ಯಾಂಬೋರ್ಗಿನಿ’ ಎಂಬ ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದಾರೆ. ರಿಲೀಸ್ ಆದ ಒಂದೇ ದಿನದಲ್ಲಿ ಎಲ್ಲರ ಬಾಯಲ್ಲೂ ‘ಲಕ ಲಕ’ದ್ದೇ ಮಾತು..!
`ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ಬೋಲ್ಡ್ ಲುಕ್ನಲ್ಲಿ ಬಂದ ರಚ್ಚು!
ಹೌದು, ರಚಿತಾ ರಾಮ್ ಜೊತೆ ಚಂದನ್ ಶೆಟ್ಟಿ ಹಾಡು ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಾದಾಗಲೇ ಈ ಬಾರಿ ಚರ್ಚೆಯಾಗಿತ್ತು. ಇದೀಗ ಹಾಡು ಬಿಡುಗಡೆಯಾಗಿದೆ. ಲಕ ಲಕ ಲ್ಯಾಂಬೋರ್ಗಿನಿ ಎಂಬ ಬೊಂಬಾಟ್ ಹಾಡನ್ನು ಖಾಸಗಿ ಹೋಟೆಲ್ವೊಂದರಲ್ಲಿ ಲಾಂಚ್ ಮಾಡಿದ್ದಾರೆ. 3 ಪೆಗ್, ಚಾಕೊಲೇಟ್ ಗರ್ಲ್, ಪಾರ್ಟಿ ಫ್ರೀಕ್ ಹೀಗೆ ಹಲವು ಆಲ್ಬಂ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ರ್ಯಾಪರ್ ಹಾಗೂ ಸಂಗೀತ ನಿರ್ದೇಶಕ ಅಂದರೆ ಅದು ಚಂದನ್ ಶೆಟ್ಟಿ. ಸಾಂಗ್ ರೀಲಿಸ್ ಆದಾಗಿನಿಂದಲೂ ಈ ಹಾಡು ಟ್ರೆಂಡಿಂಗ್ನಲ್ಲಿದೆ.
ಸಖತ್ ಬೋಲ್ಡ್ ಲುಕ್ನಲ್ಲಿ ಡಿಂಪಲ್ ಕ್ವೀನ್!
ಹೊಸ ಪಾರ್ಟಿ ಸಾಂಗ್ನಲ್ಲಿ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪಾರ್ಟಿ ಸಾಂಗ್ನಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರಂತೆ. ಈ ಹಾಡಿನ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಮ್ಯೂಸಿಕ್ ಆಲ್ಬಂ ಕ್ಷೇತ್ರಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದಾರೆ.
ಹಾಡಿನಲ್ಲಿ ರಚಿತಾ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಇನ್ನು ಸಂಗೀತ, ಸಾಹಿತ್ಯ, ಗಾಯನ ಜೊತೆಗೆ ರಚ್ಚು ಜೊತೆ ಚಂದನ್ ಶೆಟ್ಟಿ ಸಖತ್ ಸ್ಟೆಪ್ ಹಾಕಿದ್ದಾರೆ. ‘ಲಕ ಲಕ ಲ್ಯಾಂಬೋರ್ಗಿನಿ’ ಆಲ್ಬಂ ಹಾಡನ್ನ ಪ್ರಖ್ಯಾತ ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಸಿನಿಮಾ ನಿರ್ದೇಶನ ಜೊತೆಗೆ ಮೊದಲ ಬಾರಿಗೆ ಆಲ್ಬಂ ಹಾಡನ್ನ ನಿರ್ದೇಶನ ಮಾಡಿರೊದು ಹೊಸ ಅನುಭವ ಎಂದು ನಂದ ಕಿಶೋರ್ ಹೇಳಿದರು.
ಹುಬ್ಬಳ್ಳಿ: ಪಕ್ಷದ ಶಾಸಕರು ಹಾಗೂ ಸಚಿವರು ವೈಯಕ್ತಿಕವಾಗಿ ನೀಡುವ ಹೇಳಿಕೆಗಳು ಪಕ್ಷ ವಿರೋಧಿ ಚಟುವಟಿಕೆಯಾಗುವುದಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಸಂಪುಟದಲ್ಲಿರುವ ಹಿರಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆ ಕುರಿತು, ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗೆ ಮುಕ್ತ ಅವಕಾಶವಿದೆ. ಸಂಪುಟದಲ್ಲಿರುವ ಹಿರಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆ […]