ಮಾಜಿ ಸಿಎಂ ಎಚ್​ಡಿಕೆ:ಕೆಲವು ಕಡೆ ನಮ್ಮ‌ ಬೆಂಬಲ ಸಿಗದೆ ಯಾವ ಪಕ್ಷವೂ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ;

ರಾಮನಗರ: 2023ರ ವಿಧಾನಸಭೆ ಚುನಾವಣೆಯ ಹೋರಾಟಕ್ಕೆ ಜನರು ಮಾನಸಿಕ ಶಕ್ತಿ‌ ತುಂಬಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬಿಡದಿಯ ಪುರಸಭೆ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ಬಿಡದಿಯ ಕೇತುಗಾನಗಳ್ಳಿ ತೋಟದ ಮನೆಯಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಎಚ್​ಡಿಕೆ, 18 ರಿಂ 20 ಸ್ಥಾನ ಗೆಲ್ಲುತ್ತೇವೆ ಅಂದುಕೊಂಡಿದ್ವಿ. ಆದರೆ, ಇದೀಗ 14 ಸ್ಥಾನಗಳನ್ನು ಗೆದ್ದಿದ್ದೇವೆ.

ಬಾನಂದೂರು ವ್ಯಾಪ್ತಿಯ ಎರಡು ಸ್ಥಾನಗಳು‌ ನಮ್ಮಿಂದಲೇ ಹೋಗಿದೆ. ಬಿಡದಿಯ ಮತದಾರರು ದುಡುಮೆಗೆ ಮತದಾನ ಮಾಡಿದ್ದಾರೆ ಎಂದರು.

ಬಿಡದಿಯಿಂದಲೇ ನನಗೆ ರಾಜಕೀಯ ಜನ್ಮ ಸಿಕ್ಕಿದ್ದು. ಅದು ಪುನರಾವರ್ತನೆಯಾಗಿದೆ. ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 2023 ರ ಚುನಾವಣೆಯ ಹೋರಾಟಕ್ಕೆ ಮಾನಸಿಕ ಶಕ್ತಿ‌ ತುಂಬಿದ್ದಾರೆ‌ ಎಂದರು.

ಕಾಂಗ್ರೆಸ್​ನವರು ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಜೆಡಿಎಸ್ ಪಕ್ಷವನ್ನು ಕೇತಿಗಾನಹಳ್ಳಿಯ ಹಳ್ಳಕ್ಕೆ ತೂಕುತ್ತೇವೆ ಅಂತಾ ಹೇಳ್ತಿದ್ರು. ಹಲವು ಕ್ಷೇತ್ರದಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಕೆಲವು ಕಡೆ ನಮ್ಮ‌ ಪಕ್ಷದ ಬೆಂಬಲ ಸಿಗದೆ ಯಾವ ಪಕ್ಷ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

BREAKING NEWS:ಕುಕನೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ;

Thu Dec 30 , 2021
ಕೊಪ್ಪಳ: ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿಯ 19 ಸ್ಥಾನಗಳಲ್ಲಿ ಕಾಂಗ್ರೆಸ್ 10, ಬಿಜೆಪಿ 9 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರ ಸ್ವಕ್ಷೇತ್ರದಲ್ಲಿಯೇ ಹಿನ್ನಡೆ ಆಗಿರುವುದು ಬಿಜೆಪಿಗೆ ತೀವ್ರ ಮುಜಗುರ ತಂದಿದೆ. ಮಾಜಿ ಸಚಿವ ಬಸವರಾಜ ರಾಯರಡ್ಡಿ ಕೊನೆಯ ಕ್ಷಣದಲ್ಲಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial