ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಓಡಾಟ.

ಬೆಂಗಳೂರು :ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಓಡಾಟ ನಡೆಸಿದ್ಲು ಅಂತ ಕಾಲೇಜ್‌ ಕ್ಯಾಂಪಸ್‌ ಒಳಗೆ ನುಗ್ಗಿ ಪ್ರಿಯತಮೆಯನ್ನು ಚಾಕುವಿನಿಂದ ಚುಚ್ಚಿ ಕೊಲೆಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಇದೀಗ ಗುಣಮುಖನಾಗಿದ್ದು, ಡಿಸ್ಚಾರ್ಜ್ ಬೆನ್ನಲ್ಲೇ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ರಾಜಾನುಕುಂಟೆ ಪೊಲೀಸರಿಗೆ ಆರೋಪಿ ಕೊಟ್ಟ ಹೇಳಿಕೆ ಕೇಳಿ ಶಾಕ್ ಉಂಟುಮಾಡಿದೆ.

ಹೌದು… ಕಳೆದ ಕೆಲವು ದಿನಗಳ ಹಿಂದೆ ರಾಜಾನುಕುಂಟೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಕಾಲೇಜಿನ ಕ್ಯಾಂಪಸ್ ಒಳಗೆ ಲಯಸ್ಮಿತ ಎಂಬ ವಿದ್ಯಾರ್ಥಿನಿಯನ್ನು ಪವನ್‌ ಕಲ್ಯಾಣ್‌ ಎಂಬುವವನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಅಲ್ಲದೆ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಪವನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹದಿನಾರು ದಿನದ ಬಳಿಕ ಆರೋಪಿ ಪವನ್‌ ಬದುಕುಳಿದಿದ್ದಾನೆ. ಪವನ್‌ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಡಿಸ್ಚಾರ್ಜ್ ಬೆನ್ನಲ್ಲೇ ಆರೋಪಿಯನ್ನ ಬಂಧಿಸಿ ರಾಜಾನುಕುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆರೋಪಿ ಕೊಟ್ಟ ಹೇಳಿಕೆ ಕೇಳಿಯೇ ಪೊಲೀಸರು ಶಾಕ್ ನೀಡಿದೆ. ಮೂರು ವರ್ಷ ಪ್ರೀತಿ ಮಾಡಿ, ಆಮೇಲೆ ಮತ್ತೊಬ್ಬನ ಜೊತೆ ಓಡಾಡಿದ್ರೆ ಬಿಟ್ಬಿಡಬೇಕಾ ಸರ್ ಎಂದು ಆರೋಪಿ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾನೆ. ಅಲ್ಲದೆ, ನಾನು ಮೂರು ವರ್ಷಗಳಿಂದ ಲಯಸ್ಮಿತಳನ್ನ ಲವ್ ಮಾಡ್ತಿದ್ದೆ, ಅವಳೂ ನನ್ನ ಒಪ್ಪಿದ್ಲು. ಇತ್ತೀಚೆಗೆ ಬೇರೆ ಯುವಕನ ಜೊತೆ ಅವಳ ಓಡಾಟ, ಮಾತು ಹೆಚ್ಚಾಗಿತ್ತು.‌ ಇದರಿಂದ ನನ್ನ ಅವೈಡ್ ಮಾಡಿ ಧಿಡೀರ್ ಅಂತ ನಾನ್ ಇಷ್ಟ ಇಲ್ಲ ಅಂತ ಹೇಳ್ತಿದ್ಲು.

ಅದಕ್ಕೆ ನನಗೆ ಸಿಗದ ಪ್ರೀತಿ, ಅವಳು ಯಾರಿಗೂ ಸಿಗ್ಬಾರ್ದು ಅಂತ ನಿರ್ಧಾರ ಮಾಡಿದ್ದೆ. ಅವಳು ಇಲ್ಲದ ಮೇಲೆ ನಾನು ಸಾಯ್ಬೇಕಂತ ಡಿಸೈಡ್ ಮಾಡಿದ್ದೆ. ಅದಕ್ಕಾಗಿ ಮೆಜೆಸ್ಟಿಕ್‌ ಡಿ ಮಾರ್ಟ್ ನಲ್ಲಿ ಹರಿತವಾದ ಚಾಕು ಖರೀದಿಸಿದ್ದೆ. ಅವತ್ತು ಅವಳನ್ನ ಕೊಲ್ಲಬೇಕು ನಾನು ಸಾಯ್ಬೇಕು ಅಂತ ಡಿಸೈಡ್ ಮಾಡಿ ಕಾಲೇಜಿನ ಕ್ಯಾಂಪಸ್ ಬಳಿ ಹೋದೆ. ಎಷ್ಟು ಕರೆದು ಮಾತನಾಡಿಸಿದ್ರೂ ನನ್ನನ್ನು ಕೆಟ್ಟದಾಗಿ ಬೈದಿದ್ಲು..

ಅದಕ್ಕಾಗಿಯೇ ನಾನು ಮೊದಲೇ ತಂದಿದ್ದ ಚಾಕುವಿನಿಂದ ಮನಬಂದಂತೆ ಆಕೆಗೆ ಚುಚ್ಚಿದೆ. ಅವಳಿಗಾಗಿ ಎದೆ ಮೇಲೆ ಹಾರ್ಟ್ ಸಿಂಬಲ್ ಹಾಕಿಸಿಕೊಂಡು ಹೆಸರು ಸಹ ಹಚ್ಚೆ ಹಾಕಿಸಿಕೊಂಡಿದ್ದೆ. ಅದೇ ಜಾಗದಲ್ಲಿ ಚುಚ್ಚಿಕೊಂಡು ಸಾಯಲು ಮುಂದಾದೆ ಆದ್ರೆ, ನನ್ನ ಕೈಯಲ್ಲಿ ಸರಿಯಾಗಿ ಚುಚ್ಚಿಕೊಳ್ಳೋಕೆ ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಕೈ ಕೊಯ್ದುಕೊಂಡಿದ್ದೆ ಎಂದು ಆರೋಪಿ ಪವನ್‌ ತನ್ನ ಲವ್‌ ಕಹಾನಿಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಕಾಂತಾರ 2 ರಿಲೀಸ್ ಯಾವಾಗ..?

Sat Jan 21 , 2023
ಕಾಂತಾರ ಒಂದು ದಂತಕಥೆ ನೋಡಿದ ಪ್ರೇಕ್ಷಕರಿಗೆ ಕಾಂತಾರ 2 ನೋಡೋ ಆಸೆಯಾಗಿದೆ. ಕಾಂತಾರ ಚಿತ್ರತಂಡದ ಮೇಲೆ ದಿನ ಕಳೆದಂತೆ ನಿರೀಕ್ಷೆಯು ಹೆಚ್ಚಾಗುತ್ತಿದೆ. ಈ ಕಾಂತಾರ 2 ಕುತೂಹಲಕ್ಕೆ ಹೊಂಬಾಳೆ ಫಿಲ್ಮ್‌ನ ವಿಜಯ್ ಕಿರಂಗದೂರು ಅವರೇ ಸುಳಿವು ಬಿಟ್ಟು ಕೊಟ್ಟಿದ್ದು, ದೈವದ ಹರಕೆ ತೀರಿಸಿದ ನಟ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರಕ್ಕಾಗಿ ಪೆನ್ನು, ಪೇಪರ್ ಹಿಡಿದು ಕೂತಿದ್ದಾರಂತೆ. ಕಾಂತಾರ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರೆ ಕಾಂತಾರ 2 ಚಿತ್ರದಲ್ಲೂ ಅಭಿನಯಿಸೋದು […]

Advertisement

Wordpress Social Share Plugin powered by Ultimatelysocial