ಮಂಡ್ಯ: ಜಿಲ್ಲೆಯಲ್ಲಿ 5 ರೂ ಗೆ ಚಿಕಿತ್ಸೆ ನೀಡುವ ಮೂಲಕ, ಪ್ರಸಿದ್ಧಿಗಳಿಸಿದ್ದಂತ ಐದು ರೂ ವೈದ್ಯ ಡಾ.ಶಂಕರೇಗೌಡ್ರು ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೇ.. ಸೋಷಿಯಲ್ ಮೀಡಿಯಾದಲ್ಲಿ ಅವರು ಇನ್ನಿಲ್ಲ ಎಂಬುದಾಗಿ ಸುದ್ದಿ ಹರಿದಾಡುತ್ತಿತ್ತು.ಈ ಬಗ್ಗೆ ಅವರ ಪತ್ನಿ ಸುಳ್ಳು ಸುದ್ದಿ. ಡಾಕ್ಟರ್ ಚೆನ್ನಾಗಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.ಈ ಕುರಿತು ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ಡಾ.ಶಂಕರೇಗೌಡ್ರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪೊರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಇನ್ನಿಲ್ಲ, ನಿಧನ ಎನ್ನುವಂತ ಸುದ್ದಿ ಹರಿದಾಡುತ್ತಿರುವುದನ್ನು ಕೇಳಿ ಬೇಸರವಾಗಿದೆ ಎಂದರು.ಅವರು ಹುಷಾರಾಗಿದ್ದಾರೆ.. ಹುಷಾರು ಆಗ್ತಾ ಇದ್ದಾರೆ. ಜವಳಿಯವರ ಸಾರತ್ಯದಲ್ಲಿ ಸರ್ಜರಿ ಮಾಡಿಸೋ ಕಾರಣದಿಂದ ಮೈಸೂರಿನ ಅಪೊಲೋ ಆಸ್ಪತ್ರೆಯಿಂದ, ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಸರ್ಜರಿಗೂ ಒಳಗಾಗಲಿದ್ದಾರೆ. ಮಂಡ್ಯದಿಂದ ಆಂಬುಲೆನ್ಸ್ ಮೂಲಕ ಡಾಕ್ಟರ್ ಕರೆತರಲು ಜನರು ಎಲ್ಲಾ ರೀತಿಯ ನೆರವಾಗಿದ್ದಾರೆ. ಅವರಿಗೆ ಧನ್ಯವಾದಗಳು. ದಯವಿಟ್ಟು ಯಾರೂ ಸುಳ್ಳು ಸುದ್ದಿ ಹಾಕಬೇಡಿ ಎಂಬುದಾಗಿ ಮನವಿ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada