ಬೆಂಗಳೂರು: ತಾಯಿ ಬೈದಿದಕ್ಕೆ ಮಗ ನೇಣಿಗೆ ಶರಣಾಗಿರುವ ಘಟನೆ ಸುಂಕದಕಟ್ಟೆ ಬಳಿಯ ಶ್ರೀನಿವಾಸ್ ನಗರದ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ನಡೆದಿದೆ. ಸಂಜಯ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಕಳೆದ ಮೂರು ದಿನಗಳಿಂದ ಮಗ ಸಂಜಯ್ ಮನೆಗೆ ಬಂದಿರಲಿಲ್ಲ.
ಯಾವುದೇ ಕೆಲಸಕ್ಕೆ ಹೋಗದೆ ಅಲೆದಾಡುತ್ತಿದ್ದ. ಹೀಗಾಗಿ ತಂದೆ ತಾಯಿ ಮಗ ಸಂಜಯ್ ಗೆ ಬೈಯ್ದು ಬುದ್ದಿವಾದ ಹೇಳಿದ್ದರು. ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನು ಬೈದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ತಂದೆ ತಡೆದು ಮಗನಿಗೆ ಏಟು ಕೂಡ ಒಡೆದಿದ್ದರು. ಇದರಿಂದ ಬೇಜಾರಾಗಿದ್ದ ಸಂಜಯ್, ರಾತ್ರಿ ಎಲ್ಲಾ ಮಲಗಿದ್ದ ವೇಳೆ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us:
Mon Mar 14 , 2022
ಅಬ್ಬರದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಶ್ರೀಲಂಕಾ ವಿರುದ್ಧದ ಡೇ/ನೈಟ್ ಪಂದ್ಯದ ಎರಡನೇ ದಿನದಂದು ಭಾರತೀಯ ಆಟಗಾರ ಕಪಿಲ್ ದೇವ್ ಅವರ 40 ವರ್ಷಗಳ ಹಿಂದಿನ ವೇಗದ ಟೆಸ್ಟ್ ಅರ್ಧಶತಕದ ದಾಖಲೆಯನ್ನು ಭಾನುವಾರ ಮುರಿದರು. ಭಾರತದ ಎರಡನೇ ಇನ್ನಿಂಗ್ಸ್ನ 42ನೇ ಓವರ್ನಲ್ಲಿ ಪ್ರವೀಣ್ ಜಯವಿಕ್ರಮ ಎಸೆತವನ್ನು ಎಕ್ಸ್ಟ್ರಾ ಕವರ್ ಬೌಂಡರಿ ಮೂಲಕ ಹೊಡೆದಾಗ ಡ್ಯಾಶಿಂಗ್ ಎಡಗೈ ಆಟಗಾರ 28 ಎಸೆತಗಳಲ್ಲಿ (7×4, 2×6) ಅರ್ಧಶತಕ ಗಳಿಸಿದರು. ಭಾರತದ ಮೊದಲ ವಿಶ್ವಕಪ್ […]