ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಇಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳೂರು ನಗರದ ಹೊರವಲಯದ ಉಳ್ಳಾಲದಲ್ಲಿರುವ ಕಡಲ್ಕೊರೆತ ಪ್ರದೇಶದಲ್ಲಿರುವ ಸಂತ್ರಸ್ತರ ಜೊತೆಗೆ ವೀರಪ್ಪ ಮೊಯ್ಲಿ ಮಾತುಕತೆ ನಡೆಸಿ ಮಾಹಿತಿ ಪಡೆದ್ರು. ವೀರಪ್ಪ ಮೊಯ್ಲಿ ಜೊತೆಗೆ ಶಾಸಕ ಯುಟಿ ಖಾದರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇನ್ನು ಕಡಲ್ಕೊರೆತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮೊಯ್ಲಿಯವ್ರು, ನಮ್ಮ ಸರ್ಕಾರ ಇದ್ದಾಗ ತುರ್ತು ಕ್ರಮ ತೆಗೆದುಕೊಳ್ಳುತ್ತಿದ್ದೇವು. ಕಡಲ್ಕೊರೆತ ಎದುರಿಸಲು ವರ್ಷ ವರ್ಷ ಖರ್ಚು ಮಾಡಲೇಬೇಕು. ಮೂರು ವರ್ಷಗಳಿಂದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ. ಇನ್ನು ಇಲ್ಲಿನ ಸಮಸ್ಯೆ ಪರಿಹಾರ ಬಗ್ಗೆ ಸಿಎಂ ಜೊತೆಗೆ ನಾನು ಮಾತನಾಡ್ತೀನಿ ಕಡಲ್ಕೊರೆತದಿಂದ ಸ್ಥಳೀಯ ಜನರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಅಂದ್ರು.
ಬೈಟ್: ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: